ಪ್ರೀತಿಯೆಂದರೆ, ರೆಡಿಮೇಡ್ ಖುಷಿಯಲ್ಲ…!

ಇಲ್ಲಿ ಯಾರನ್ನು ದೂರಿಯೂ ಪ್ರಯೋಜನವಿಲ್ಲ, ಇದು 4G ಯುಗದ ಪ್ರೀತಿಯಲ್ಲವೇ !!  

Team Udayavani, Feb 14, 2021, 10:29 AM IST

Love

ಮೂರು ವರ್ಷದಲ್ಲಿ ಮೂರೇ ಸಲ ಅವರಿಬ್ಬರ ಭೇಟಿ ಆಗಿದ್ದು, ಆ ಭೇಟಿಗೆ ಪ್ರೀತಿಯೆಂದು ಹೆಸರು ಕೊಟ್ಟುಕೊಂಡಿದ್ದೂ ಅವರಿಬ್ಬರೇ.

ಆ ಒಂದು ಭೇಟಿಗಾಗಿ ಇಡೀ ವರ್ಷವೇ ಕಾದು ಎಷ್ಟೆಲ್ಲ ಮಾತನಾಡಬೇಕೆಂದು ಕಂಠಪಾಠ ಮಾಡಿಕೊಂಡೇ ಹೊರಡುವ ಅವಳು, ಅವನೆದುರು ಬಂದಾಗ ನಿಶ್ಯಬ್ಧವಾಗುತ್ತಾಳೆ, ಬರೀ ಮೌನವನ್ನೇ ಹೊತ್ತು ನಿಲ್ಲುತ್ತಾಳೆ. ಅವ ಜೊತೆಗಿದ್ದಷ್ಟು ಹೊತ್ತೂ ಅವಳು ಹಸನ್ಮುಖಿ, ಆ ತಿರುವಿನಲ್ಲಿ ಅವ ಮರೆಯಾಗುವುದನ್ನೇ ನೋಡುತ್ತಾ ನಿಲ್ಲುವ ಅವಳು ಅವನು ಕಣ್ಮರೆಯಾದ ತಕ್ಷಣವೇ ದುಃಖದಿಂದ ಕಣ್ಣೀರುಗರೆಯುತ್ತಾಳೆ, ಅವನು ಈ ಕ್ಷಣಕ್ಕೆ ಮಾತ್ರ ದೂರವಾದ ಅದು ಶಾಶ್ವತವಾಗಿ ಅಲ್ಲ ಎಂದು ಮೆದುಳು ಮನಸ್ಸಿಗೆ ಸಮಾಧಾನಿಸುತ್ತದೆ, ಆದರೆ ಮನಸ್ಸು ಎಂದೂ ಮೆದುಳಿನ ಮಾತೊಂದನ್ನೂ ಕೇಳುವುದಿಲ್ಲ, ಇದು ಪ್ರೀತಿ!

ಅವನ ಮಾಸದ ನಗು, ಅವನು! ಇದಿಷ್ಟಿದ್ದರೇ ಅವಳಿಗೆ ಸಾಕೆನಿಸುತ್ತದೆ, ಅದೇ ಬೇಕೆನಿಸುತ್ತದೆ, ಪ್ರೀತಿಯಲ್ಲಿದ್ದವರು ಏಕಾಏಕಿ  ಹೊಸ ಒಲವಿನೆಡೆಗೆ ಹೊಳಪುಗಣ್ಣುಗಳಿಂದ ಹೊರಳಿಕೊಳ್ಳುವುದೆಲ್ಲ  ಇವಳಿಗೆ ಬಲು ಸೋಜಿಗ. ಅವಳು ಒಬ್ಬನನ್ನೇ ಆರಾಧಿಸುವ ಪೊಸೆಸಿವ್ ಪ್ರೇಮಿ,ಪತಿವ್ರತೆ!

