ರಣಜಿ: ರೈಲ್ವೇಸ್‌ ತಂಡದ ಹಳಿ ತಪ್ಪಿಸಿದ ಜೈನ್‌, ಮಿಥುನ್‌


Team Udayavani, Jan 28, 2020, 12:24 AM IST

railways

ಹೊಸದಿಲ್ಲಿ: ಪ್ರತೀಕ್‌ ಜೈನ್‌ ಮತ್ತು ಅಭಿಮನ್ಯು ಮಿಥುನ್‌ ಅವರ ಘಾತಕ ಬೌಲಿಂಗ್‌ ದಾಳಿಗೆ ಸಿಲುಕಿದ ರೈಲ್ವೇಸ್‌ ಮೊದಲ ದಿನವೇ ಹಳಿ ತಪ್ಪಿದೆ. ರಣಜಿ ಲೀಗ್‌ ಪಂದ್ಯದ ಮೊದಲ ದಿನದ ಆಟದ ಅಂತ್ಯಕ್ಕೆ 98 ರನ್ನಿಗೆ 6 ವಿಕೆಟ್‌ ಕಳೆದುಕೊಂಡು ತೀವ್ರ ಆಘಾತ ಅನುಭವಿಸಿದೆ.

ಪ್ರತಿಕೂಲ ಹವಾಮಾನದಿಂದಾಗಿ ಮೊದಲ ದಿನ ಕೇವಲ 49 ಓವರ್‌ಗಳ ಆಟವಷ್ಟೇ ಸಾಧ್ಯವಾಯಿತು. ಈ ಅವಧಿಯಲ್ಲಿ ಪ್ರತೀಕ್‌ ಜೈನ್‌ ಅಮೋಘ ದಾಳಿ ಸಂಘಟಿಸಿ 14ಕ್ಕೆ 4 ವಿಕೆಟ್‌ ಉಡಾಯಿಸಿದರು. ಉಳಿದೆರಡು ವಿಕೆಟ್‌ ಅಭಿಮನ್ಯು ಮಿಥುನ್‌ ಪಾಲಾಯಿತು.

ಟಾಸ್‌ ಸೋತು ಮೊದಲು ಬ್ಯಾಟಿಂಗಿಗೆ ಇಳಿಸಲ್ಪಟ್ಟ ರೈಲ್ವೇಸ್‌ 3ನೇ ಓವರಿನಿಂದಲೇ ಕುಸಿತ ಕಾಣಲಾರಂಭಿಸಿತು. 45 ರನ್‌ ಆಗುವಷ್ಟರಲ್ಲಿ 6 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ನಾಯಕ ಅರಿಂದಮ್‌ ಘೋಷ್‌ (ಬ್ಯಾಟಿಂಗ್‌ 32) ಹಾಗೂ ಅವಿನಾಶ್‌ ಯಾದವ್‌ (ಬ್ಯಾಟಿಂಗ್‌ 29) ಎಚ್ಚರಿಕೆಯ ಬ್ಯಾಟಿಂಗ್‌ ನಡೆಸಿ ತಂಡವನ್ನು ಆಧರಿಸಿದರು.

ತತ್ತರಿಸಿದ ರೈಲ್ವೇಸ್‌ ಬ್ಯಾಟಿಂಗ್‌
ರೈಲ್ವೇಸ್‌ ಮೇಲೆ ಮಧ್ಯಮ ವೇಗಿ ಪ್ರತೀಕ್‌ ಜೈನ್‌ ಮಿಂಚಿನ ಬೌಲಿಂಗ್‌ ದಾಳಿ ನಡೆಸಿದರು. ಮತ್ತೂಂದು ಕಡೆಯಿಂದ ಅನುಭವಿ ಬೌಲರ್‌ ವೇಗಿ ಅಭಿಮನ್ಯು ಮಿಥುನ್‌ ಕೂಡ ಕಂಟಕವಾಗಿ ಪರಿಣಮಿಸಿದರು. ಇವರಿಬ್ಬರ ಬೌಲಿಂಗ್‌ ಆಕ್ರಮಣಕ್ಕೆ ಸಿಲುಕಿ ರೈಲ್ವೇಸ್‌ ಬ್ಯಾಟ್ಸ್‌ಮನ್‌ಗಳು ದಿಕ್ಕಾಪಾಲಾದರು.

