ಮಳೆ ಪಂದ್ಯದಲ್ಲಿ ಭಾರತಕ್ಕೆ ಗೆಲುವು


Team Udayavani, Oct 8, 2017, 6:00 AM IST

PTI10_7_2017_000134A.jpg

ರಾಂಚಿ: ಮಳೆಯಿಂದ ತೊಂದರೆ ಗೊಳಗಾದ ರಾಂಚಿ ಟ್ವೆಂಟಿ 20 ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯ ತಂಡವನ್ನು ಡಕ್‌ವರ್ತ್‌ ಲೂಯಿಸ್‌ ನಿಯಮದಡಿ 9 ವಿಕೆಟ್‌ಗಳಿಂದ ಸೋಲಿಸಿದೆ.

ಭಾರತೀಯ ಬೌಲರ್‌ಗಳ ಮಾರಕ ದಾಳಿಗೆ ಕುಸಿದ ಆಸ್ಟ್ರೇಲಿಯವು 18.4 ಓವರ್‌ಗಳಲ್ಲಿ 8 ವಿಕೆಟಿಗೆ 118 ರನ್‌ ಗಳಿಸಿದ ವೇಳೆ ಮಳೆ ಸುರಿದ ಕಾರಣ ಅಲ್ಲಿಗೆ ಪ್ರವಾಸಿಗರ ಇನ್ನಿಂಗ್ಸ್‌ ಅನ್ನು ಅಂತ್ಯಗೊಳಿಸಲಾಯಿತು. ಆಬಳಿಕ ಡಕ್‌ವರ್ತ್‌ ಲೂಯಿಸ್‌ ನಿಯಮದಡಿ ಭಾರತ ಗೆಲ್ಲಲು 6 ಓವರ್‌ಗಳಲ್ಲಿ 48 ರನ್‌ ಗಳಿಸುವ ಗುರಿ ನೀಡಲಾಯಿತು.
 
ವಿರಾಟ್‌ ಕೊಹ್ಲಿ ಅವರ ಬಿರುಸಿನ ಆಟ ದಿಂದಾಗಿ ಭಾರತವು 5.3 ಓವರ್‌ಗಳಲ್ಲಿ ಒಂದು ವಿಕೆಟಿಗೆ 49 ರನ್‌ ಗಳಿಸಿ ಜಯಭೇರಿ ಬಾರಿಸಿತು. ಕೊಹ್ಲಿ 14 ಎಸೆತಗಳಿಂದ 22 ರನ್‌ ಹೊಡೆದರು.

ಮೊದಲ ಓವರಿನಲ್ಲೇ ಆಘಾತ
ಸ್ಟೀವ್‌ ಸ್ಮಿತ್‌ ಗೈರಲ್ಲಿ ನಾಯಕನಾಗಿ ಕಣಕ್ಕಿಳಿದ ಡೇವಿಡ್‌ ವಾರ್ನರ್‌ ಮೊದಲ ಓವರಿನಲ್ಲೇ 2 ಬೌಂಡರಿ ಬಾರಿಸಿ ಅಬ್ಬರಿಸಿದರೂ ಭುವನೇಶ್ವರ್‌ ಅವರ ಅದೇ ಓವರಿನ 5ನೇ ಎಸೆತದಲ್ಲಿ ಬೌಲ್ಡ್‌ ಆಗಿ ನಿರ್ಗಮಿಸಿದರು. ಆಸೀಸ್‌ಗೆ ಆರಂಭದಲ್ಲೇ ದೊಡ್ಡ ಕಂಟಕ ಎದುರಾಯಿತು.