ಓದಿ : ವಿಡಿಯೋ: ಜ್ಯೂನಿಯರ್ ಚಿರು ಮುದ್ದುಮುಖ ಅನಾವರಣ ಮಾಡಿದ ಮೇಘನಾ ಸರ್ಜಾ

ಅವಳ ಕೈಯ ಮದರಂಗಿಯಂತೆ ಅವನಿರಬೇಕಿತ್ತು‌ ಸದಾ ಜೊತೆಗೆ…ಕೈಯ ಜೊತೆಗೇ ಕೆನ್ನೆಯ ಕೆಂಪಾಗಿಸಲು. ಅವಳು ಪ್ರೀತಿಸಿದ್ದೂ ಸತ್ಯ, ಅಲ್ಲಿ ಸ್ವಾರ್ಥವಿರಲಿಲ್ಲ. ಪ್ರೀತಿಯಲ್ಲಿ ಅವನೂ ಅವಳಷ್ಟೇ ಪರಿಶುದ್ಧ, ಅವನ ಪ್ರೇಮವೆಲ್ಲವೂ ಅವಳೆಡೆಗೆ ಮಾತ್ರ.

ಇದು ಪರಿಶುದ್ಧ ಪ್ರೀತಿ ಹಾಗೂ ಅವರ ದೃಷ್ಟಿಯಲ್ಲಿ ಅವರ ಪ್ರೀತಿಯ ವ್ಯಾಖ್ಯಾನವಷ್ಟೇ. ಯಾರೋ ಒಬ್ಬರು ನಮ್ಮನ್ನು ಅದಮ್ಯವಾಗಿ ಪ್ರೀತಿಸುತ್ತಾರೆ ಎಂಬ ಕಲ್ಪನೆಯೇ ಎಷ್ಟು ರೋಮಾಂಚನಕ್ಕೆ ಒಳಗುಗೊಳ್ಳಿಸುತ್ತದೆ..?

ನೀವು ಆಲೋಚಿಸಬಹುದು, ಇಂತಹದ್ದೊಂದು ಪ್ರೇಮವೊಂದು ಈಗಲೂ ಜಾರಿಯಲ್ಲಿದೆಯೇ ಎಂದು, ಮಣ್ಣರಾಶಿಯ ನಡುವೆಯಲ್ಲೆಲ್ಲೋ ಗುಂಡುಸೂಜಿಯಷ್ಟೇ ಚಿನ್ನವು ಗೋಚರಿಸುವಂತೆ ಸ್ವಚ್ಛ – ಸುಂದರ ಪ್ರೇಮವೂ ಜಾರಿಯಲ್ಲಿರಬಹುದು, ಪ್ರೀತಿಯೆಂದರೆ ಎರಡು ಮುದ್ದು ಮನಸುಗಳ ಸಮ್ಮಿಲನ, ಪ್ರೀತಿಯೆಂದರೆ ಕಾಳಜಿಯ ಕೊಡುಕೊಳ್ಳುವಿಕೆ, ಪ್ರೀತಿಯೆಂದರೆ ನಿಷ್ಕಲ್ಮಶ, ನಿಸ್ವಾರ್ಥತೆ, ಪ್ರೀತಿಯೆಂದರೆ ಭಾವನೆಗಳ ಮೂಟೆ, ಪ್ರೀತಿಯೆಂದರೆ ಒಬ್ಬರಿಗಾಗಿ ಇನ್ನೊಬ್ಬರು ಸದಾ ಕಾಲ ಮಿಡಿಯುವುದು,  ಪ್ರೀತಿಯೆಂದರೆ ಒಂದು ಬಗೆಯ ಆರ್ದೃತೆ,  ಇನ್ನೂ ಹೆಚ್ಚು ಹೇಳುವುದೆಂದರೆ ಪ್ರೀತಿಯೆಂದರೆ ತ್ಯಾಗವೇ ಸೈ!

