ಭಗವದ್ಗೀತೆಯಿಂದ ಪ್ರೇರಿತರಾದ ಕಂಚು ಗೆದ್ದ ಶರದ್ ಕುಮಾರ್
Team Udayavani, Sep 2, 2021, 9:07 PM IST
ಟೋಕ್ಯೊ: ಆ.31ರಂದು ಪ್ಯಾರಾಲಿಂಪಿಕ್ಸ್ನಲ್ಲಿ ಭಾರತದ ಶರದ್ ಕುಮಾರ್ ಕಂಚಿನ ಪದಕ ಗೆದ್ದಿದ್ದರು. ಅದರ ಹಿಂದಿನ ರಾತ್ರಿಯಿಡೀ ಅವರು ಅತ್ತಿದ್ದರು.
ಮಂಡಿಯಲ್ಲಿ ಮೂಳೆಯೊಂದು ಸ್ವಲ್ಪ ವ್ಯತ್ಯಾಸವಾದ ಪರಿಣಾಮ ಮರುದಿನ ಸ್ಪರ್ಧಿಸಲು ಆಗುವುದಿಲ್ಲವಲ್ಲ, ಇಷ್ಟು ದಿನದ ಪರಿಶ್ರಮ ವ್ಯರ್ಥವಾಗುತ್ತಲ್ಲ ಎಂದು ಅವರು ಕಂಗಾಲಾಗಿದ್ದರು. ಆ ಹೊತ್ತಿನಲ್ಲಿ ಭಗವದ್ಗೀತೆಯ ಸಾಲುಗಳು ಅವರ ನೆರವಿಗೆ ಬಂದಿವೆ.
ಅವರ ತಂದೆ ಫೋನಿನಲ್ಲಿ ಓದಿ ಹೇಳಿದ ಗೀತೆಯ ಸಾಲಿನಿಂದ ಪ್ರೇರಿತರಾದ ಅವರು ಸ್ಪರ್ಧಿಸುವ ನಿರ್ಧಾರ ಮಾಡಿ ಕಡೆಗೆ ಕಂಚನ್ನೇ ಗೆದ್ದರು! ಪ್ರಯತ್ನ ಮಾಡುವುದಷ್ಟೇ ನಮ್ಮ ಜವಾಬ್ದಾರಿ. ಯಾವುದು ನಮ್ಮ ನಿಯಂತ್ರಣದಲ್ಲಿದೆಯೋ ಅದನ್ನು ಚೆನ್ನಾಗಿ ಮಾಡಬೇಕು, ನಮ್ಮ ನಿಯಂತ್ರಣದಲ್ಲಿಲ್ಲದ ಸಂಗತಿಗಳ ಬಗ್ಗೆ ಕೊರಗುವ ಅಗತ್ಯವಿಲ್ಲ… ಈ ಅರ್ಥ ಬರುವ ಗೀತೆಯ ಸಾಲುಗಳನ್ನು ತಂದೆ ಓದಿದ್ದರು. ಭಗವದ್ಗೀತೆಯ ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ಇದೇ ಅರ್ಥವನ್ನು ಹೇಳುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್