ಈ ಸಂದರ್ಭದಲ್ಲಿ ಸ್ಫೋಟಕ ಬ್ಯಾಟ್ಸ್‌ಮನ್‌ ಬಡ್ತಿ ಪಡೆದು ಬಂದರು. ಏಕದಿನ ಸರಣಿಯಲ್ಲಿ ಅಬ್ಬರಿಸಲು ವಿಫ‌ಲರಾಗಿದ್ದ ಮ್ಯಾಕ್ಸ್‌ವೆಲ್‌ ಇಲ್ಲಿಯೂ ನೈಜ ಆಟಕ್ಕೆ ಕುದುರಲಿಲ್ಲ. ಅವರಿಗೆ ಮತ್ತೆ ಚಾಹಲ್‌ ದುಃಸ್ವಪ್ನವಾಗಿ ಕಾಡಿದರು. 16 ಎಸೆತಗಳಿಂದ 17 ರನ್‌ ಮಾಡಿದ “ಮ್ಯಾಕ್ಸಿ’ 7ನೇ ಓವರಿನಲ್ಲಿ ದೊಡ್ಡ ಹೊಡೆತ ಬಾರಿಸಲು ಹೋಗಿ ಮಿಡ್‌ ವಿಕೆಟ್‌ನಲ್ಲಿದ್ದ ಬುಮ್ರಾಗೆ ಕ್ಯಾಚಿತ್ತರು. ಇದರೊಂದಿಗೆ ಈ ಪ್ರವಾಸದ ನಾಲ್ಕೂ ಪಂದ್ಯಗಳಲ್ಲಿ ಮ್ಯಾಕ್ಸ್‌ವೆಲ್‌ ವಿಕೆಟ್‌ ಹಾರಿಸಿದ ಹೆಗ್ಗಳಿಕೆ ಚಾಹಲ್‌ ಅವರದಾಯಿತು. ಈ ನಡುವೆ ಫಿಂಚ್‌-ಮ್ಯಾಕ್ಸ್‌ವೆಲ್‌ ಜತೆ ಯಾಟದಲ್ಲಿ 47 ರನ್‌ ಬಂದಿತ್ತು.

ಇನ್ನೊಂದು ತುದಿಯಲ್ಲಿ ಕ್ರೀಸ್‌ ಆಕ್ರಮಿಸಿ ಕೊಂಡಿದ್ದ ಆರನ್‌ ಫಿಂಚ್‌ ಅಪಾಯಕಾರಿಯಾಗಿ ಗೋಚರಿಸಿದ್ದರು. ಆಸೀಸ್‌ ಸರದಿಯನ್ನು ಬೆಳೆಸುವ ಯೋಜನೆ ಅವರದಾಗಿತ್ತು. ಆದರೆ 10ನೇ ಓವರ್‌ನಲ್ಲಿ ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಆಸೀಸ್‌ ಆರಂಭಿಕನ ಸ್ಟಂಪ್‌ ಎಗರಿಸಿ ಭಾರತಕ್ಕೆ ದೊಡ್ಡದೊಂದು ರಿಲೀಫ್ ಕೊಟ್ಟರು. ಫಿಂಚ್‌ ಗಳಿಕೆ 30 ಎಸೆತಗಳಿಂದ 42 ರನ್‌. ಬೀಸಿದ್ದು 4 ಬೌಂಡರಿ ಹಾಗೂ ಒಂದು ಸಿಕ್ಸರ್‌. 

ಕುಲದೀಪ್‌ ಅವರ ಮುಂದಿನ ಬೇಟೆ ಮೊಸಸ್‌ ಹೆನ್ರಿಕ್ಸ್‌. ಕೇವಲ 8 ರನ್‌ ಮಾಡಿದ ಹೆನ್ರಿಕ್ಸ್‌ ಕೂಡ ಯಾದವ್‌ ಎಸೆತದ ಗತಿಯನ್ನರಿಯದೇ ಕ್ಲೀನ್‌ಬೌಲ್ಡ್‌ ಆದರು. 