ಮಾಡರ್ನ್ ಯುಗದ ಹಲವರ ಪ್ರಕಾರ ಪ್ರೀತಿಯ ವ್ಯಾಖ್ಯಾನ ಇತ್ತೀಚಿಗೆ ಬದಲಾದಂತಿದೆ. ಅವನಿಗಾಗಿ ಅವಳು ವರ್ಷಗಟ್ಟಲೆ ಕಾದಳು, ಅದೂ ಕೇವಲ ಅವನನ್ನು ನೋಡಿ ಕಣ್ತುಂಬಿಕೊಳ್ಳಲು ಎಂತೆಲ್ಲ ಈಗಿನ ಕಾಲದಲ್ಲಿ ಪ್ರೇಮದ ಕುರಿತು ಹೇಳಹೊರಟರೆ  ಮಾಡರ್ನ್ ಯುಗದ ಹದಿಹರೆಯದವರು  ನಗುತ್ತಾರಷ್ಟೇ! ಪ್ರೀತಿ-ಪ್ರೇಮದ ಹೆಸರಲ್ಲಿ ನಡೆಸುವ ಮೀಟಿಂಗ್, ಚಾಟಿಂಗ್, ಡೇಟಿಂಗ್ ಗೆಲ್ಲ ಒಂದು ಅರ್ಥವಿದೆಯೇ? ಇದೆಲ್ಲ ಜೀವನವನ್ನು ಅನುಭವಿಸಲು ಕಂಡುಕೊಂಡ ತಾತ್ಕಾಲಿಕ ಮಾರ್ಗವಷ್ಟೇ, ಪ್ರೀತಿ-ಮದುವೆ-ಸಂಸಾರ ಎಂದೆಲ್ಲ ತಲೆಕೆಡಿಸಿಕೊಳ್ಳಲು ತಯಾರಿಲ್ಲದ ಇವರು ಈ ರೆಡಿಮೇಡ್ ಖುಷಿಯ ಮೊರೆಹೋಗುವುದಂತೂ ಸತ್ಯ, ಇಂತಹುದೇ ಎಂಜಾಯ್ಮೆಂಟ್ಗಳು ಹೆಚ್ಚಾಗಿಯೇ ಹದಿಹರೆಯದವರು ಹಾದಿ ತಪ್ಪುತ್ತಿರುವುದು ಎಂದರೆ ತಪ್ಪಾಗಲಾರದು, ಅದೂ ಪ್ರೀತಿ-ಪ್ರೇಮದ ಹೆಸರಿನಲ್ಲಿ ನಡೆವ ಹಲವು ದುರಾಚಾರಗಳಿಂದಾಗಿಯೇ ಶುದ್ಧ ಪ್ರೀತಿಯ ಅಸ್ಮಿತತೆ ಕಳೆದು ಹೋಗುತ್ತಿರುವುದು‌.

ಇಲ್ಲಿ ಯಾರನ್ನು ದೂರಿಯೂ ಪ್ರಯೋಜನವಿಲ್ಲ, ಇದು 4G ಯುಗದ ಪ್ರೀತಿಯಲ್ಲವೇ !!   ಶಾಲಾ-ಕಾಲೇಜುಗಳಲ್ಲಿ ಹುಟ್ಟುವ ಮೊದ-ಮೊದಲ ಪ್ರೀತಿಯಲ್ಲ ಹೇಗೆ ಕೊನೆಗಾಣುತ್ತವೆ? ಮದುವೆಯಲ್ಲಿಯೇ? ಇರಬಹುದು, ಅವಳ ಮದುವೆಯಲ್ಲಿಯೋ  ಅವನ ಕಂಬನಿಗಳಲ್ಲಿಯೋ  ಕೊನೆಗೊಳ್ಳಬಹುದು, ಅಥವಾ ಅವನ ಮೋಸದ ಹೊಂಚಿನಲ್ಲಿಯೋ ಅವಳ ಮರಣದಲ್ಲಿಯೋ ಕೊನೆಯಾಗಬಹುದು, ಅಥವಾ ಇಬ್ಬರೂ ನ್ಯಾಯವಾಗಿರದೆ ಒಬ್ಬರೊನ್ನೊಬ್ಬರು ದ್ವೇಷಿಸಿ ದೂರಾಗಬಹುದು, ಸಾವಿರಕ್ಕೆ ಹತ್ತರಷ್ಟು ಜನ ಮೊದಲ ಪ್ರೇಮಿಯನ್ನೇ ಮದುವೆಯಾಗಿ ಸಂಸಾರದಲ್ಲಿ ಮುಳುಗಲೂಬಹುದು, ತುಂಬಾ ಸಾಧ್ಯತೆಗಳಿವೆ.

