12 ವರ್ಷಗಳ ಬಳಿಕ ಮಗುವಾಯ್ತು, ವಿಷ ಪ್ರಸಾದಕ್ಕೆ ಪತಿಯ ಪ್ರಾಣ ಹೋಯ್ತು!
Team Udayavani, Dec 15, 2018, 12:34 PM IST
ಹನೂರು: ಸುಳುವಾಡಿಯ ಕಿಚ್ಕುತ್ ಮಾರಮ್ಮನ ದೇವಾಲಯದಲ್ಲಿ ಶುಕ್ರವಾರ ಪ್ರಸಾದದಲ್ಲಿ ವಿಷಬೆರಕೆ ಮಾಡಿ 11 ಮಂದಿಯನ್ನು ಬಲಿತೆಗೆದುಕೊಂಡ ಅಮಾನವೀಯ ಘಟನೆಗೆ ಮನುಕುಲವೇ ಮರುಗುತ್ತಿದ್ದು, 2 ತಿಂಗಳ ಮಗುವನ್ನು ಹಿಡಿದು ರೋದಿಸುತ್ತಿರುವ ಬಾಣಂತಿಯೊಬ್ಬಳ ಗೋಳು ಎಂಥಹವರ ಕಲ್ಲು ಹೃದಯವನ್ನೂ ಕರಗಿಸುವಂತಿದೆ.
ವಿವಾಹವಾದ 12 ವರ್ಷಗಳ ಬಳಿಕ ದೇವಿಯ ಅನುಗ್ರಹದಿಂದ ಮಗುವಾಗಿದೆ ಎಂದು ಶಾಂತರಾಜು ಅವರು ಪೂಜೆ ಸಲ್ಲಿಸಿ ಪ್ರಸಾದ ಸೇವಿಸಿದ್ದರು. ಆದರೆ ದುರಂತವೆಂದರೆ ಅವರು ಬದುಕುಳಿಯಲಿಲ್ಲ. ಬಾಣಂತಿ ಶಿವಗಾಮಿ ಪತಿಯ ಸಾವಿನಿಂದ ಕಂಗೆಟ್ಟಿದ್ದು 2 ತಿಂಗಳ ಮಗುವನ್ನು ಹಿಡಿದಕೊಂಡು ಕಣ್ಣೀರಿಡುತ್ತಿದ್ದಾರೆ.
ಈಗಾಗಲೇ 11 ಮಂದಿ ಪ್ರಾಣ ಕಳೆದುಕೊಂಡಿದ್ದು, ಆಹಾರ ಸೇವನೆ ಮಾಡಿರುವ 70ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, ಚಾಮರಾಜನಗರ, ಮೈಸೂರು ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎರಡು ಗುಂಪುಗಳ ನಡುವಿನ ವೈಮನಸ್ಸಿನಿಂದಾಗಿ ಒಂದು ಗುಂಪು ಆಹಾರದಲ್ಲಿ ವಿಷ ಬೆರೆಸಿರುವ ಶಂಕೆ ವ್ಯಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