Ranji; ಕರ್ನಾಟಕ-ತಮಿಳುನಾಡು: ಥ್ರಿಲ್ಲಿಂಗ್ ಡ್ರಾ
Team Udayavani, Feb 12, 2024, 11:38 PM IST
ಚೆನ್ನೈ: ಕರ್ನಾಟಕ ಮತ್ತು ತಮಿಳುನಾಡು ನಡುವಿನ “ಸಿ’ ವಿಭಾಗದ ರಣಜಿ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯ ಕಂಡಿದೆ. ಎರಡೂ ತಂಡಗಳು ಗೆಲುವಿನಿಂದ ವಂಚಿತವಾದವು ಅಥವಾ ಸೋಲಿನಿಂದ ಪಾರಾದವು ಎಂಬುದು ಒಂದು ಸಾಲಿನ ಅತ್ಯಂತ ಸೂಕ್ತ ವಿಶ್ಲೇಷಣೆಯಾದೀತು.
ಗೆಲುವಿಗೆ 355 ರನ್ ಗುರಿ ಪಡೆದಿದ್ದ ತಮಿಳುನಾಡು, ಪಂದ್ಯದ ಮುಕ್ತಾಯದ ವೇಳೆ 8 ವಿಕೆಟ್ ನಷ್ಟಕ್ಕೆ 338 ರನ್ ಗಳಿ ಸಿತ್ತು. ಗೆಲುವಿನಿಂದ ಕೇವಲ 17 ರನ್ನುಗಳ ಹಿಂದಿತ್ತು. ಇನ್ನೊಂದೆಡೆ ಕರ್ನಾಟಕ 2 ವಿಕೆಟ್ಗಳ ನಿರೀಕ್ಷೆಯಲ್ಲಿತ್ತು.
ಮೊದಲ ಇನ್ನಿಂಗ್ಸ್ ಮುನ್ನಡೆಗಾಗಿ 3 ಅಂಕ ಸಂಪಾದಿಸಿದ ಕರ್ನಾಟಕ ಒಟ್ಟು 24 ಅಂಕಗಳೊಂದಿಗೆ “ಸಿ’ ವಿಭಾಗದ ಅಗ್ರ ಸ್ಥಾನದಲ್ಲಿದೆ. ತಮಿಳನಾಡು 22 ಅಂಕಗ ಳೊಂದಿಗೆ ದ್ವಿತೀಯ ಸ್ಥಾನಿಯಾಗಿದೆ. ಗುಜ ರಾತ್ 3ನೇ ಸ್ಥಾನದಲ್ಲಿದೆ (19 ಅಂಕ).
ಇದರೊಂದಿಗೆ ಕರ್ನಾಟಕದ ಕ್ವಾರ್ಟರ್ ಫೈನಲ್ ಖಾತ್ರಿಯಾಗಿದೆ. ಅಗರ್ವಾಲ್ ಪಡೆ ತನ್ನ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ಚಂಡೀಗಢವನ್ನು ಎದುರಿಸಲಿದೆ. ಈ ಪಂದ್ಯ ಫೆ. 16ರಂದು ಹುಬ್ಬಳ್ಳಿಯಲ್ಲಿ ಆರಂಭವಾಗಲಿದೆ.
