ಆಸೀಸ್ ನಾಯಕ ಗಾಯಾಳು ಸ್ಮಿತ್ ಟಿ-20 ಸರಣಿಗೆ ಇಲ್ಲ
Team Udayavani, Oct 7, 2017, 12:28 PM IST
ಹೊಸದಿಲ್ಲಿ : ಮೂರು ಟಿ-20 ಪಂದ್ಯಗಳ ಸರಣಿಯ ಮೊದಲ ಪಂದ್ಯ ಇಂದು ರಾಂಚಿಯಲ್ಲಿ ನಡೆಯಲಿದ್ದು ಅದಕ್ಕೆ ಮುನ್ನವೇ ಪ್ರವಾಸಿ ಆಸ್ಟ್ರೇಲಿಯಕ್ಕೆ ಭಾರೀ ದೊಡ್ಡ ಹಿನ್ನಡೆ ಉಂಟಾಗಿದೆ.
ನಾಯಕ ಸ್ಟೀವ್ ಸ್ಮಿತ್ ಅವರ ಬಲ ಭುಜಕ್ಕೆ ಗಾಯವಾಗಿದ್ದು ಅವರು ಈ ಸರಣಿಯಿಂದ ಹೊರಬಿದ್ದಿದ್ದಾರೆ. ಐದು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳ ಸರಣಿಯನ್ನು 4-1 ಅಂತರಲ್ಲಿ ಸೋತು ಭಾರತವನ್ನು ಸಿಂಹ ಸ್ವಪ್ನವಾಗಿ ಕಂಡಿದ್ದ ಸ್ಮಿತ್ ಅವರ ಪಾಲಿನ ಕರಾಳ ಪ್ರವಾಸ ಇಲ್ಲಿಗೆ ಮುಗಿದಂತಾಗಿದೆ.
ಸ್ಮಿತ್ ಅವರ ಸ್ಥಾನವನ್ನು ನಾಯಕನಾಗಿ ಡೇವಿಡ್ ವಾರ್ನರ್ ತುಂಬಲಿದ್ದಾರೆ. ಮಾರ್ಕಸ್ ಸ್ಟೋಯಿನಿಸ್ ಅವರ ಸ್ಮಿತ್ ಜಾಗದಲ್ಲಿ ತಂಡಕ್ಕೆ ಭರ್ತಿಯಾಗಿದ್ದಾರೆ.
ಹೆಗಲು ನೋವಿನಿಂದಾಗಿ ನಿನ್ನೆ ಶುಕ್ರವಾರ ಫೀಲ್ಡಿಂಗ್ ಅಭ್ಯಾಸ ನಡೆಸಲು ಸಾಧ್ಯವಾಗದ ಸ್ಟೀವ್ ಸ್ಮಿತ್ ಅವರನ್ನು ಸ್ವದೇಶಕ್ಕೆ ಮರಳಿಸುವ ನಿರ್ಧಾರವನ್ನು ಇಂದು ಶನಿವಾರ ಬೆಳಗ್ಗೆ ಕೈಗೊಳ್ಳಲಾಯಿತು.