Belgavi;ತಾಯಿಯ ಹಸಿವು.. ಮಗನ ಆತ್ಮಹತ್ಯೆ ಪ್ರಕರಣಕ್ಕೆ ರೋಚಕ ತಿರುವು: ಪೊಲೀಸರ ತನಿಖೆ
ತಾಯಿ, ಮಗನೆ ಅಲ್ಲ.. ಇಬ್ಬರೂ ಪಾನಮತ್ತರಾಗಿದ್ದರು... !!, ನೆರವಿಗೆ ಬಂದಿದ್ದ ಎನ್ ಜಿ ಓಗೆ ನೋಟಿಸ್
Team Udayavani, Feb 7, 2024, 6:01 PM IST
ಬೆಳಗಾವಿ: ಆಹಾರ ಸಿಗದೇ ಹಸಿವಿನಿಂದ ಬಳಲುತ್ತಿದ್ದ ತಾಯಿಯ ಪರದಾಟ ನೋಡದೇ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಪ್ರಕರಣಕ್ಕೆ ದೊಡ್ಡ ತಿರುವು ದೊರಕಿದ್ದು, ಪೊಲೀಸರ ತನಿಖೆ ವೇಳೆ ಇಬ್ಬರ ಸಂಬಂಧ ತಾಯಿ-ಮಗನದ್ದು ಅಲ್ಲ ಎಂದು ಬಹಿರಂಗವಾಗಿದೆ.
ಬೆಳಗಾವಿ ಎಸ್ಪಿ ಭೀಮಾಶಂಕರ ಗುಳೇದ್ ಅವರು ಪ್ರಕರಣಕ್ಕೆ ಸಂಬಂಧಿಸಿ ವಿವರಗಳನ್ನು ನೀಡಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಯುವಕ ಹಾಗೂ ಮಹಿಳೆ ತಾಯಿ ಮಗ ಅಲ್ಲ. ಹಸಿವಿನಿಂದ ಆತ್ಮಹತ್ಯೆ ಎಂಬುದು ಸುಳ್ಳು ಎಂದು ತನಿಖೆ ವೇಳೆ ಕಂಡು ಬಂದಿದೆ.ಮೃತನ ನಿಜವಾದ ತಂದೆ, ತಾಯಿಯನ್ನು ನಂದಗಡ ಪೊಲೀಸರು ಕರೆಸಿ ವಿಚಾರಣೆ ಮಾಡಿದ್ದು ಸತ್ಯಾಂಶ ಬಯಲಾಗಿದೆ.
ಮೃತ ಬಸವರಾಜ್, ಶಾಂತವ್ವಳೊಂದಿಗೆ ಕಳೆದ 14ವರ್ಷದಿಂದ ಜತೆಗಿದ್ದ. ಕೂಲಿ ಕೆಲಸಕ್ಕಾಗಿ ಗೋವಾ, ಬೆಂಗಳೂರು ಸೇರಿ ಅನೇಕ ಕಡೆ ಇಬ್ಬರೂ ಜತೆಯಲ್ಲಿ ಹೋಗುತ್ತಿದ್ದರು. ಗೋವಾದಿಂದ ವಾಪಸಾಗುವ ವೇಳೆ ಇಬ್ಬರು ಪಾನಮತ್ತರಾಗಿದ್ದರು.ವಾಂತಿ ಮಾಡಿಕೊಂಡ ಕಾರಣ ರೈಲಿನಿಂದ ಕೆಳಗೆ ಇಳಿಸಲಾಗಿತ್ತು. ಬಳಿಕ ಶಾಂತವ್ವಳನ್ನು ಅಳ್ನಾವರದಲ್ಲಿ ಬಿಟ್ಟು ಬಸವರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಎನ್ ಜಿಓ ತನಿಖೆ ಪೂರ್ವಗೊಳ್ಳುವ ಮೊದಲೇ ತಾಯಿ, ಮಗ ಎಂಬ ನಿರ್ಧಾರಕ್ಕೆ ಬಂದಿದ್ದು, ಖಾನಾಪುರ ಮೂಲದ ಎನ್ ಜಿ ಓಗೆ ನೋಟಿಸ್ ಕೊಡಲಾಗಿದೆ. ಅನುಮಾನಸ್ಪದ ವಿಚಾರದಲ್ಲಿ ತಾವೇ ತಿರ್ಮಾನಕ್ಕೆ ಬರೋದು ತಪ್ಪು.ಇಬ್ಬರು ಪರಸ್ಪರ ಪರಿಚತರಾಗಿದ್ದು, ಜತೆಯಲ್ಲೇ ಇದ್ದರು . ಸಾವಿನಲ್ಲಿ ಮಹಿಳೆಯ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿದಿದೆ ಎಂದು ಎಸ್ಪಿ ತಿಳಿಸಿದ್ದಾರೆ.
ಎನ್ ಜಿಓ ಮೃತನ ಅಂತ್ಯಸಂಸ್ಕಾರಕ್ಕೆ ನೆರವಾಗಿತ್ತು. ಈ ವಿಚಾರ ಪತ್ರಿಕೆ ಮತ್ತು ಮಾಧ್ಯಮದಲ್ಲಿ ಸುದ್ದಿಯಾಗಿ ಹಲವರು ಸಾಮಾಜಿಕ ತಾಣಗಳಲ್ಲಿ ಮರುಕ ವ್ಯಕ್ತಪಡಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