ಅಪಾಯದಿಂದ ಪಾರು
ಒಂದು ವಿಕೆಟಿಗೆ 36 ರನ್ ಗಳಿಸಿದಲ್ಲಿಂದ ಸೋಮವಾರದ ಬ್ಯಾಟಿಂಗ್ ಮುಂದುವರಿಸಿದ ತಮಿಳುನಾಡು 199ಕ್ಕೆ 5 ವಿಕೆಟ್ ಕಳೆದುಕೊಂಡು ಅಪಾಯದ ಸ್ಥಿತಿಯಲ್ಲಿತ್ತು. ಆಗಿನ್ನೂ 35 ಓವರ್ಗಳಷ್ಟು ಆಟ ಬಾಕಿ ಇತ್ತು. ಆದರೆ 6ನೇ ವಿಕೆಟಿಗೆ ಜತೆಗೂಡಿದ ಬಾಬಾ ಇಂದ್ರಜಿತ್ (98) ಮತ್ತು ವಿಜಯ್ ಶಂಕರ್ (60) ಸೇರಿಕೊಂಡು ತಂಡವನ್ನು ಅಪಾಯದಿಂದ ಪಾರುಮಾಡಿದರು. ಇವರಿಂದ 125 ರನ್ ಜತೆಯಾಟ ದಾಖಲಾಯಿತು. ಬಳಿಕ 6 ರನ್ ಅಂತರದಲ್ಲಿ ಇಂದ್ರಜಿತ್, ವಿಜಯ್ ಶಂಕರ್ ಸೇರಿದಂತೆ 3 ವಿಕೆಟ್ ಉರುಳಿದಾಗ ತಮಿಳುನಾಡು ಮತ್ತೆ ಆತಂಕಕ್ಕೆ ಸಿಲುಕಿತು. ಕರ್ನಾಟಕಕ್ಕೆ ಪುನಃ ಗೆಲುವಿನ ಅವಕಾಶ ಎದುರಾಯಿತು. ಆದರೆ ನಾಯಕ ಸಾಯಿ ಕಿಶೋರ್ ಮತ್ತು ಅಜಿತ್ ರಾಮ್ ಕೊನೆಯ ಹಂತವನ್ನು ನಿಭಾಯಿಸುವಲ್ಲಿ ಯಶಸ್ವಿಯಾದರು.
3ನೇ ದಿನ ಬ್ಯಾಟಿಂಗ್ ಕಾಯ್ದುಕೊಂಡಿದ್ದ ಪ್ರದೋಶ್ ಪೌಲ್ ಕೂಡ ತಮಿಳುನಾಡು ಪಾಲಿಗೆ ಆಪತಾºಂಧವರಾದರು. ಇವರ ಕೊಡುಗೆ 74 ರನ್.
ಸಂಕ್ಷಿಪ್ತ ಸ್ಕೋರ್:
ಕರ್ನಾಟಕ-356 ಮತ್ತು 139. ತಮಿಳುನಾಡು-151 ಮತ್ತು 8 ವಿಕೆಟಿಗೆ 338 (ಇಂದ್ರಜಿತ್ 98, ಪ್ರದೋಶ್ 74, ವಿಜಯ್ ಶಂಕರ್ 60, ವಿಮಲ್ ಕುಮಾರ್ 31, ವೈಶಾಖ್ 71ಕ್ಕೆ 3, ಹಾರ್ದಿಕ್ ರಾಜ್ 86ಕ್ಕೆ 2).
ಪಂದ್ಯಶ್ರೇಷ್ಠ: ದೇವದತ್ತ ಪಡಿಕ್ಕಲ್.
4 ಎಸೆತಗಳಿಗೆ 4 ವಿಕೆಟ್!
ಇಂದೋರ್: ಮಧ್ಯಪ್ರದೇಶದ ವೇಗಿ ಖುಲ್ವಂತ್ ಖೆಜ್ರೋಲಿಯ ರಣಜಿ ಇತಿಹಾಸದಲ್ಲಿ ಸತತ 4 ಎಸೆತಗಳಲ್ಲಿ 4 ವಿಕೆಟ್ ಕಿತ್ತ 3ನೇ ಬೌಲರ್ ಆಗಿ ಮೂಡಿಬಂದಿದ್ದಾರೆ. ಮಧ್ಯಪ್ರದೇಶದ ವಿರುದ್ಧ ಫಾಲೋಆನ್ಗೆ ಸಿಲುಕಿದ್ದ ಬರೋಡ, 2ನೇ ಇನಿಂಗ್ಸ್ನಲ್ಲಿ 270 ರನ್ಗಳಿಗೆ ಆಲೌಟ್ ಆಯಿತು. ಆ ವೇಳೆ ಖೆಜ್ರೋಲಿಯ ಸತತ 4 ಎಸೆತಗಳಲ್ಲಿ ಬರೋಡದ 4 ವಿಕೆಟ್ ಉರುಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vande Bharat Metro ರೈಲು ಸೇವೆ ಜುಲೈಯಿಂದ ಶುರು? ವಿಶೇಷತೆಗಳೇನು?
Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
ಅಮೃತಶಿಲೆಯಲ್ಲಿ ಕೆತ್ತಿದ 18 ಅಡಿ ಕಾಳಿ ಮಾತೆ ಪ್ರತಿಮೆ ಇಂದು ಕೇರಳಕ್ಕೆ
ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