ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌, ಯುಪಿ ಯೋಧ ಸೆಮಿಫೈನಲ್‌ ಪ್ರವೇಶ

ಬುಧವಾರ ಸೆಮಿಫೆನಲ್ಸ್‌ 1. ಪಾಟ್ನಾ ಪೈರೇಟ್ಸ್‌-ಯುಪಿ ಯೋಧ 2. ದಿಲ್ಲಿ-ಬುಲ್ಸ್‌

Team Udayavani, Feb 21, 2022, 10:24 PM IST

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌, ಯುಪಿ ಯೋಧ ಸೆಮಿಫೈನಲ್‌ ಪ್ರವೇಶ

ಬೆಂಗಳೂರು: ಪ್ರೊ ಕಬಡ್ಡಿ ಎಲಿಮಿನೇಟರ್‌ ಪಂದ್ಯಗಳಲ್ಲಿ ಜಯ ಸಾಧಿಸಿದ ಯುಪಿ ಯೋಧ ಮತ್ತು ಬೆಂಗಳೂರು ಬುಲ್ಸ್‌ ತಂಡಗಳು ಸೆಮಿಫೈನಲ್‌ಗೆ ಲಗ್ಗೆ ಇರಿಸಿವೆ.

ಬುಧವಾರದ ಉಪಾಂತ್ಯದಲ್ಲಿ ಈ ತಂಡಗಳು ಕ್ರಮವಾಗಿ ಪಾಟ್ನಾ ಪೈರೇಟ್ಸ್‌ ಮತ್ತು ದಬಾಂಗ್‌ ದಿಲ್ಲಿ ವಿರುದ್ಧ ಸೆಣಸಲಿವೆ. ಈ ತಂಡಗಳು ಲೀಗ್‌ ಹಂತದ ಮೊದಲೆರಡು ಸ್ಥಾನ ಅಲಂಕರಿಸಿ ನೇರವಾಗಿ ಸೆಮಿಫೈನಲ್‌ ತಲುಪಿದ್ದವು.
ಸೋಮವಾರದ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಯುಪಿ ಯೋಧ 42-31 ಅಂಕಗಳಿಂದ ಪುನೇರಿ ಪಲ್ಟಾನ್‌ ಆಟವನ್ನು ಮುಗಿಸಿತು. ಬಳಿಕ ಆತಿಥೇಯ ಬೆಂಗಳೂರು ಬುಲ್ಸ್‌ 49-29 ಅಂತರದಿಂದ ಗುಜರಾತ್‌ ಜೈಂಟ್ಸ್‌ಗೆ ಆಘಾತವಿಕ್ಕಿತು.

ಸಂಘಟಿತ ಹೋರಾಟ
ಪವನ್‌ ಸೆಹ್ರಾವತ್‌ ಕಪ್ತಾನನ ಆಟವಾಡಿದ್ದು (13), ರೈಡರ್‌ ಚಂದ್ರನ್‌ ರಂಜಿತ್‌ (7) ಸರಿಯಾದ ಹೊತ್ತಿನಲ್ಲಿ ಮಿಂಚಿದ್ದೆಲ್ಲ ಬುಲ್ಸ್‌ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿತು. ಡಿಫೆಂಡರ್‌ ಮಹೇಂದರ್‌ ಸಿಂಗ್‌ (5), ರೈಡರ್‌ ಭರತ್‌ (6) ಕೂಡ ಉಪಯುಕ್ತ ಪ್ರದರ್ಶನ ನೀಡಿದರು. ಇವರಲ್ಲಿ ರಂಜಿತ್‌, ಮಹೇಂದರ್‌ ಲೀಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಿರಲಿಲ್ಲ. ಆದರೆ ಸೆಮಿಫೈನಲ್‌ನಲ್ಲಿ ತಂಡದ ಕೈ ಬಿಡಲಿಲ್ಲ.

