ಸಿಗದ ವೀಸಾ: ಕೈ ತಪ್ಪಿದ ಕಾಮನ್ವೆಲ್ತ್‌ ಪವರ್‌ ಲಿಫ್ಟಿಂಗ್‌

ಕೊನೆ ಗಳಿಗೆಯಲ್ಲಿ ಅವಕಾಶ ವಂಚಿತರಾದ ರಾಜ್ಯದ 15 ಪವರ್‌ ಲಿಫ್ಟರ್

Team Udayavani, Sep 15, 2019, 5:55 AM IST

visa

ಕುಂದಾಪುರ: ಕೆನಡಾದಲ್ಲಿ ಸೆ. 15ರಿಂದ ಸೆ. 21ರ ತನಕ ನಡೆಯಲಿರುವ ಕಾಮನ್ವೆಲ್ತ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ದೇಶದ ಪದಕ ಬೇಟೆಗೆ ಭಾರೀ ಹೊಡೆತ ಬೀಳಲಿದೆ. ಅಲ್ಲಿಗೆ ಹೊರಟು ನಿಂತಿದ್ದ ರಾಜ್ಯದ 15 ಮಂದಿ ಲಿಫ್ಟರ್‌ಗಳಿಗೆ ರಾಜ್ಯ ಮತ್ತು ರಾಷ್ಟ್ರೀಯ ಪವರ್‌ ಲಿಫ್ಟಿಂಗ್‌ ಫೆಡರೇಶನ್‌ ನಿರ್ಲಕ್ಷ್ಯದಿಂದ ಸಕಾಲದಲ್ಲಿ ವೀಸಾ ಸಿಗದಿರುವುದೇ ಇದಕ್ಕೆ ಕಾರಣ!

ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಉತ್ತಮ ಸಾಧನೆ ಮಾಡಿ ದೇಶಕ್ಕೆ ಹೆಸರು ತರಬೇಕು ಎನ್ನುವ ಕನಸು ಹೊತ್ತು ಐದಾರು ತಿಂಗಳುಗಳಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಕ್ರೀಡಾಪಟುಗಳು ಕೊನೆಯ ಘಳಿಗೆಯಲ್ಲಿ ಅವಕಾಶ ವಂಚಿತರಾಗಿ ನಿರಾಸೆಗೊಂಡಿದ್ದಾರೆ.

ಮೂವರಿಗೆ ಮಾತ್ರ ಅವಕಾಶ
ರಾಜ್ಯದಿಂದ ಈ ಚಾಂಪಿಯನ್‌ಶಿಪ್‌ಗೆ ಮೂರು ವಿಭಾಗಗಳಲ್ಲಿ ಒಟ್ಟು 18 ಮಂದಿ ಆಯ್ಕೆಯಾಗಿದ್ದರು. ಇವರಲ್ಲಿ ಕುಂದಾಪುರ ತಾಲೂಕಿನ ವಿಶ್ವನಾಥ ಗಾಣಿಗ, ಮಂಗಳೂರಿನ ಪ್ರದೀಪ್‌ ಕುಮಾರ್‌ ಮತ್ತು ರಿತ್ವಿಕ್‌ ಕೆ.ವಿ. ಅವರಿಗೆ ಮಾತ್ರ ಕೆನಡಾಕ್ಕೆ ತೆರಳಲು ಅವಕಾಶ ಸಿಕ್ಕಿದೆ. ದೇಶದಿಂದ ಒಟ್ಟು 60 ಮಂದಿ ಆಯ್ಕೆಯಾಗಿದ್ದು, ಕೇವಲ 30 ಮಂದಿ ಮಾತ್ರ ತೆರಳಿದ್ದಾರೆ.

ಅವಕಾಶ ವಂಚಿತರು
ಕುಂದಾಪುರದ ಸತೀಶ್‌ ಖಾರ್ವಿ, ಅನಂತ್‌ ಭಟ್‌, ದೀಪಾ ಕೆ.ಎಸ್‌., ದೀಪ್ತಿಕಾ ಜೆ. ಪುತ್ರನ್‌, ಕಾರ್ತಿಕ್‌, ನಾಗಶ್ರೀ, ನೀಮಾ, ಪಂಚಮಿ, ಪೃಥ್ವಿ ಕುಮಾರ್‌, ರಿಷಬ್‌ ಎಸ್‌. ರಾವ್‌, ಶರತ್‌ ಪೂಜಾರಿ, ಸುಲೋಚನಾ, ಸ್ವಾತಿ, ವೆನಿಜೀಯಾ ಕಾರ್ಲೊ.

ಎರಡು ಬಾರಿ ವೀಸಾ ತಿರಸ್ಕೃತ
15 ದಿನಗಳ ಹಿಂದೆ ಈ ಕ್ರೀಡಾಳುಗಳು ಸಲ್ಲಿಸಿದ್ದ ವೀಸಾ ಅರ್ಜಿಯನ್ನು ಕೆನಡಾದ ಭಾರತೀಯ ರಾಯಭಾರಿ ಕಚೇರಿ ತಿರಸ್ಕರಿಸಿತ್ತು. ಇಲ್ಲಿಂದ ಕೆನಡಾಕ್ಕೆ ತೆರಳಿದವರು ಹಿಂದಿರುಗದೆ ಅಲ್ಲಿಯೇ ಇರುತ್ತಾರೆ ಎನ್ನುವ ಕಾರಣ ಇದರ ಹಿಂದಿದೆ!

ಬಳಿಕ ಮತ್ತೂಮ್ಮೆ ವೀಸಾಕ್ಕೆ ಅರ್ಜಿ ಹಾಕಿದ್ದರು. ಆಗ ಅಲ್ಲೇ ಉಳಿಯುವುದಿಲ್ಲ ಎಂದು ಬಾಂಡ್‌ ಪೇಪರ್‌ನಲ್ಲಿ ಮುಚ್ಚಳಿಕೆ ಬರೆದು ಕೊಟ್ಟಿದ್ದರು. ಇದು ಕೂಡ ತಿರಸ್ಕೃತಗೊಂಡು, ಸೆ. 13ರಂದು ಎಲ್ಲರಿಗೂ ಸಂದೇಶ ಬಂದಿತ್ತು.

ದೇಶದ ಪದಕ ಬೇಟೆಗೆ ಭಾರೀ ಹೊಡೆತ!
ರಾಜ್ಯದ 15 ಮಂದಿ ಅವಕಾಶ ವಂಚಿತರಾಗಿರುವುದರಿಂದ ದೇಶಕ್ಕೆ ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಕನಿಷ್ಠ 9 ಪದಕ ಗೆಲ್ಲುವ ಅವಕಾಶ ಕಳೆದುಹೋಗಿದೆ. ಪ್ರತೀ ಬಾರಿ ಅಂತಾರಾಷ್ಟ್ರೀಯ ಟೂರ್ನಿ ನಡೆದಾಗ ಕರ್ನಾಟಕವೇ ಅಗ್ರಸ್ಥಾನ ಪಡೆಯುತ್ತಿತ್ತು. ಆದರೆ ಈ ಬಾರಿ ಕೇವಲ ಮೂವರು ಮಾತ್ರ ಕಣದಲ್ಲಿದ್ದಾರೆ.

ರಾಜ್ಯದಿಂದ ಅವಕಾಶ ವಂಚಿತರಾಗಿರುವ ಸುಲೋಚನಾ, ಪಂಚಮಿ, ಶರತ್‌, ಉಪ್ಪಿನಕುದ್ರುವಿನ ನಾಗಶ್ರೀ ರಾಷ್ಟ್ರೀಯ ಚಾಂಪಿಯನ್‌ ಶಿಪ್‌ಗ್ಳಲ್ಲಿ ಚಿನ್ನ ಗೆದ್ದು, ವಿಶ್ವಮಟ್ಟದಲ್ಲೂ ನಿರೀಕ್ಷೆ ಮೂಡಿಸಿದ್ದರು. ವಿಶ್ವ ಮಟ್ಟದಲ್ಲೂ ಒಟ್ಟಾರೆ ಪದಕ ಬೇಟೆಯಲ್ಲಿ ಆಸ್ಟ್ರೇಲಿಯಾ ಅನಂತರದ ಸ್ಥಾನದಲ್ಲಿ ಭಾರತ ಇರುತ್ತಿತ್ತು. ಈ ಬಾರಿ ಅದು ಕೂಡ ಕೈತಪ್ಪುವ ಆತಂಕ ಎದುರಾಗಿದ್ದು, ಕಜಕಿಸ್ಥಾನ ಮತ್ತಿತರ ಸಣ್ಣ ದೇಶಗಳು ಭಾರತಕ್ಕಿಂತ ಹೆಚ್ಚಿನ ಪದಕ ಗೆಲ್ಲಬಹುದು ಎನ್ನಲಾಗುತ್ತಿದೆ.

ಕೈ ತಪ್ಪಿರುವುದು ಬೇಸರವಾಗಿದೆ
ಎರಡು ತಿಂಗಳಿನಿಂದ ರಾಜ್ಯ ಪವರ್‌ ಲಿಫ್ಟಿಂಗ್‌ ಫೆಡರೇಶನ್‌ನಿಂದ ವೀಸಾ ಮತ್ತಿತರ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕಠಿನ ಕಾನೂನು ಪ್ರಕ್ರಿಯೆಯಿಂದ ಸಮಸ್ಯೆಯಾಗಿದೆ. ಈ ಬಗ್ಗೆ ಸಂಸದ ನಳಿನ್‌ ಮೂಲಕ ಕೇಂದ್ರ ಕ್ರೀಡಾ ಸಚಿವರ ಬಳಿಯೂ ಮಾತನಾಡಲಾಗಿದೆ. ಆದರೆ ಕೊನೆಯ ಕ್ಷಣದಲ್ಲಿ ಎಲ್ಲರಿಗೂ ಅವಕಾಶ ಸಿಗಲಿಲ್ಲ. ರಾಜ್ಯಕ್ಕಂತೂ ತುಂಬಾ ನಷ್ಟ. ಮುಂದಿನ ಬಾರಿ ಹೀಗಾಗದಂತೆ ಮುನ್ನೆಚ್ಚರಿಕೆ ವಹಿಸಲಾಗುವುದು.
– ಜಯರಾಮ್‌
ಖಜಾಂಚಿ, ರಾಜ್ಯ ಪವರ್‌ ಲಿಫ್ಟಿಂಗ್‌ ಫೆಡರೇಶನ್‌

ತುಂಬಾ ನಿರಾಶೆಯಾಗಿದೆ
ನಾವು ಆರೇಳು ತಿಂಗಳುಗಳಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದೆವು. ನನಗೆ ಇದು ಮೊದಲ ಅಂತಾರಾಷ್ಟ್ರೀಯು ಟೂರ್ನಿ. ವೀಸಾ ಅಡೆತಡೆಗಳನ್ನು ರಾಜ್ಯ ಮತ್ತು ರಾಷ್ಟ್ರೀಯ ಪವರ್‌ ಲಿಫ್ಟಿಂಗ್‌ ಫೆಡರೇಶನ್‌ ನಿವಾರಿಸಬೇಕಿತ್ತು. ಅವರು ಈ ಕೆಲಸ ಮಾಡಿಲ್ಲ. ನಾವು ಕೆನಡಾಕ್ಕೆ ಹೋಗುವ ಪ್ರಯಾಣ, ವಾಸ್ತವ್ಯ ಇನ್ನಿತರ ಖರ್ಚಿಗಾಗಿ ಫೆಡರೇಶನ್‌ಗೆ 1.50 ಲಕ್ಷ ರೂ. ಕೂಡ ಪಾವತಿಸಿದ್ದೇವೆ. ಆದರೆ ಕೊನೆಯ ಕ್ಷಣದಲ್ಲಿ ಹೀಗಾಗುತ್ತದೆ ಎಂದು ಗೊತ್ತಿರಲಿಲ್ಲ. ಭಾರೀ ನಿರಾಶೆಯಾಗಿದೆ.
– ಸತೀಶ್‌ ಖಾರ್ವಿ ಕುಂದಾಪುರ

– ಪ್ರಶಾಂತ್‌ ಪಾದೆ

ಟಾಪ್ ನ್ಯೂಸ್

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

1-weqeqwewe

Sunriser Hyderabad; ಚೇಸಿಂಗ್‌ ಸಾಮರ್ಥ್ಯ ಪ್ರದರ್ಶಿಸಬೇಕಿದೆ: ವೆಟೋರಿ

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

badminton

Badminton; ಇಂದಿನಿಂದ ಥಾಮಸ್‌ ಕಪ್‌ ಟೂರ್ನಿ ಆರಂಭ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP 2

Google ಜಾಹೀರಾತಿಗೆ ಬಿಜೆಪಿ ವೆಚ್ಚ ಮಾಡಿದ ಹಣವೆಷ್ಟು ಗೊತ್ತೆ?

ec-aa

EC ಗುರಿ ಸಾಧನೆಗೆ ಹಿನ್ನಡೆ? 14 ಕ್ಷೇತ್ರಗಳಲ್ಲಿ ನಿರೀಕ್ಷಿತ ಯಶಸ್ಸು ಕಾಣದ ಮತದಾನ

Vijay Mallya

Vijay Mallya ಹಸ್ತಾಂತರಕ್ಕೆ ಫ್ರಾನ್ಸ್‌ನೊಂದಿಗೆ ಭಾರತ ಮಾತುಕತೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

ಇಂದು ಬೆಳಗಾವಿಯಲ್ಲಿ ಮೋದಿ ವಾಸ್ತವ್ಯ; ಜೊಲ್ಲೆ ಸಮೂಹದ ವೆಲ್‌ಕಮ್‌ ಹೊಟೇಲ್‌ನಲ್ಲಿ ವ್ಯವಸ್ಥೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.