PHOTOS :ಐಶ್ವರ್ಯಾ- ಅಮರ್ಥ್ಯ ವಿವಾಹ ಸಂಭ್ರಮ: ಗಣ್ಯರು, ಧಾರ್ಮಿಕ ಮುಖಂಡರ ಉಪಸ್ಥಿತಿ
Team Udayavani, Feb 14, 2021, 10:19 AM IST
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪುತ್ರಿ ಐಶ್ವರ್ಯಾ ಮತ್ತು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮೊಮ್ಮಗ, ಉದ್ಯಮಿ ದಿ. ಸಿದ್ದಾರ್ಥ್ ಪುತ್ರ ಅಮರ್ಥ್ಯ ಅವರ ವಿವಾಹವು ಇಂದು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು.
ತಾಳಿ ಶಾಸ್ತ್ರ ವೇಳೆ ತೀರಾ ಭಾವುಕರಾದ ಡಿಕೆ ಶಿವಕುಮಾರ್ ಕಣ್ಣೀರು ಹಾಕುತ್ತಲೇ ಇಬ್ಬರಿಗೂ ಅಕ್ಷತೆ ಹಾಕಿ ಹರಸಿದ್ದಾರೆ.
ಇದನ್ನೂ ಓದಿ:ವಿಡಿಯೋ: ಜ್ಯೂನಿಯರ್ ಚಿರು ಮುದ್ದುಮುಖ ಅನಾವರಣ ಮಾಡಿದ ಮೇಘನಾ ಸರ್ಜಾ
ಸಮಾರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಜಗದೀಶ್ ಶೆಟ್ಟರ್ ವಿ. ಸೋಮಣ್ಣ, ಸೇರಿದಂತೆ ಹಲವು ಗಣ್ಯರು ಸೇರಿದ್ದರು. ಹಲವು ಮಠಾಧೀಶರು, ಧಾರ್ಮಿಕ ಮುಖಂಡರು ನವ ವಧುವರರಿಗೆ ಶುಭ ಹಾರೈಸಿದರು.
ಫೆ.17 ರಂದು ಖಾಸಗಿ ಹೋಟೆಲ್ನಲ್ಲಿ ಆರತಕ್ಷತೆ ಇದ್ದು ಕೊರೊನಾ ಹಿನ್ನೆಲೆಯಲ್ಲಿ ಸೀಮಿತ ಹಾಗೂ ಪ್ರಮುಖರಿಗಷ್ಟೇ ಆಹ್ವಾನ ನೀಡಲಾಗಿದೆ ಎಂದು ಹೇಳಲಾಗಿದೆ.