ರಾಹುಲ್ ಮನೆಯಲ್ಲಿ 3 ಜನ ಪ್ರಧಾನಿಗಳಾದರೂ ಬಡತನ ನಿರ್ಮೂಲನೆ ಮಾಡಿಲ್ಲ: ಬಿಎಸ್ ವೈ
ಮೋದಿ ಪ್ರಧಾನಿಯಾಗಿರುವರೆಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡುವುದಿಲ್ಲ
Team Udayavani, Sep 10, 2022, 4:25 PM IST
ದೊಡ್ಡಬಳ್ಳಾಪುರ: ”ರಾಹುಲ್ ಗಾಂಧಿ ಬಡವರ ಬಗ್ಗೆ ಮಾತನಾಡುತ್ತಿದ್ದಾರೆ, ಅವರ ಮನೆಯಲ್ಲಿ 3 ಜನ ಪ್ರಧಾನ ಮಂತ್ರಿ ಆಗಿದ್ದರು ಆದರೆ ಅವರು ಬಡತನ ನಿರ್ಮೂಲನೆ ಮಾಡಿಲ್ಲ” ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬಿಜೆಪಿ ಜನ ಸ್ಪಂದನ ಕಾರ್ಯಕ್ರಮದಲ್ಲಿ ಗುಡುಗಿದ್ದಾರೆ.
”ಚಿಕ್ಕಬಳ್ಳಾಪುರ, ಭಾಗದಲ್ಲಿ ಸುಧಾಕರ್ ಅವರ ಪರಿಶ್ರಮದಿಂದ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರು ಆಯ್ಕೆ ಯಾದರೆ 150 ಸ್ಥಾನ ಗೆದ್ದು ಪಕ್ಷ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ. ರೈತರು, ನೇಕಾರರು ನಮ್ಮ ಪಕ್ಷದ ಎರಡು ಕಣ್ಣುಗಳು, ನಾನು ಸಿಎಂ ಆಗಿದ್ದಾಗ ನೇಕಾರರು, ರೈತರ ಸಾಲ ಮನ್ನಾ ಮಾಡಿದ್ದೇನೆ. ರೈತರಿಗೆ ಕೇಂದ್ರದ 6000 ರೂ ಜೊತೆಗೆ ನಾನು 4000 ರೂ. ಕೊಟ್ಟಿದ್ದೇನೆ” ಎಂದರು.
‘ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಬೋಟ್ ನಲ್ಲಿ ತಿರುಗಾಡುವ ಪರಿಸ್ಥಿತಿ ಬಂತು ಎಂದು ಹೇಳಿದ್ದಾರೆ. ಅಂದರೆ ಬೆಂಗಳೂರಲ್ಲಿ ಮಳೆ ಪ್ರಮಾಣ ಎಷ್ಟಾಗಿದೆ ಎನ್ನುವುದು ನಿಮಗೆ ಅರಿವಿದೆಯಲ್ಲವೆ. ನಿಮ್ಮ ಆರೋಪಕ್ಕೆ ಅಧಿವೇಶನದಲ್ಲಿ ಉತ್ತರ ಕೊಡುತ್ತೇವೆ. ಸಿದ್ದರಾಮಯ್ಯ ನಾನೇ ಸಿಎಂ ಎಂಬ ಭ್ರಮೆಯಲ್ಲಿದ್ದಾರೆ” ಎಂದರು.
”ಮೋದಿ ಪ್ರಧಾನಿಯಾಗಿರುವರೆಗೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಬಿಡುವುದಿಲ್ಲ.ಸುಧಾಕರ್ ಅವರ ಪರಿಶ್ರಮದಿಂದ ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿದ್ದು ನೋಡಿದರೆ ನಮ್ಮದೆ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ರಾಜ್ಯದ ಇನ್ನೂ ಐದಾರು ಕಡೆಗಳಲ್ಲಿ ಜನ ಸ್ಪಂದನ ಕಾರ್ಯಕ್ರಮ ಮಾಡಿದಾಗ ರಾಜ್ಯದಲ್ಲಿ ನಮ್ಮ ಶಕ್ತಿ ಏನು ಎಂದು ತಿಳಿಯಲಿದೆ” ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