ಶ್ರೀಲಂಕಾದಲ್ಲಿ ಮತ್ತೆ ರಾಜಕೀಯ ಬಿಕ್ಕಟ್ಟು?
Team Udayavani, Mar 8, 2019, 12:30 AM IST
ಕೊಲಂಬೊ: 2009ರಲ್ಲಿ ಎಲ್ಟಿಟಿಇ ವಿರುದ್ಧದ ಸೇನಾ ಕಾರ್ಯಾಚರಣೆ ವೇಳೆ, ಲಂಕಾ ತಮಿಳರ ಮೇಲೆ ನಡೆದಿದೆ ಎನ್ನಲಾದ ಕ್ರೌರ್ಯ ಪ್ರಕರಣಗಳನ್ನು ತನಿಖೆ ನಡೆಸುವಂತೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯನ್ನು ಕೋರುವುದಿಲ್ಲ ಎಂದು ಲಂಕಾ ಅಧ್ಯಕ್ಷ ಸಿರಿಸೇನಾ ಹೇಳಿರುವುದನ್ನು ಪ್ರಧಾನಿ ವಿಕ್ರಮ ಸಿಂಘೆ ವಿರೋಧಿಸಿದ್ದು, ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.