ಓದಿ :  ಕವಿತೆಯಾಗಿ ಉಳಿದ ಹುಡುಗ

ಎಷ್ಟೇ ಆದರೂ ಆ ಪತ್ರ ವ್ಯವಹಾರದ ಕಾಲದ ಪ್ರೀತಿಯ ಮುಂದೆ ಈ 4ಜಿ ಯುಗದ ಪ್ರೀತಿ ಒಂಥರಾ ಉಪ್ಪಿನ ಕಾಯಿ ಇಲ್ಲದ ಊಟದಂತೆ, ಬರೀ ಶುಷ್ಟ ಉಣಸು.  ಪ್ರೀತಿಯಲ್ಲಿ ಒಬ್ಬರು ಇನ್ನೊಬ್ಬರಿಗಾಗಿ ವಾರಗಟ್ಟಲೆ, ತಿಂಗಳುಗಟ್ಟಲೆ ಕೇವಲ ಒಂದೇ ಒಂದು ಪತ್ರಕ್ಕಾಗಿ ಕಾಯುವ  ಮುದವನ್ನು ಈ ಮೊಬೈಲ್ ನೀಡಲಾರದೆಂದುಕೊಳ್ಳುತ್ತೇನೆ. ಕಾಯುವಿಕೆ ಹೆಚ್ಚಾದಂತೆಲ್ಲಾ ಪ್ರೀತಿಯ ತೀವ್ರತೆಯೂ ಹೆಚ್ಚಾಗುವ ಸಾಧ್ಯತೆಯಿದೆ, ದೂರದಲ್ಲಿದ್ದರೇ ಪ್ರೀತಿ ಹೆಚ್ಚಲ್ಲವೇ?!

ಇನ್ನೂ ಕೆಲವು ಮುಗ್ಧ ಪ್ರೀತಿಗಳೆಲ್ಲ ಹಿರಿಯರ ಒತ್ತಡಕ್ಕೆ ಬಲಿಯಾಗುತ್ತವೆ, ಇಂತಹ ವಿಚಾರಗಳ ಬಗ್ಗೆ ಸಂತಾಪವಿದೆ. ಯಾಕೆಂದರೆ ಪ್ರೀತಿಯೊಂದು ಕುಡಿಯೊಡೆಯುವಾಗ ಕೇಳಿ ಬರುವುದಿಲ್ಲ, ಅದೊಂದು ಭಾವವಷ್ಟೇ, ಭಾವನೆಗಳು ಜನಿಸುವುದೇ ತಪ್ಪೆಂದರೆ ಉಸಿರಾಡುವುದೂ ತಪ್ಪೆಂದಂತೆ ಅಲ್ಲವೇ?

ಪ್ರೀತಿಯ ವ್ಯಾಖ್ಯಾನವೆಲ್ಲ ಕೊಂಚ-ಕೊಂಚವೇ ಬದಲಾಗಿ ಮುಂದಿನ ಪೀಳಿಗೆಗೆ ಅದರ ಅರ್ಥವೆ ತಿಳಿಯದೆ   ಕೇವಲ ಜೊತೆಗೆ ಓಡಾಡುವುದು, ದುಬಾರಿ ಉಡುಗೊರೆಗಳನ್ನು ನೀಡುವುದು, ಸ್ವೀಕರಿಸುವುದನ್ನೇ ಪ್ರೀತಿಯೆಂದುಕೊಂಡರೆ ? ಹೀಗಾಗುವ ಮುನ್ನವೇ ಈ ಪೀಳಿಗೆಯವರು ಆಲೋಚಿಸಬೇಕಾಗಿದೆ, ಮುಂದಿನ ಪೀಳಿಗೆಗೆ ತಿಳಿಹೇಳುವ ಮೊದಲು ತಾವೇ ಹಾದಿ ತಪ್ಪುವಂತಹ ಕಾರ್ಯ ಮಾಡಲೇಬೇಡಿ, ಕೊನೆಗೂ ಪ್ರೀತಿ ಪ್ರೀತಿಯೇ ಆಗಿರಲಿ ಮತ್ತು ಪರಿಶುದ್ಧವಾಗಿರಲಿ, ಶುಧ್ಧ ಪ್ರೀತಿಗೆ, ಪರಿಶುದ್ಧ ಮನಗಳಿಗೆ ಮೋಸವಾಗದಿರಲಿ. ಪ್ರೀತಿ ಬೆಳಗುತಲೇ ಇರಲಿ.

-ವಿನಯಾ ಶೆಟ್ಟಿ, ಕೌಂಜೂರು

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.