ಲಂಕಾ ಟಿ-20 ತ್ರಿಕೋಣ ಸರಣಿ: ಐವರು ಆಟಗಾರರಿಗೆ ವಿಶ್ರಾಂತಿ
Team Udayavani, Feb 24, 2018, 4:04 PM IST
ಹೊಸದಿಲ್ಲಿ : ಕಿರಿಯ ಕ್ರಿಕೆಟ್ ಪ್ರತಿಭೆಗಳಿಗೆ ಅವಕಾಶ ಕೊಟ್ಟು ಅವರನ್ನು ಬೆಳಕಿಗೆ ತರುವ ಪ್ರಯತ್ನದ ಅಂಗವಾಗಿ ಮುಂದಿನ ತಿಂಗಳಲ್ಲಿ ನಡೆಯಲಿರುವ ಶ್ರೀ ಲಂಕಾ ಟಿ-20 ತ್ರಿಕೋಣ ಸರಣಿಗೆ ಹಾಲಿ ಭಾರತೀಯ ಕ್ರಿಕೆಟ್ ತಂಡದ ಐವರು ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ.
ವಿಶ್ರಾಂತಿ ನೀಡಲ್ಪಟ್ಟಿರುವ ಆಟಗಾರರೆಂದರೆ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ಹಾರ್ದಿಕ್ ಪಾಂಡ್ಯ, ಭುವನೇಶ್ವರ ಕುಮಾರ್ ಮತ್ತು ಎಂ ಎಸ್ ಧೋನಿ.
ರೋಹಿತ್ ಶರ್ಮಾ ಅವರು ತ್ರಿಕೋಣ ಸರಣಿಯಲ್ಲಿ ಭಾರತೀಯ ತಂಡದ ನಾಯಕತ್ವ ವಹಿಸುತ್ತಾರೆ.
ಲಂಕೆಯಲ್ಲಿನ ತ್ರಿಕೋಣ ಟಿ-20 ಸರಣಿ ಮಾರ್ಚ್ 6ರಿಂದ ಕೊಲಂಬೋದಲ್ಲಿ ಪ್ರಾರಂಭವಾಗಲಿದೆ.