ಆರಂಭಿಕರಾದ ಮೃಣಾಲ್‌ ದೇವಧರ್‌ (12) ಹಾಗೂ ಆಶಿಷ್‌ ಸೆಹ್ರಾವತ್‌ (0) 20 ರನ್‌ ಆಗುವಷ್ಟರಲ್ಲಿ ಪೆವಿಲಿಯನ್‌ ಸೇರಿ ಆಗಿತ್ತು. ಸ್ಕೋರ್‌ 23ಕ್ಕೆ ಏರುವಷ್ಟರಲ್ಲಿ ಸೌರಭ್‌ ಸಿಂಗ್‌ (7) ಹಾಗೂ ಮಹೇಶ್‌ ರಾವತ್‌ (0) ಬೆನ್ನು ಬೆನ್ನಿಗೆ ಔಟ್‌ ಆಗಿ ಹೊರನಡೆದರು. ಇಬ್ಬರನ್ನೂ ಪ್ರತೀಕ್‌ ಜೈನ್‌ ಕ್ಲೀನ್‌ ಬೌಲ್ಡ್‌ ಮಾಡಿದರು. ದಿನೇಶ್‌ ಮೋರ್‌ (4) ಅವರಿಗೂ ಜೈನ್‌ ಎಸೆತ ಕಗ್ಗಂಟಾಗಿ ಪರಿಣಮಿಸಿತು. ರೈಲ್ವೇಸ್‌ನ ಅರ್ಧದಷ್ಟು ಮಂದಿ 29 ರನ್ನಿಗೆ ಆಟ ಮುಗಿಸಿದರು. ಹರ್ಷ ತ್ಯಾಗಿ (9) ವಿಕೆಟ್‌ ಕಿತ್ತ ಮಿಥುನ್‌ ರೈಲ್ವೇಸ್‌ಗೆ ಮತ್ತೂಂದು ಆಘಾತವಿಕ್ಕಿದರು. 45ಕ್ಕೆ 6 ವಿಕೆಟ್‌ ಉರುಳಿತು.

ಸಂಕ್ಷಿಪ್ತ ಸ್ಕೋರ್‌: ರೈಲ್ವೇಸ್‌-6 ವಿಕೆಟಿಗೆ 98 (ಘೋಷ್‌ ಬ್ಯಾಟಿಂಗ್‌ 32, ಯಾದವ್‌
ಬ್ಯಾಟಿಂಗ್‌ 29, ದೇವಧರ್‌ 12, ಜೈನ್‌ 14ಕ್ಕೆ 4, ಮಿಥುನ್‌ 18ಕ್ಕೆ 2).

ಅರಿಂದಮ್‌-ಅವಿನಾಶ್‌ ಹೋರಾಟ
ರೈಲ್ವೇಸ್‌ ನಿರಂತರ ವಿಕೆಟ್‌ ಕಳೆದುಕೊಳ್ಳುತ್ತ ಹೋದಾಗ 7ನೇ ವಿಕೆಟಿಗೆ ಜತೆಗೂಡಿದ ಅರಿಂದಮ್‌ ಘೋಷ್‌-ಅವಿನಾಶ್‌ ಯಾದವ್‌ ಕ್ರೀಸ್‌ ಆಕ್ರಮಿಸಿಕೊಂಡರು. 24.5 ಓವರ್‌ ನಿಭಾಯಿಸಿ 7ನೇ ವಿಕೆಟಿಗೆ 53 ರನ್‌ ಜತೆಯಾಟ ನಿರ್ವಹಿಸಿದರು. ಘೋಷ್‌ 32 ರನ್ನಿಗೆ 88 ಎಸೆತ ಎದುರಿಸಿದ್ದಾರೆ. ಇದರಲ್ಲಿ 4 ಬೌಂಡರಿ ಸೇರಿದೆ. ಯಾದವ್‌ 92 ಎಸೆತ ಎದುರಿಸಿ 29 ಮಾಡಿದ್ದಾರೆ (5 ಬೌಂಡರಿ). ಸದ್ಯ ಪ್ರತಿಕೂಲ ಹವಾಮಾನ ರೈಲ್ವೇಸ್‌ ನೆರವಿಗೆ ಬಂದಿದೆ.

ಟಾಪ್ ನ್ಯೂಸ್

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.