ಭಾರತವನ್ನು ಇನ್ನು ತಡೆಯಲು ಸಾಧ್ಯವಿಲ್ಲ !


Team Udayavani, Jan 20, 2021, 7:30 AM IST

ಭಾರತವನ್ನು ಇನ್ನು  ತಡೆಯಲು ಸಾಧ್ಯವಿಲ್ಲ !

ನಾನು ಇತ್ತೀಚೆಗೆ ನನ್ನ ವೀಡಿಯೋಗಳಲ್ಲಿ “ಫಿಟ್‌ ಆಗಿರುವ ಆಸ್ಟ್ರೇಲಿಯಾದ “ಪೂರ್ತಿ’ ತಂಡಕ್ಕಿಂತ, ಹೊಸಬರನ್ನೇ ಹೊಂದಿರುವ ಭಾರತದ “ಅರ್ಧ’ ತಂಡ ಬಹಳ ಬಲಿಷ್ಠವಾಗಿದೆ. ಅದು ಈ ಸಿರೀಸ್‌ ಗೆಲ್ಲಲಿದೆ” ಎಂದು ಹೇಳಿದ್ದೆ. ಹೀಗೆ ಹೇಳಿದಾಗ ಅನೇಕರು ನನ್ನನ್ನು ಪ್ರಶ್ನಿಸಿದ್ದರು. ನನ್ನ ಮಾತು ಕೇಳಿ ನಕ್ಕಿದ್ದರು. ಖುದ್ದು ಭಾರತದ ಕೆಲವು ಗೆಳೆಯರೂ ಸಹ, ಶೋಯೆಬ್‌ ಮುಜುಗರ ಆಗೋ ರೀತಿಯಲ್ಲಿ ಮಾತನಾಡುತ್ತಿದ್ದೀಯಲ್ಲ ಎಂದಿದ್ದರು! “ಬಲಿಷ್ಠ ಆಸ್ಟ್ರೇಲಿಯನ್‌ ತಂಡ ಭಾರತವನ್ನು ಸೋಲಿಸಲಿದೆ’ ಎಂದೇ ಎಲ್ಲರೂ ಹೇಳಿದ್ದರು.

ಆದರೆ ಭಾರತ ಪುಟಿದು ನಿಂತಿದೆ ಎನ್ನುವುದನ್ನು ನಾನು ಈ ಮೊದಲೇ ಗಮನಿಸಿದ್ದೆ. ಒಂದು ವೇಳೆ ಭಾರತವೇನಾದರೂ ಈ ಟೆಸ್ಟ್‌ ಪಂದ್ಯಾವಳಿಯಲ್ಲಿ ಗೆಲುವು ಪಡೆಯಿತು ಎಂದರೆ ಅದೊಂದು ಐತಿಹಾಸಿಕ ಗೆಲುವಾಗಲಿದೆ ಎನ್ನುವುದು ತಿಳಿದಿತ್ತು. ನೀವು ಗಮನಿಸಿ ನೋಡಿ, ಪೂರ್ತಿ ಗಾಯಾಳುಗಳೊಂದಿಗೇ ಭಾರತ ತಂಡ ಆಟಕ್ಕಿಳಿಯಿತು. ಆದರೂ ಮೀಸಲು ಆಟಗಾರರಾಗಿದ್ದ ಚಿಕ್ಕ ಹುಡುಗರೆಲ್ಲ ಸೇರಿ ಆಸ್ಟ್ರೇಲಿಯಾದಂಥ ಬಲಿಷ್ಠ ತಂಡವನ್ನು ಕೆಡವಿಹಾಕಿದರು. ರಿಷಭ್‌ ಪಂತ್‌ ಅಂತೂ ಆಸ್ಟ್ರೇಲಿಯಾವನ್ನು ಜಜ್ಜಿಹಾಕಿಬಿಟ್ಟ! ಭಾರತ ಈ ಮ್ಯಾಚನ್ನು ಹೇಗೆ ಗೆದ್ದಿತು ಎನ್ನುವ ವಿಶ್ಲೇಷಣೆಯನ್ನೆಲ್ಲ ನಾನು ಮಾಡಲು ಹೋಗುವುದಿಲ್ಲ. ಅದನ್ನು ನೀವು ನೋಡಿಯೇ ಇರುತ್ತೀರಿ. ಭಾರತ ತಂಡದ ಗುಣವನ್ನು/ಕ್ಯಾರೆಕ್ಟರ್‌ ನೋಡಿ ನನಗೆ ಭಾರತ ಪುಟಿದೇಳಲಿದೆ ಎಂದು ಖಾತ್ರಿಯಾಗಿತ್ತು.

