ಚುನಾವಣಾ ಆಯುಕ್ತರಾಗಿ ಬಸವರಾಜು ಅಧಿಕಾರ ಸ್ವೀಕಾರ
Team Udayavani, Jul 2, 2019, 3:01 AM IST
ಬೆಂಗಳೂರು: ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ನೇಮಕಗೊಂಡ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಡಾ. ಬಿ.ಬಸವರಾಜು ಅವರು ಸೋಮವಾರ ಅಧಿಕಾರ ವಹಿಸಿಕೊಂಡರು.
ಪಿ.ಎನ್. ಶ್ರೀನಿವಾಸಾಚಾರಿ ಅವರು ಜೂ.10ರಂದು ನಿವೃತ್ತಿ ಹೊಂದಿದ ಬಳಿಕ ಚುನಾವಣಾ ಆಯುಕ್ತರ ಹುದ್ದೆ ತೆರವುಗೊಂಡಿತ್ತು. ಆ ಹುದ್ದೆಗೆ ಡಾ. ಬಿ. ಬಸವರಾಜು ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಜೂ.28ರಂದು ಆದೇಶ ಹೊರಡಿಸಿತ್ತು.