ಪರಿಷತ್ ಚುನಾವಣಾ ಅಭ್ಯರ್ಥಿ, ಶಾಸಕಿ ಪೂರ್ಣಿಮಾ ಪತಿ ಶ್ರೀನಿವಾಸ್ ಬಿಜೆಪಿಯಿಂದ ಉಚ್ಛಾಟನೆ
Team Udayavani, Oct 24, 2020, 12:48 PM IST
ಬೆಂಗಳೂರು: ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಪತಿ, ಆಗ್ನೇಯ ಪದವೀಧರ ಕ್ಷೇತ್ರದ ಬಂಡಾಯ ಅಭ್ಯರ್ಥಿ ಶ್ರೀನಿವಾಸ್ ರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಲಾಗಿದೆ.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಈ ಆದೇಶ ಹೊರಡಿಸಿದ್ದು, ಪಕ್ಷದ ಸೂಚನೆ ಕಡೆಗಣಿಸಿ ಪಕ್ಷಕ್ಕೆ ಮುಜುಗರ ತಂದ ಶ್ರೀನಿವಾಸ್ ರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವವನ್ನು ಉಚ್ಛಾಟನೆ ಮಾಡಲಾಗಿದೆ.
ಶ್ರೀನಿವಾಸ್ ಅವರು ಶಿರಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಬಯಸಿದ್ದರು. ಆದರೆ ಬಿಜೆಪಿಯಿಂದ ರಾಜೇಶ್ ಗೌಡರಿಗೆ ಟಿಕೆಟ್ ನೀಡಲಾಗಿದೆ. ನಂತರ ವಿಧಾನಪರಿಷತ್ ಪ್ರವೇಶಿಸಲು ಬಯಸಿದ್ದರು.
ಇದನ್ನೂ ಓದಿ:ವಾಟ್ಸ್ ಆ್ಯಪ್ ವೆಬ್ ಆವೃತ್ತಿಗೆ ಶೀಘ್ರದಲ್ಲಿ; ವಾಯ್ಸ , ವೀಡಿಯೋ ಕರೆ
ಆದರೆ ಆಗ್ನೇಯ ಪದವೀಧರ ಕ್ಷೇತ್ರದ ಟಿಕೆಟ್ ಕೈತಪ್ಪಿದ ಕಾರಣ ಶ್ರೀನಿವಾಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ಹಿಂಪಡೆಯುವಂತೆ ಪಕ್ಷದಿಂದ ಸೂಚನೆ ನೀಡಿದ್ದರು ಅವರು ಪುರಸ್ಕರಿಸಿಲ್ಲ. ಹೀಗಾಗಿ ಪಕ್ಷದಿಂದ ಉಚ್ಛಾಟಿಸಿ ನಳಿನ್ ಕುಮಾರ್ ಕಟೀಲ್ ಆದೇಶ ನೀಡಿದ್ದಾರೆ.