Ranji; ಗುಜರಾತ್‌ ವಿರುದ್ಧ ಗೆಲ್ಲುವ ಪಂದ್ಯ ಕಳೆದುಕೊಂಡ ಕರ್ನಾಟಕ

 ನೋಲಾಸ್‌ 50; ಬಳಿಕ 53 ರನ್‌ ಅಂತರದಲ್ಲಿ ಹತ್ತೂ ವಿಕೆಟ್‌ ಪತನ... ಸಿದ್ಧಾರ್ಥ್ ದೇಸಾಯಿಗೆ 7 ವಿಕೆಟ್‌

Team Udayavani, Jan 15, 2024, 11:20 PM IST

1-qweqweqwe

ಅಹ್ಮದಾಬಾದ್‌: ಸಂಕ್ರಮಣದಂದು ಸಿಹಿಯ ನಿರೀಕ್ಷೆಯಲ್ಲಿದ್ದ ಕರ್ನಾಟಕಕ್ಕೆ ಆತಿಥೇಯ ಗುಜರಾತ್‌ ಕಹಿಯನ್ನುಣಿಸಿ ರಣಜಿ ಗೆಲುವಿನ ಸಂಭ್ರಮವನ್ನಾಚರಿಸಿದೆ. ಶೋಚನೀಯ ಬ್ಯಾಟಿಂಗ್‌ ವೈಫ‌ಲ್ಯಕ್ಕೆ ಸಿಲುಕಿದ ಮಾಯಾಂಕ್‌ ಅಗರ್ವಾಲ್‌ ಪಡೆ 110 ರನ್ನುಗಳ ಸಣ್ಣ ಗುರಿಯನ್ನೂ ಮುಟ್ಟಲಾಗದೆ 6 ರನ್ನುಗಳ ಸೋಲನ್ನು ಹೊತ್ತು ಅಭಿಮಾನಿಗಳನ್ನು ತೀವ್ರ ನಿರಾಸೆಯಲ್ಲಿ ಕೆಡವಿದೆ.

110 ರನ್‌ ಮುನ್ನಡೆಯೊಂದಿಗೆ ಹಿಡಿತ ಸಾಧಿಸಿದ್ದ ಕರ್ನಾಟಕ, ಗೆಲುವಿಗೆ 110 ರನ್ನುಗಳ ಸಾಮಾನ್ಯ ಟಾರ್ಗೆಟ್‌ ಪಡೆದಿತ್ತು. ಒಂದು ಹಂತದಲ್ಲಿ ವಿಕೆಟ್‌ ನಷ್ಟವಿಲ್ಲದೆ 50 ರನ್‌ ಬಾರಿಸಿ ಗೆಲುವಿನತ್ತ ದಾಪುಗಾಲಿಕ್ಕುತ್ತಿತ್ತು. ಮುಂದಿನದು ನಾಟಕೀಯ ಪತನ. ಎಡಗೈ ಸ್ಪಿನ್ನರ್‌ ಸಿದ್ಧಾರ್ಥ್ ದೇಸಾಯಿ ಎಸೆತಗಳಿಗೆ ಕಕ್ಕಾಬಿಕ್ಕಿಯಾದ ಕರ್ನಾಟಕ ಮತ್ತೆ 53 ರನ್‌ ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್‌ಗಳನ್ನು ಉದುರಿಸಿಕೊಂಡಿತು. ತನ್ನ ರಣಜಿ ಇತಿಹಾಸದಲ್ಲೇ ಹೀನಾಯ ಸೋಲೊಂದನ್ನು ಹೊತ್ತುಕೊಂಡಿತು. ದೇಸಾಯಿ ಸಾಧನೆ 42 ರನ್ನಿಗೆ 7 ವಿಕೆಟ್‌.

ಮೊದಲ ವಿಕೆಟಿಗೆ 50 ರನ್‌
ಆರ್‌. ಸಮರ್ಥ್ ಬದಲು ಮಾಯಾಂಕ್‌ ಅಗರ್ವಾಲ್‌ ಜತೆ ದೇವದತ್ತ ಪಡಿಕ್ಕಲ್‌ ಇನ್ನಿಂಗ್ಸ್‌ ಆರಂಭಿಸಲು ಬಂದಿದ್ದರು. 9.2 ಓವರ್‌ಗಳ ಜತೆಯಾಟ ನಡೆಸಿದ ಈ ಜೋಡಿ ಮೊದಲ ವಿಕೆಟಿಗೆ ಭರ್ತಿ 50 ರನ್‌ ಗಳಿಸಿತು. ಉಳಿದದ್ದು 60 ರನ್‌ ಮಾತ್ರ. ಇದನ್ನು ಹೇಗೂ ಗಳಿಸಬಹುದಿತ್ತು. ಆದರೆ ಕ್ರಿಕೆಟ್‌ನಲ್ಲಿ ಏನೂ ಸಂಭವಿಸಬಹುದು ಎಂಬುದಕ್ಕೆ ಮುಂದಿನ 17 ಓವರ್‌ಗಳು ಸಾಕ್ಷಿಯಾದವು. ದೇಸಾಯಿ ಬೌಲಿಂಗ್‌ ಆಕ್ರಮಣಕ್ಕೆ ತತ್ತರಿಸಿದ ಕರ್ನಾಟಕದ ಬಲಿಷ್ಠ ಬ್ಯಾಟಿಂಗ್‌ ಸರದಿಗೆ ಭೂಕಂಪನದ ಅನುಭವ!

