ರಣಜಿ: ರಾಜ್ಯ ತಂಡದಲ್ಲಿ ಎರಡು ಬದಲಾವಣೆ
Team Udayavani, Nov 18, 2018, 6:00 AM IST
ಬೆಂಗಳೂರು: ಮುಂಬಯಿ ವಿರುದ್ಧ ನ. 20ರಿಂದ ಬೆಳಗಾವಿಯಲ್ಲಿ ನಡೆಯಲಿರುವ ರಣಜಿ ಕ್ರಿಕೆಟ್ ಪಂದ್ಯಕ್ಕಾಗಿ 15 ಮಂದಿ ಸದಸ್ಯರ ಕರ್ನಾಟಕ ತಂಡ ಶನಿವಾರ ಪ್ರಕಟಗೊಂಡಿದೆ.
ಭಾರತ “ಎ’ ಸರಣಿಯಲ್ಲಿ ಪಾಲ್ಗೊಳ್ಳುತ್ತಿರುವ ಕರುಣ್ ನಾಯರ್ ಹಾಗೂ ಆರ್. ಸಮರ್ಥ್ ಪಾಲ್ಗೊಳ್ಳುತ್ತಿಲ್ಲ. ಇವರ ಬದಲಿಗೆ ಲಿಯಾನ್ ಖಾನ್ ಹಾಗೂ ಮಿರ್ ಕೌನೈನ್ ಅಬ್ಟಾಸ್ ಸ್ಥಾನ ಪಡೆದಿದ್ದಾರೆ. ಲಿಯಾನ್ ಖಾನ್ ರಣಜಿಗೆ ಆಯ್ಕೆಯಾಗಿರುವುದು ಇದೇ ಮೊದಲು.
ತಂಡ: ವಿನಯ್ ಕುಮಾರ್ (ನಾಯಕ), ಡಿ. ನಿಶ್ಚಲ್, ಪವನ್ ದೇಶಪಾಂಡೆ, ಕೆ.ವಿ. ಸಿದ್ದಾರ್ಥ್, ಸ್ಟುವರ್ಟ್ ಬಿನ್ನಿ, ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ಪ್ರಸಿದ್ಧ್ ಎಂ. ಕೃಷ್ಣ, ಜೆ. ಸುಚಿತ್, ರೋನಿತ್ ಮೋರೆ, ಶಿಶಿರ್ ಭವಾನೆ, ಬಿ.ಆರ್. ಶರತ್, ಶರತ್ ಶ್ರೀನಿವಾಸ್, ಮಿರ್ ಕೌನೈನ್ ಅಬ್ಟಾಸ್, ಲಿಯಾನ್ ಖಾನ್.