ಯಶಸ್ವಿ ಜೈಸ್ವಾಲ್‌ ಮತ್ತೊಂದು ಶತಕ: 662 ರನ್‌ ಮುನ್ನಡೆಯಲ್ಲಿ ಮುಂಬಯಿ


Team Udayavani, Jun 17, 2022, 11:02 PM IST

ಯಶಸ್ವಿ ಜೈಸ್ವಾಲ್‌ ಮತ್ತೊಂದು ಶತಕ: 662 ರನ್‌ ಮುನ್ನಡೆಯಲ್ಲಿ ಮುಂಬಯಿ

ಬೆಂಗಳೂರು: ಮುಂಬಯಿಯ ಪ್ರತಿಭಾನಿತ್ವ ಓಪನರ್‌ ಯಶಸ್ವಿ ಜೈಸ್ವಾಲ್‌ ಉತ್ತರ ಪ್ರದೇಶ ಎದುರಿನ ರಣಜಿ ಟ್ರೋಫಿ ಸೆಮಿಫೈನಲ್‌ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿ ಸುದ್ದಿಯಾಗಿದ್ದಾರೆ.

ಇದರೊಂದಿಗೆ 4ನೇ ದಿನದಾಟದ ಅಂತ್ಯಕ್ಕೆ ಮುಂಬಯಿ ಮುನ್ನಡೆ 662 ರನ್ನಿಗೆ ಏರಿದ್ದು, ಸೆಮಿಫೈನಲ್‌ ಪ್ರವೇಶವನ್ನು ಖಾತ್ರಿಪಡಿಸಿದೆ.

54ನೇ ಎಸೆತದಲ್ಲಿ ಖಾತೆ ತೆರೆದ ಬಳಿಕ ಇನ್ನಿಂಗ್ಸ್‌ ಕಟ್ಟುತ್ತಲೇ ಹೋದ ಯಶಸ್ವಿ ಜೈಸ್ವಾಲ್‌ 372 ಎಸೆತಗಳಿಗೆ ಜವಾಬಿತ್ತು 181 ರನ್‌ ಬಾರಿಸಿದರು. ಇದರಲ್ಲಿ 23 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸೇರಿತ್ತು. ಮೊದಲ ಸರದಿಯಲ್ಲಿ ಜೈಸ್ವಾಲ್‌ ಗಳಿಕೆ ಭರ್ತಿ 100 ರನ್‌. ಅವರು ರಣಜಿ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಬಾರಿಸಿದ ಮುಂಬಯಿಯ 9ನೇ ಬ್ಯಾಟರ್‌. ಸತತವಾಗಿ ಇದು ಜೈಸ್ವಾಲ್‌ ಅವರ 3ನೇ ಶತಕ. ಉತ್ತರಾಖಂಡ ವಿರುದ್ಧದ ಕ್ವಾರ್ಟರ್‌ ಫೈನಲ್‌ ಪಂದ್ಯದ ದ್ವಿತೀಯ ಸರದಿಯಲ್ಲಿ ಅವರು 103 ರನ್‌ ಬಾರಿಸಿದ್ದರು.

ವನ್‌ಡೌನ್‌ ಬ್ಯಾಟರ್‌ ಅರ್ಮಾನ್‌ ಜಾಫ‌ರ್‌ ಕೂಡ ಸೆಂಚುರಿ ಬಾರಿಸಿ ಮೆರೆದರು. ಇವರ ಗಳಿಕೆ 127 ರನ್‌. 259 ಎಸೆತ ನಿಭಾಯಿಸಿದ ಜಾಫ‌ರ್‌ 15 ಬೌಂಡರಿ, 2 ಸಿಕ್ಸರ್‌ ಹೊಡೆದರು.

4ನೇ ದಿನದಾಟದ ಆಂತ್ಯಕ್ಕೆ ಮುಂಬಯಿ 4 ವಿಕೆಟಿಗೆ 449 ರನ್‌ ಗಳಿಸಿದೆ. ಯುಪಿ ಪರ 9 ಮಂದಿ ಬೌಲಿಂಗ್‌ ದಾಳಿಗಿಳಿದರೂ ಮುಂಬಯಿಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಶನಿವಾರ ಪಂದ್ಯದ ಅಂತಿಮ ದಿನ. ಸ್ಪಷ್ಟ ಗೆಲುವು ಸಾಧಿಸದೇ ಹೋದರೂ ಮೊದಲ ಇನ್ನಿಂಗ್ಸ್‌ ಮುನ್ನಡೆಯ ಆಧಾರದಲ್ಲಿ ಮುಂಬಯಿ ಫೈನಲ್‌ಗೆ ಲಗ್ಗೆ ಇಡುವುದರಲ್ಲಿ ಅನುಮಾನವಿಲ್ಲ.