ಒಂದರ ಹಿಂದೊಂದರಂತೆ ವಿಕೆಟ್‌ಗಳು ಉದುರುತ್ತ ಹೋದವು. ಅಗರ್ವಾಲ್‌ (19) ಬೆನ್ನಲ್ಲೇ ಪಡಿಕ್ಕಲ್‌ (31), ನಿಕಿನ್‌ ಜೋಸ್‌ (4), ಮನೀಷ್‌ ಪಾಂಡೆ (0), ಸುಜಯ್‌ ಸಾತೇರಿ (2), ವಿಜಯ್‌ಕುಮಾರ್‌ ವೈಶಾಖ್‌ (0), ಕೆಳ ಕ್ರಮಾಂಕದಲ್ಲಿ ಬಂದ ಆರ್‌. ಸಮರ್ಥ್ (2), ರೋಹಿತ್‌ ಕುಮಾರ್‌ (0), ಪ್ರಸಿದ್ಧ್ ಕೃಷ್ಣ (7) ಸೇರಿಕೊಂಡು ಬ್ಯಾಟಿಂಗ್‌ ಪರೇಡ್‌ ನಡೆಸಿದರು. ಭಡ್ತಿ ಪಡೆದು ಬಂದ ಶುಭಾಂಗ್‌ ಹೆಗ್ಡೆ (27) ಮಾತ್ರ ಒಂದಿಷ್ಟು ಪ್ರತಿರೋಧ ತೋರಿದರು. ಉಳಿದ 3 ವಿಕೆಟ್‌ ಮತ್ತೋರ್ವ ಆಫ್ಸ್ಪಿನ್ನರ್‌ ರಿಂಕೇಶ್‌ ವಾಘೇಲ ಪಾಲಾಯಿತು.
ಇದಕ್ಕೂ ಮುನ್ನ 7ಕ್ಕೆ 171 ರನ್‌ ಗಳಿಸಿದ್ದ ಗುಜರಾತ್‌ ಸೋಮವಾರದ ಆಟ ಮುಂದುವರಿಸಿ 219ಕ್ಕೆ ದ್ವಿತೀಯ ಇನ್ನಿಂಗ್ಸ್‌ ಮುಗಿಸಿತು. ಉಮಂಗ್‌ ಕುಮಾರ್‌ 57 ರನ್‌ ಹೊಡೆದರು.

ಕರ್ನಾಟಕದ ಮುಂದಿನ ಎದು ರಾಳಿ ಗೋವಾ. ಈ ಪಂದ್ಯ ಜ. 19 ರಿಂದ ಮೈಸೂರಿನ “ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಗ್ರೌಂಡ್‌’ ನಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌
ಗುಜರಾತ್‌ 264 ಮತ್ತು 219 (ಉಮಂಗ್‌ ಕುಮಾರ್‌ 57, ಮನನ್‌ ಹಿಂಗ್ರಾಜಿಲಾ 56, ಸನ್‌ಪ್ರೀತ್‌ ಸಿಂಗ್‌ 27, ಕ್ಷಿತಿಜ್‌ ಪಟೇಲ್‌ 26, ಚಿಂತನ್‌ ಗಜ 23, ವಿ. ಕೌಶಿಕ್‌ 16ಕ್ಕೆ 3, ರೋಹಿತ್‌ ಕುಮಾರ್‌ 61ಕ್ಕೆ 3, ಶುಭಾಂಗ್‌ ಹೆಗ್ಡೆ 90ಕ್ಕೆ 2). ಕರ್ನಾಟಕ-374 ಮತ್ತು 103 (ಪಡಿಕ್ಕಲ್‌ 31, ಶುಭಾಂಗ್‌ 27, ಅಗರ್ವಾಲ್‌ 19, ಸಿದ್ಧಾರ್ಥ್ ದೇಸಾಯಿ 42ಕ್ಕೆ 7, ರಿಂಕೇಶ್‌ ವಾಘೇಲ 38ಕ್ಕೆ 3). ಪಂದ್ಯಶ್ರೇಷ್ಠ: ಸಿದ್ಧಾರ್ಥ್ ಸೇಸಾಯಿ.

ಮುಂಬಯಿಗೆ 10 ವಿಕೆಟ್‌ ಜಯ
ಮುಂಬಯಿ: ಆಂಧ್ರಪ್ರದೇಶ ವಿರುದ್ಧದ ರಣಜಿ ಪಂದ್ಯವನ್ನು ಮುಂಬಯಿ 10 ವಿಕೆಟ್‌ಗಳಿಂದ ಜಯಿಸಿದೆ. ಗೆಲುವಿಗೆ ಕೇವಲ 34 ರನ್‌ ಮಾಡಬೇಕಿದ್ದ ಮುಂಬಯಿ ವಿಕೆಟ್‌ ನಷ್ಟವಿಲ್ಲದೆ ಗುರಿ ಮುಟ್ಟಿತು. ಜಾಯ್‌ ಗೋಕುಲ್‌ ಬಿಷ್ಟಾ 26 ಮತ್ತು ಭೂಪೆನ್‌ ಲಾಲ್ವಾನಿ 8 ರನ್‌ ಮಾಡಿ ಔಟಾಗದೆ ಉಳಿದರು.

ಮುಂಬಯಿಯ 395 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಜವಾಬು ನೀಡಿದ ಆಂಧ್ರ 184ಕ್ಕೆ ಕುಸಿದು ಫಾಲೋಆನ್‌ಗೆ ತುತ್ತಾಗಿತ್ತು. ದ್ವಿತೀಯ ಸರದಿಯಲ್ಲಿ 244 ರನ್‌ ಗಳಿಸಿ ಇನ್ನಿಂಗ್ಸ್‌ ಸೋಲಿನಿಂದ ಪಾರಾಯಿತು. ಮುಂಬಯಿ ಮುಂದಿನ ಪಂದ್ಯದಲ್ಲಿ ಕೇರಳವನ್ನು ಎದುರಿಸಲಿದೆ.

ಟಾಪ್ ನ್ಯೂಸ್

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.