ನಾಲ್ಕು ವಿಶ್ವಕಪ್ಗಳಲ್ಲಿ ಪಾಲ್ಗೊಳ್ಳಲು ಭವಾನಿಗೆ ಕೇಂದ್ರ ಆರ್ಥಿಕ ನೆರವು
Team Udayavani, Dec 26, 2021, 6:55 AM IST
ನವದೆಹಲಿ: ಮುಂದಿನ ವರ್ಷ ನಡೆಯುವ ನಾಲ್ಕು ಪ್ರಮುಖ ಅಂತಾರಾಷ್ಟ್ರೀಯ ಕತ್ತಿವರಸೆ ಕೂಟಗಳಲ್ಲಿ ಪಾಲ್ಗೊಳ್ಳಲು ಭವಾನಿ ದೇವಿಗೆ ಕೇಂದ್ರ ಸರ್ಕಾರದ ಆರ್ಥಿಕ ನೆರವು ದೊರಕಿದೆ.
ತರಬೇತಿ ಮತ್ತು ಸ್ಪರ್ಧೆಯ ವಾರ್ಷಿಕ ಯೋಜನೆಯಡಿ ಕೇಂದ್ರ ಸರ್ಕಾರ 8.16 ಲಕ್ಷ ರೂ. ಮೊತ್ತವನ್ನು ಮಂಜೂರು ಮಾಡಿದೆ. ಈ ಆರ್ಥಿಕ ನೆರವಿನಿಂದ ಭವಾನಿ ಅವರು ಜಾರ್ಜಿಯಾದಲ್ಲಿ ಜ.4ರಿಂದ ತರಬೇತಿ ಆರಂಭಿಸಲಿದ್ದಾರೆ. ಅದಾದ ನಂತರ ಜ.14ರಿಂದ 16ವರೆಗೆ ಜಾರ್ಜಿಯಾದ ಟಿಬಿಲಿಸಿಯಲ್ಲಿ ಕತ್ತಿವರಸೆ ವಿಶ್ವಕಪ್ನಲ್ಲಿ ಸ್ಪರ್ಧಿಸಲಿದ್ದಾರೆ.
ಜ.28-29ರಂದು ಬಲ್ಗೇರಿಯದ ಪ್ಲಾವ್ಡೀವ್ನಲ್ಲಿ ನಡೆಯುವ ವಿಶ್ವಕಪ್ ಭಾಗವಹಿಸಲಿದ್ದಾರೆ, ಹಾಗೆಯೇ ಗ್ರೀಸ್, ಬೆಲ್ಜಿಯಂಗಳಲ್ಲಿ ನಡೆಯುವ ವಿಶ್ವಕಪ್ಗ್ಳಲ್ಲೂ ಸ್ಪರ್ಧಿಸಲಿದ್ದಾರೆ. ಈ ವರ್ಷ ಟೋಕ್ಯೊದಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಭವಾನಿ ಸ್ಪರ್ಧಿಸಿ, ಅಲ್ಲಿ 32ರ ಸುತ್ತಿನಲ್ಲಿ ಸೋತಿದ್ದರು. ಅವರು ಒಲಿಂಪಿಕ್ಸ್ನಲ್ಲಿ ಸ್ಪರ್ಧಿಸಿದ ಭಾರತದ ಮೊದಲ ಕತ್ತಿವರಸೆ ಸ್ಪರ್ಧಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.