ಸ್ಕೋರ್‌ಪಟ್ಟಿ
ಆಸ್ಟ್ರೇಲಿಯ

ಡೇವಿಡ್‌ ವಾರ್ನರ್‌    ಬಿ ಭುವನೇಶ್ವರ್‌    8
ಆರನ್‌ ಫಿಂಚ್‌    ಬಿ ಯಾದವ್‌    42
ಗ್ಲೆನ್‌ ಮ್ಯಾಕ್ಸ್‌ವೆಲ್‌    ಸಿ ಬುಮ್ರಾ ಬಿ ಚಾಹಲ್‌    17
ಟ್ರ್ಯಾವಿಸ್‌ ಹೆಡ್‌    ಬಿ ಪಾಂಡ್ಯ    9
ಮೊಸಸ್‌ ಹೆನ್ರಿಕ್ಸ್‌    ಬಿ ಯಾದವ್‌    8
ಡೇನಿಯಲ್‌ ಕ್ರಿಸ್ಟಿಯನ್‌    ರನೌಟ್‌    9
ಟಿಮ್‌ ಪೇನ್‌    ಬಿ ಬುಮ್ರಾ    17
ಕೋಲ್ಟರ್‌ ನೈಲ್‌    ಬಿ ಬುಮ್ರಾ    1
ಆ್ಯಂಡ್ರೂé ಟೈ    ಔಟಾಗದೆ    0
ಆ್ಯಡಂ ಝಂಪ    ಔಟಾಗದೆ    4
ಇತರ        3
ಒಟ್ಟು  (18.4 ಓವರ್‌ಗಳಲ್ಲಿ 8 ವಿಕೆಟಿಗೆ)    118
ವಿಕೆಟ್‌ ಪತನ: 1-8, 2-55, 3-76, 4-87, 5-89, 6-111, 7-113, 8-114, 
ಬೌಲಿಂಗ್‌: ಭುವನೇಶ್ವರ್‌ ಕುಮಾರ್‌    3.4-0-28-1
ಜಸ್‌ಪ್ರೀತ್‌ ಬುಮ್ರಾ        3-0-17-2
ಹಾರ್ದಿಕ್‌ ಪಾಂಡ್ಯ        4-0-33-1
ಯಜುವೇಂದ್ರ ಚಾಹಲ್‌        4-0-23-1
ಕುಲದೀಪ್‌ ಯಾದವ್‌        4-0-16-2

ಭಾರತ
ರೋಹಿತ್‌ ಶರ್ಮ    ಬಿ ನೈಲ್‌    11
ಶಿಖರ್‌ ಧವನ್‌    ಔಟಾಗದೆ    15
ವಿರಾಟ್‌ ಕೊಹ್ಲಿ    ಔಟಾಗದೆ    22
ಇತರ:        1
ಒಟ್ಟು (5.3 ಓವರ್‌ಗಳಲ್ಲಿ 1 ವಿಕೆಟಿಗೆ)    49
ವಿಕೆಟ್‌ ಪತನ: 1-11
ಬೌಲಿಂಗ್‌: ಜಾಸನ್‌ ಬೆಹೆÅನ್‌ಡಾಫ್ì    1-0-5-0
ನಥನ್‌ ಕೋಲ್ಟರ್‌ ನೈಲ್‌        2-0-20-1
ಆ್ಯಂಡ್ರೂé ಟೈ        1-0-10-0
ಆ್ಯಡಂ ಝಂಪ        1-0-6-0
ಡೇನಿಯಲ್‌ ಕ್ರಿಸ್ಟಿಯನ್‌        0.3-0-7-0

ಪಂದ್ಯಶ್ರೇಷ್ಠ: ಕುಲದೀಪ್‌ ಯಾದವ್‌

ಟಾಪ್ ನ್ಯೂಸ್

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

1-wqeqwewewqe

IPL; ಹೊಸ ಉತ್ಸಾಹದಲ್ಲಿರುವ ಆರ್‌ಸಿಬಿ ಮುಂದೆ ಗುಜರಾತ್‌ ಹರ್ಡಲ್ಸ್‌

Hockey

Kodava ಕುಂಡ್ಯೋಳಂಡ ಹಾಕಿ ಟೂರ್ನಿಇಂದು ಫೈನಲ್‌ : ಗಿನ್ನೆಸ್‌ ಅಧಿಕಾರಿಗಳ ಭೇಟಿ

1-ww-ewqe

India-Bangladesh ಇಂದಿನಿಂದ ವನಿತಾ ಟಿ20 ಸರಣಿ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ

by-raghavendra

Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.