ಅಂಬಿ ನಾಮಫಲಕ ತೆರವು: ರೊಚ್ಚಿಗೆದ್ದ ಅಭಿಮಾನಿಗಳು
Team Udayavani, Mar 4, 2019, 12:30 AM IST
ಮಂಡ್ಯ: ಚಿತ್ರನಟ ಹಾಗೂ ಮಾಜಿ ಸಚಿವ ದಿ.ಅಂಬರೀಶ್ ಸ್ವಗ್ರಾಮ ಮದ್ದೂರು ತಾಲೂಕು ದೊಡ್ಡರಸಿನ ಕೆರೆ ಗ್ರಾಮದಲ್ಲಿ ಅಳವಡಿಸಲಾಗಿದ್ದ ಅಂಬಿ ನಾಮ ಫಲಕವನ್ನು ತೆರವುಗೊಳಿಸಿದ್ದರಿಂದ ಅಂಬರೀಶ್ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಈ ಪ್ರಕರಣ ಮತ್ತೂಂದು ವಿವಾದಕ್ಕೂ ಕಾರಣವಾಗಿದೆ.
ಗ್ರಾಮದ ಮುಟ್ಟನ ಹಳ್ಳಿ ರಸ್ತೆಗೆ ಅಂಬರೀಶ್ ಹೆಸರನ್ನಿಟ್ಟು ನಾಮ ಫಲಕವನ್ನು ಅಭಿಮಾನಿಗಳು ಅಳವಡಿಸಿದ್ದರು. ಫೆ.28ರಂದು ಸುಮ ಲತಾ ಉದ್ಘಾಟನೆ ಮಾಡಬೇಕಿತ್ತು. ಆದರೆ ನಾಮಫಲಕ ಅಳವಡಿಕೆಗೆ ಅನು ಮತಿ ಪಡೆದಿಲ್ಲ ಎಂಬ ಕಾರಣದಿಂದ ಉದ್ಘಾಟನೆಗೆ ಪೊಲೀಸರು ತಡೆಯೊಡ್ಡಿದ್ದರು. ಲೋಕಸಭಾ ಚುನಾವಣೆ ಬಳಿಕ ಉದ್ಘಾಟಿಸುವಂತೆ ಸೂಚಿಸಿದ್ದರು. ಈ ಹಿನ್ನೆಲೆ ಯಲ್ಲಿ ಅಂಬ ರೀಶ್ ಭಾವ ಚಿತ್ರ ಕಾಣ ದಂತೆ ಪೇಪರ್ನಿಂದ ಅಭಿಮಾನಿಗಳು ಮುಚ್ಚಿದ್ದರು. ಆದರೆ ಶನಿವಾರ ಗ್ರಾಮ ಪಂಚಾಯಿತಿ ಅಧಿಕಾರಿಗಳು ಏಕಾಏಕಿ ನಾಮಫಲಕವನ್ನು ತೆರವು ಮಾಡಿದ್ದಾರೆ. ಇದು ಸಹಜವಾಗಿ ಅಂಬಿ ಅಭಿಮಾನಿಗಳನ್ನು ಕೆರಳಿಸಿದೆ.
ನಾಮಫಲಕ ತೆರವು ಹಿಂದೆ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರ ಕೈವಾಡ ಇದೆ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ. ಡಿ.ಸಿ. ತಮ್ಮಣ್ಣ ಸಹ ಅಂಬರೀಶ್ ಅವರ ದೊಡ್ಡರಸಿನಕೆರೆ ಗ್ರಾಮದವರೇ ಆಗಿದ್ದಾರೆ. ಅಂಬಿಗೆ ಸೋದರ ಸಂಬಂಧಿಯೂ ಆಗಿದ್ದ ತಮ್ಮಣ್ಣ ಚುನಾವಣೆಗಳಲ್ಲಿ ಸಾಮಾನ್ಯವಾಗಿ ಅಂಬರೀಶ್ ಅವರೊಟ್ಟಿಗೆ ಬಂದು ಮತ ಚಲಾಯಿಸುತ್ತಿದ್ದರು. ಆವರ ಒತ್ತಡದಿಂದಲೇ ನಾಮಫಲಕವನ್ನು ತೆರವು ಮಾಡುವ ಮೂಲಕ ಕೀಳು ಮಟ್ಟದ ರಾಜ ಕೀಯ ಮಾಡುತ್ತಿದ್ದಾರೆ ಎಂಬುದು ಅಂಬಿ ಅಭಿಮಾನಿಗಳ ಆರೋಪವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
Lok Sabha Election; ಮತದಾನ ಮಾಡಿದ ಬಳಿಕ 7 ಮಂದಿ ಸಾವು
MUST WATCH
ಹೊಸ ಸೇರ್ಪಡೆ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