ಸಂಕ್ಷಿಪ್ತ ಸ್ಕೋರ್‌: ಮುಂಬಯಿ -393 ಮತ್ತು 4 ವಿಕೆಟಿಗೆ 449 (ಜೈಸ್ವಾಲ್‌ 181, ಜಾಫ‌ರ್‌ 127, ಪೃಥ್ವಿ ಶಾ 64, ಪಾರ್ಕರ್‌ 22, ಸಫ‌ìರಾಜ್‌ ಬ್ಯಾಟಿಂಗ್‌ 23, ಮುಲಾನಿ ಬ್ಯಾಟಿಂಗ್‌ 10, ಪ್ರಿನ್ಸ್‌ ಯಾದವ್‌ 69ಕ್ಕೆ 2). ಉತ್ತರ ಪ್ರದೇಶ-180.

ಬಂಗಾಲಕ್ಕೆ 350 ರನ್‌ ಗುರಿ
ಬೆಂಗಳೂರು: ಮಧ್ಯ ಪ್ರದೇಶ ಎದುರಿನ ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಬಂಗಾಲ 350 ರನ್‌ ಗೆಲುವಿನ ಗುರಿ ಪಡೆದಿದ್ದು, 4ನೇ ದಿನದಾಟದ ಕೊನೆಯಲ್ಲಿ 4 ವಿಕೆಟಿಗೆ 96 ರನ್‌ ಗಳಿಸಿ ಒತ್ತಡಕ್ಕೆ ಸಿಲುಕಿದೆ.

ಅಭಿಷೇಕ್‌ ರಮಣ್‌ (0), ಸುದೀಪ್‌ ಕುಮಾರ್‌ ಘರಾಮಿ (19), ಅಭಿಷೇಕ್‌ ಪೊರೆಲ್‌ (7) ಹಾಗೂ ಇನ್‌ಫಾರ್ಮ್ ಬ್ಯಾಟರ್‌ ಮನೋಜ್‌ ತಿವಾರಿ (7) ಈಗಾಗಲೇ ಪೆವಿಲಿಯನ್‌ ಸೇರಿರುವುದರಿಂದ ಬಂಗಾಲದ ಸ್ಥಿತಿ ಅಷ್ಟೇನೂ ಉತ್ತಮ ಮಟ್ಟದಲ್ಲಿಲ್ಲ.

ನಾಯಕ ಆಭಿಮನ್ಯು ಈಶ್ವರನ್‌ 52 ರನ್‌ ಮಾಡಿ ಹೋರಾಟವೊಂದನ್ನು ಜಾರಿಯಲ್ಲಿರಿಸಿದ್ದಾರೆ. ಇವರೊಂದಿಗೆ 8 ರನ್‌ ಮಾಡಿರುವ ಅನುಸ್ತೂಪ್‌ ಮಜುಮಾªರ್‌ ಕ್ರೀಸ್‌ನಲ್ಲಿದ್ದಾರೆ. ಕೊನೆಯ ದಿನದಾಟದಲ್ಲಿ ಉಳಿದ 6 ವಿಕೆಟ್‌ಗಳ ನೆರವಿನಿಂದ 254 ರನ್‌ ತೆಗೆಯುವ ಕಠಿನ ಸವಾಲು ಬಂಗಾಲದ ಮುಂದಿದೆ.

ಸತತ 2 ಶತಕ ಬಾರಿಸಿ ಪ್ರಚಂಡ ಫಾರ್ಮ್ ಪ್ರದರ್ಶಿಸಿದ್ದ ಕ್ರೀಡಾ ಸಚಿವ ಮನೋಜ್‌ ತಿವಾರಿ ಔಟಾದುದು ಬಂಗಾಲಕ್ಕೆ ಎದುರಾಗಿರುವ ದೊಡ್ಡ ಹೊಡೆತ.ಕುಮಾರ ಕಾರ್ತಿಕೇಯ 3 ವಿಕೆಟ್‌ ಉಡಾಯಿಸಿದರು.

 

ಟಾಪ್ ನ್ಯೂಸ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ

Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಮದುವೆ ನಂತರವೂ ಸಿನಿಮಾ ಮಾಡ್ತೀನಿ…; ಮಾನ್ವಿತಾ ಕಾಮತ್

Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.