ಸಯ್ಯದ್ ಮುಷ್ತಾಕ್ ಅಲಿ ಟಿ20: ಸರ್ವೀಸಸ್ಗೆ ಸೋಲುಣಿಸಿದ ಕರ್ನಾಟಕ
Team Udayavani, Oct 20, 2022, 9:29 PM IST
ಚಂಡೀಗಢ: ಸಯ್ಯದ್ ಮುಷ್ತಾಕ್ ಅಲಿ ಟಿ20 ಪಂದ್ಯಾವಳಿಯಲ್ಲಿ ಕರ್ನಾಟಕ 5ನೇ ಗೆಲವು ಸಾಧಿಸಿ “ಸಿ’ ವಿಭಾಗದ ಅಗ್ರಸ್ಥಾನವನ್ನು ಗಟ್ಟಿಗೊಳಿಸಿದೆ.
ಗುರುವಾರದ ಮುಖಾಮುಖೀಯಲ್ಲಿ ಮಾಯಾಂಕ್ ಅಗರ್ವಾಲ್ ಪಡೆ 8 ವಿಕೆಟ್ಗಳಿಂದ ಸರ್ವೀಸಸ್ಗೆ ಸೋಲುಣಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಸರ್ವೀಸಸ್ 8 ವಿಕೆಟಿಗೆ 129 ರನ್ಗಳಿಗೆ ನಿಯಂತ್ರಿಸಲ್ಪಟ್ಟರೆ, ಕರ್ನಾಟಕ 18.1 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 130 ರನ್ ಬಾರಿಸಿತು.
ಇದು ಕರ್ನಾಟಕದ 6ನೇ ಮುಖಾಮುಖಿ. ಒಟ್ಟು 20 ಅಂಕ ಹೊಂದಿರುವ ರಾಜ್ಯ ತಂಡ +2.397 ರನ್ರೇಟ್ ಹೊಂದಿದೆ. “ಎ’ ವಿಭಾಗದಲ್ಲಿ ಮುಂಬಯಿ, “ಬಿ’ ವಿಭಾಗದಲ್ಲಿ ಪಂಜಾಬ್ ಕೂಡ 6 ಪಂದ್ಯಗಳಿಂದ 20 ಅಂಕ ಸಂಪಾದಿಸಿವೆ.