ಹಿಂದಿನ ಪಂದ್ಯವೊಂದರಲ್ಲಿ ಟೀಂ ಇಂಡಿಯಾ ಕೇವಲ 36 ರನ್‌ಗಳಿಗೆ ಆಲೌಟ್‌ ಆದ ಅನಂತರ ಮೂಲೆಗೆ ತಳ್ಳಲ್ಪಟ್ಟಿತ್ತು. ಮೂಲೆಗೆ ತಳ್ಳಲ್ಪಟ್ಟವನು ಆ ಸಂಕಷ್ಟದಿಂದ ಹೊರಗೆದ್ದು ಬರಬೇಕೆಂದರೆ, ಏನಾದರೂ ಅಸಾಮಾನ್ಯವಾದದ್ದನ್ನೇ ಮಾಡಬೇಕು ಎನ್ನುವುದು ತಂಡಕ್ಕೆ ಅರಿವಾಯಿತು. ಪ್ರತಿಯೊಬ್ಬ ವ್ಯಕ್ತಿಗೂ ಅಸಾಮಾನ್ಯವನ್ನು ಸಾಧಿಸುವ ಸಾಮರ್ಥ್ಯಇರುತ್ತದೆ. ಆ ಸಾಮರ್ಥ್ಯದ ಅರಿವಾಗಬೇಕು ಎಂದರೆ ಪೆಟ್ಟು ತಿನ್ನಲೇಬೇಕಾಗುತ್ತದೆ. ಭಾರತ ಬಹಳ ದೊಡ್ಡ ಪೆಟ್ಟನ್ನೇ ತಿಂದಿತ್ತು! ಆ ಸೋಲಿನ ಅನಂತರ ಅವರು ಒಂದಾಗಿ ನಿಂತರು. ಆಗಲೇ ಅದು ಸೀರೀಸ್‌ ಗೆಲ್ಲಲಿದೆ ಎಂದು ಅನ್ನಿಸಿತ್ತು.

ಈ ಐತಿಹಾಸಿಕ ಗೆಲುವಿನ ಅನಂತರ ಮುಂದಿನ ದಿನಗಳಲ್ಲಿ ಭಾರತವನ್ನು ತಡೆಯಲು ಯಾರಿಗೂ ಸಾಧ್ಯವೇ ಇಲ್ಲ. ಆದರೆ ಒಂದು ವಿಷಯ ಭಾರತಕ್ಕೆ ಅಡ್ಡಿಯಾಗಬಲ್ಲದು. ಅದು ಅತೀ ಆತ್ಮವಿಶ್ವಾಸ ತಾಳಿದರೆ, ಆಟಗಾರರ ಆಯ್ಕೆ ಪ್ರಕ್ರಿಯೆ ಕೆಟ್ಟದಾಗಿದ್ದರೆ ಅಥವಾ ಒಂದು ವೇಳೆ ಭಾರತವೇನಾದರೂ ತನ್ನ ಬೆಂಚ್‌ ಸ್ಟ್ರೆಂತ್‌ ದುರ್ಬಲಗೊಳಿಸಿದರೆ ಅದಕ್ಕೆ ತೊಂದರೆಯಾಗಲಿದೆ. ಏಕೆಂದರೆ ಇವತ್ತು ಇಂದು ಸುಂದರ್‌, ಪಂತ್‌, ಗಿಲ್‌, ಶಾರ್ದೂಲ್‌ನಂಥ ಚಿಕ್ಕ ಹುಡುಗರೇ ಆಸ್ಟ್ರೇಲಿಯಾ ವಿರುದ್ಧ ಗೆದ್ದು ತೋರಿಸಿದ್ದಾರೆ. ಮತ್ತೂಮ್ಮೆ ಹೇಳುತ್ತೇನೆ, ಇದು ನಿಜಕ್ಕೂ ಐತಿಹಾಸಿಕ ಗೆಲುವು. ಇದು ಭಾರತಕ್ಕೆ, ಯುವ ಆಟಗಾರರಿಗೆ ಹಾಗೂ ಆಯ್ಕೆದಾರರಿಗೆ ಬಹಳ ಹೆಮ್ಮೆಯ ಘಳಿಗೆ. ವೆಲ್‌ ಡನ್‌!

 

-ಶೋಯೆಬ್‌ ಅಖ್ತರ್‌ ಪಾಕಿಸ್ಥಾನದ ಮಾಜಿ ಕ್ರಿಕೆಟರ್‌

 

ಟಾಪ್ ನ್ಯೂಸ್

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

Uppinangady ಮುರಿದು ಬಿದ್ದ ಮದುವೆ; ಕುಟುಂಬಸ್ಥರು ಕಂಗಾಲು

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.