ಲೀಗ್‌ ಹಂತದ 5ನೇ ಸ್ಥಾನಿಯಾಗಿ ಎಲಿಮಿನೇಟರ್‌ ಸುತ್ತಿಗೆ ಬಂದ ಬುಲ್ಸ್‌ ಸಾಂ ಕ ಆಟವಾಡಿ ಆರಂಭದಿಂದಲೇ ಮೇಲುಗೈ ಸಾಧಿಸುತ್ತ ಬಂತು. ವಿರಾಮದ ವೇಳೆ 24-17 ಅಂತರದ ಉತ್ತಮ ಮುನ್ನಡೆಯನ್ನು ಗಳಿಸಿಕೊಂಡಿತು. ದ್ವಿತೀಯಾರ್ಧದಲ್ಲಿ ಇನ್ನಷ್ಟು ಚೇತೋಹಾರಿ ಪ್ರದರ್ಶನ ನೀಡಿತು.

ಗುಜರಾತ್‌ ಜೈಂಟ್ಸ್‌ ಲೀಗ್‌ನಲ್ಲಿ 4ನೇ ಸ್ಥಾನದಲ್ಲಿತ್ತು. ಆದರೆ ಬುಲ್ಸ್‌ ಆಕ್ರಮಣಕ್ಕೆ ತಲೆಬಾಗಿತು. ಗುಜರಾತ್‌ ಪರ ರೈಡರ್‌ಗಳಾದ ರಾಕೇಶ್‌ (8) ಮತ್ತು ಮಹೇಂದ್ರ ರಜಪೂತ್‌ (5) ಉಳಿದವರಿಂದ ಗಮನಾರ್ಹ ಪ್ರದರ್ಶನ ಮೂಡಿಬರಲಿಲ್ಲ.

ಯೋಧರ ಗೆಲುವಿನ ಆಟ
ಅದೃಷ್ಟದ ಬಲದಿಂದ ಎಲಿಮಿನೇಟರ್‌ ಸುತ್ತಿಗೆ ಬಂದ ಪುನೇರಿ ಪಲ್ಟಾನ್‌ ಆಟ ಯುಪಿ ಯೋಧ ವಿರುದ್ಧ ನಡೆಯಲಿಲ್ಲ. ಆರಂಭದ 4 ನಿಮಿಷದಲ್ಲಷ್ಟೇ ಮೇಲುಗೈ ಹೊಂದಿದ್ದ ಪುನೇರಿ, ಪಂದ್ಯದ 13ನೇ ನಿಮಿಷದಲ್ಲೊಮ್ಮೆ 10-10 ಸಮಬಲ ಸಾಧಿಸಿತು. ಅನಂತರ ಯುಪಿ ಯೋಧರ ಆಕ್ರಮಣಕ್ಕೆ ತತ್ತರಿಸಿತು. ವಿರಾಮದ ವೇಳೆ ಯುಪಿ25-17ರ ಲೀಡ್‌ ಹೊಂದಿತ್ತು.

ರೈಡರ್‌ ಪ್ರದೀಪ್‌ ನರ್ವಾಲ್‌ ಅಮೋಘ ಆಟದ ಮೂಲಕ ಯೋಧ ತಂಡಕ್ಕೆ ಶಕ್ತಿ ತುಂಬಿದರು. ಅವರ ಗಳಿಕೆ 18 ಅಂಕ. ಮತ್ತೋರ್ವ ರೈಡರ್‌ ಸುರೇಂದರ್‌ ಗಿಲ್‌ ಹಾಗೂ ಡಿಫೆಂಡರ್‌ ಸುಮಿತ್‌ ತಲಾ 5 ಅಂಕ ಗಳಿಸಿದರು. ಪುನೇರಿ ತಂಡದ ಪರ ಮಿಂಚಿದ್ದು ರೈಡರ್‌ ಅಸ್ಲಾಮ್‌ ಇನಾಮಾªರ್‌. ಅವರಿಂದ 10 ಅಂಕ ಬಂತು.

ಪಂದ್ಯದ ಮೊದಲಾರ್ಧದಲ್ಲಿ ಎರಡು ಬಾರಿ ಆಲೌಟಾದ ಪುನೇರಿ, ದ್ವಿತೀಯಾರ್ಧದ ಆರಂಭದಲ್ಲೇ ಮತ್ತೆ ಆಲೌಟಾಯಿತು. ಅಲ್ಲಿಗೆ ತಂಡದ ಪರಿಸ್ಥಿತಿ ಸಂಪೂರ್ಣ ಹಳಿತಪ್ಪಿತು.

ಟಾಪ್ ನ್ಯೂಸ್

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.