ಈ ವಿಶ್ವಕಪ್ ಆಟಗಾರ ಕರ್ನಾಟಕ ತಂಡಕ್ಕೂ ಆಯ್ಕೆಯಾಗುವ ಅರ್ಹತೆ ಹೊಂದಿಲ್ಲ: ದೊಡ್ಡ ಗಣೇಶ್ ಟೀಕೆ
Team Udayavani, Oct 21, 2023, 5:33 PM IST
ಬೆಂಗಳೂರು: ಪುಣೆಯಲ್ಲಿ ಗುರುವಾರ ನಡೆದ ಕ್ರಿಕೆಟ್ ವಿಶ್ವಕಪ್ 2023 ರ ಬಾಂಗ್ಲಾದೇಶ ವಿರುದ್ಧದ ಪಂದ್ಯದ ಬಳಿಕ ಶಾರ್ದೂಲ್ ಠಾಕೂರ್ ವಿರುದ್ಧ ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗಿ ದೊಡ್ಡ ಗಣೇಶ್ ತೀವ್ರ ವಾಗ್ದಾಳಿ ನಡೆಸಿದರು.
ಗಾಯದ ಕಾರಣ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ, ಶಾರ್ದೂಲ್ 9 ಓವರ್ ಬೌಲ್ ಮಾಡಿದರು ಮತ್ತು 6.60 ರ ಎಕಾನಮಿ ದರದಲ್ಲಿ 59 ರನ್ ಗಳನ್ನು ಬಿಟ್ಟುಕೊಟ್ಟರು. ಆಲ್ರೌಂಡರ್ ತೌಹಿದ್ ಹೃದೋಯ್ ಅವರ ವಿಕೆಟ್ ಪಡೆದರು. ಆದರೆ ಇದರಿಂದ ದೊಡ್ಡ ಗಣೇಶ್ ಪ್ರಭಾವಿತರಾಗಲಿಲ್ಲ. ಕೇವಲ ಬೌಲಿಂಗ್ ಆಧಾರದ ಮೇಲೆ, ಶಾರ್ದೂಲ್ ದೇಶೀಯ ಕ್ರಿಕೆಟ್ ನಲ್ಲಿ ಕರ್ನಾಟಕದ ಪ್ಲೇಯಿಂಗ್ ಇಲೆವೆನ್ ಗೂ ಆಯ್ಕೆಯಾಗುವುದಿಲ್ಲ ಎಂದು ದೊಡ್ಡ ಗಣೇಶ್ ಟೀಕಿಸಿದ್ದಾರೆ.
“ಶಾರ್ದೂಲ್ ಠಾಕೂರ್ ಅವರು ಅವರ ಬೌಲಿಂಗ್ ನಿಂದಾಗಿ ಅವರು ಭಾರತ ತಂಡ ಬಿಡಿ, ಯಾವುದೇ ಸ್ವರೂಪದಲ್ಲಿ ಕರ್ನಾಟಕದ ಪ್ಲೇಯಿಂಗ್ ಇಲೆವೆನ್ ಗೂ ಹೋಗಲು ಹೆಣಗಾಡುತ್ತಾರೆ” ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ.
With due respect to Shardul Thakur, on his bowling alone he would struggle to make it to Karnataka’s playing Xl in any format, let alone India’s #CWC23
— Dodda Ganesh | ದೊಡ್ಡ ಗಣೇಶ್ (@doddaganesha) October 19, 2023
ಶಾರ್ದೂಲ್ ಅವರು 2023 ರ ಕ್ರಿಕೆಟ್ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಆಡಲಿಲ್ಲ. ಆದರೆ ಅವರು ಎರಡನೇ ಪಂದ್ಯಕ್ಕೆ ಆಯ್ಕೆಯಾದ ಅವರು ಅಂದಿನಿಂದ ಪ್ರತಿ ಪಂದ್ಯವನ್ನೂ ಆಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