ಕ್ಷಮೆಯಾಚಿಸಿದ ಸಿಎಸ್ಕೆ ವೈದ್ಯ ಮಧು ತೊಟ್ಟಪ್ಪಿಳ್ಳಿಲ್
Team Udayavani, Jun 19, 2020, 4:34 AM IST
ಹೊಸದಿಲ್ಲಿ: ಚೀನ ಸೇನೆಯ ದಾಳಿಯಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಸಂಬಂಧಪಟ್ಟ ವಿಚಾರದಲ್ಲಿ ಸರಕಾರವನ್ನು ಅಪಹಾಸ್ಯ ಮಾಡಿ ಪೋಸ್ಟ್ ಮಾಡಿ ಹುದ್ದೆ ಕಳೆದುಕೊಂಡ ಚೆನ್ನೈ ಐಪಿಎಲ್ ತಂಡದ ವೈದ್ಯ ಮಧು ತೊಟ್ಟಪ್ಪಿಳ್ಳಿಲ್ ಕ್ಷಮೆ ಯಾಚಿಸಿದ್ದಾರೆ.
“ವೀರ ಸೈನಿಕರನ್ನು ನಾನು ಗೌರವಿಸುತ್ತೇನೆ. ಪ್ರಮಾದ ವಶಾತ್ ಈ ತಪ್ಪು ಸಂಭವಿಸಿದೆ. ಇದಕ್ಕಾಗಿ ಎಲ್ಲರಲ್ಲೂ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ.