ಭಾರತದ ಸೆಮಿಫೈನಲ್ ಸಾಧ್ಯತೆ ಉಜ್ವಲ
Team Udayavani, Feb 26, 2020, 6:55 AM IST
ಮೆಲ್ಬರ್ನ್: ಐಸಿಸಿ ವನಿತಾ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಇನ್ನೂ ಆರಂಭಿಕ ಹಂತದಲ್ಲೇ ಇದೆ. ಕೇವಲ 6 ಪಂದ್ಯಗಳಷ್ಟೇ ನಡೆದಿವೆ. “ಬಿ’ ಗುಂಪಿನಲ್ಲಿ ಪಾಕಿಸ್ಥಾನ ಇನ್ನೂ ಆಡಲಿಳಿದಿಲ್ಲ. ಆದರೆ ಹೆಚ್ಚು ಪೈಪೋಟಿಯನ್ನು ಹೊಂದಿರುವ “ಎ’ ವಿಭಾಗದಲ್ಲಿ ಭಾರತ ಆಗಲೇ ತನ್ನ ಸೆಮಿಫೈನಲ್ ಸಾಧ್ಯತೆಯನ್ನು ಹೆಚ್ಚಿಸಿಕೊಂಡಿರುವುದು ಈ ಕೂಟದ ವಿಶೇಷ.
ಸೆಮಿ ಪ್ರವೇಶಕ್ಕೆ ನಾಲ್ಕರಲ್ಲಿ ಕನಿಷ್ಠ 3 ಪಂದ್ಯಗಳನ್ನು ಗೆಲ್ಲುವುದು ಅಗತ್ಯ. ಹೀಗಾಗಿ ಭಾರತಕ್ಕೆ ಬಾಕಿ ಇರುವುದು ಇನ್ನೊಂದು ಮೆಟ್ಟಿಲು ಮಾತ್ರ.
ಆರಂಭದಲ್ಲೇ ಕಾಂಗರೂ ಬೇಟೆ
ಹರ್ಮನ್ಪ್ರೀತ್ ನೇತೃತ್ವದ ಭಾರತ ಈವರೆಗೆ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿರುವ ಏಕೈಕ ತಂಡ. ಇದಕ್ಕಿಂತ ಮಿಗಿಲಾಗಿ, ಹಾಲಿ ಚಾಂಪಿಯನ್ ಖ್ಯಾತಿಯ ಆತಿಥೇಯ ಆಸ್ಟ್ರೇಲಿಯ ವನ್ನು ಮೊದಲ ಪಂದ್ಯದಲ್ಲೇ ನೆಲಕ್ಕೆ ಕೆಡವಿದ್ದು ಭಾರತದ ಮಹಾನ್ ಸಾಧನೆಯಾಗಿ ದಾಖಲಾಗಿದೆ. ಇದು ಹೈ ವೋಲ್ಟೆàಜ್ ಪಂದ್ಯವಾದ್ದರಿಂದ, ಇಲ್ಲಿ ಗೆದ್ದವರಿಗೆ ಮುಂದಿನ ಹಾದಿ ಸುಗಮ ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. ಇದರ ಲಾಭವೀಗ ಭಾರತಕ್ಕೆ ಲಭಿಸಿದೆ.
ಆರಂಭದಲ್ಲೇ ದೊಡ್ಡ ಬೇಟೆ ಯಾಡಿದ ಭಾರತ ತನ್ನ ಮೇಲಿನ ಒತ್ತಡವನ್ನೆಲ್ಲ ಒಮ್ಮೆಲೇ ಇಳಿಸಿಕೊಂಡಿತು. ಸೋಮವಾರ ಬಾಂಗ್ಲಾದೇಶವನ್ನೂ ಮಣಿಸಿತು. ಮುಂದೆ ನ್ಯೂಜಿಲ್ಯಾಂಡ್ ಎದುರಾಗಲಿದ್ದು, ಗೆಲುವಿನ ಹ್ಯಾಟ್ರಿಕ್ ಸಾಧಿಸಿದರೆ ಭಾರತಕ್ಕೆ ಅದು ಜಾಕ್ಪಾಟ್ ಆಗಿ ಪರಿಣಮಿಸಲಿದೆ. ಕೊನೆಯಲ್ಲಿ ಉಳಿದಿರುವುದು ಶ್ರೀಲಂಕಾ ಸವಾಲು ಮಾತ್ರ. ಅದು ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿದೆ.
ಅಕಸ್ಮಾತ್ ಭಾರತ ಉಳಿದೆರಡೂ ಪಂದ್ಯಗಳನ್ನು ಸೋತರೆ “ಎ’ ವಿಭಾಗದ ಅಷ್ಟೂ ಲೆಕ್ಕಾಚಾರ ತಲೆಕೆಳಗಾಗಲಿದೆ!
ಸಮತೋಲಿತ ತಂಡ
ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಸಮತೂಕ ಹೊಂದಿರುವ ತಂಡ. ಶಫಾಲಿ, ಮಂಧನಾ, ಜೆಮಿಮಾ, ಕೌರ್, ದೀಪ್ತಿ, ವೇದಾ ಅವರೆಲ್ಲ ಈಗಾಗಲೇ ತಮ್ಮ ಬ್ಯಾಟಿಂಗ್ ಸಾಹಸ ಪ್ರದರ್ಶಿಸಿದ್ದಾರೆ. ಆದರೆ ಮೊದಲು ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ಇವರು ಯಶಸ್ವಿಯಾದರೆ ಬೌಲರ್ಗಳ ಕೆಲಸವನ್ನು ಹಗುರಗೊಳಿಸಬಹುದು.
ಸ್ಪಿನ್ ಬೌಲಿಂಗ್ ಭಾರತದ ಪ್ರಮುಖ ಅಸ್ತ್ರವಾಗಿದೆ. ಪೂನಂ, ರಾಜೇಶ್ವರಿ, ದೀಪ್ತಿ ಅವರ ತ್ರಿವಳಿ ಸ್ಪಿನ್ ದಾಳಿ ಎದುರಾಳಿಗಳ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ. ಪ್ರಧಾನ ವೇಗಿ ಶಿಖಾ ಪಾಂಡೆ ಕೂಡ ಲಯದಲ್ಲಿದ್ದಾರೆ. ಕೀಪಿಂಗ್, ಫೀಲ್ಡಿಂಗ್ ಕೂಡ ಉತ್ತಮ ಮಟ್ಟದಲ್ಲಿದೆ. ಮುಂದಿನದ್ದೆಲ್ಲ ಅದೃಷ್ಟದ ಆಟ!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
IPL 2024; ಗುಜರಾತ್ ಗೆ ಆರ್ ಸಿಬಿ ಸವಾಲು: ತಂಡಕ್ಕೆ ಮರಳಿದ ಗ್ಲೆನ್ ಮ್ಯಾಕ್ಸವೆಲ್
PCB: ಭಾರತದ ವಿಶ್ವಕಪ್ ಗೆಲುವಿನ ರೂವಾರಿ ಈಗ ಪಾಕಿಸ್ತಾನ ತಂಡದ ಹೊಸ ಕೋಚ್
IPL: ಆಟ ಮೆರೆದಾಟ; ಬ್ಯಾಟಿಂಗ್ ಅಷ್ಟೇ ಕ್ರಿಕೆಟ್ಟಾ?
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