ಬ್ಲೂ ಬಾಯ್ ಎಚ್.ವಿಶ್ವನಾಥ್ ಕಲ್ಯಾಣ ಗುಣ ಸಾಕಷ್ಟಿವೆ
Team Udayavani, Sep 24, 2019, 3:05 AM IST
ಮೈಸೂರು: “ಬ್ಲೂ ಬಾಯ್ ಎಚ್.ವಿಶ್ವನಾಥ್ ಕಲ್ಯಾಣಗುಣಗಳು ಹೇಳಲು ಬಹಳಷ್ಟಿದೆ’ ಎಂದು ವ್ಯಂಗ್ಯವಾಡಿರುವ ಮಾಜಿ ಸಚಿವ ಸಾ.ರಾ.ಮಹೇಶ್, “ನವರಾತ್ರಿ ಸಂದರ್ಭದಲ್ಲಿ ಚಾಮುಂಡಿಬೆಟ್ಟಕ್ಕೆ ಬನ್ನಿ, ಆಸೆ-ಆಮಿಷಗಳಿಗೆ ಬಲಿಯಾಗಿಲ್ಲ. ಮಂತ್ರಿ ಸ್ಥಾನಕ್ಕೆ ಆಸೆ ಪಟ್ಟಿಲ್ಲ ಎಂದು ಪ್ರಮಾಣ ಮಾಡಿ’ ಎಂದು ಸವಾಲು ಹಾಕಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆ.ಆರ್.ನಗರ ಕ್ಷೇತ್ರದ ಹಳ್ಳಿಗಳಿಗೆ ನಾನು ಹೋದರೆ ನನ್ನ ಸಹೋದರ ಬಂದ ಎಂದು ಆರತಿ ಎತ್ತಿ ಬರಮಾಡಿಕೊಳ್ಳುತ್ತಾರೆ. 1994ರಲ್ಲಿ ನೀವು ಕೆಲ ಹಳ್ಳಿಗಳಿಗೆ ಹೋದರೆ ಯಾಕೆ ಬಾಗಿಲು ಹಾಕಿಕೊಳ್ಳುತ್ತಿದ್ದರು ಎಂದು ಹೇಳಬೇಕಾ ಎಂದು ಪ್ರಶ್ನಿಸಿದರು.
ಇತ್ತೀಚೆಗೆ ನಿಮ್ಮ ಸಂಭಾಷಣೆಯ ಆಡಿಯೋ ಹೊರಬಂತಲ್ಲ, ಈ 70ನೇ ವಯಸ್ಸಲ್ಲಿ ಬ್ಲೂ ಬಾಯ್ ನೀವು, ಯಾವ ಹೀರೊಯಿನ್ ಜತೆ ಏನೇನು ಮಾತಾಡಿದ್ದೀರಿ, ಅವರ ನಂಬರ್ ಕೂಡ ಇದೆ. ಅದು ಸುಳ್ಳು ಅನ್ನುವುದಾಗಿದ್ರೆ ತನಿಖೆ ಮಾಡಿಸಿ, ಏಕೆ ಸುಮ್ಮನಿದ್ದೀರಿ, ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸುವ ಕೆಲಸವನ್ನೇಕೆ ಮಾಡುತ್ತೀದ್ದೀರಿ ಎಂದು ವಾಗ್ಧಾಳಿ ನಡೆಸಿದರು.
ಕೆಎಸ್ಸಾರ್ಟಿಸಿಯ 2 ಸಾವಿರ ಸಾಪ್ ಬಸ್ಗಳನ್ನು ಮಾರಿದರೆ ನನಗೆ ಹಣ ಸಿಗುತ್ತೆ ಎಂದು ಬಾಂಬೆಯಿಂದ ಯಾರನ್ನು ಕರೆತಂದಿದ್ರಿ? ಸಾರಿಗೆ ಸಚಿವರು ಟೆಂಡರ್ ಕರೆಯದೆ ಮಾರಲಾಗಲ್ಲ ಅಂದ್ರು, ಹಾರೋಹಳ್ಳಿಯ ಅಧಿಕಾರಿಯೊ ಬ್ಬರಿಂದ 25 ಲಕ್ಷ ರೂ. ಪಡೆದುಕೊಂಡಿದ್ದೀನಿ ಅವರನ್ನು ವರ್ಗಾವಣೆ ಮಾಡಿಸಿಕೊಡಿ ಎಂದು ಕೇಳಿದ್ರಿ, ಹಾರೋಹಳ್ಳಿ ಎಲ್ಲಿ ನಿಮ್ಮ ಕ್ಷೇತ್ರ ಎಲ್ಲಿ? ಅದಕ್ಕೆ ನಾನು ಮಾಡಿಸಿ ಕೊಡಲಿಲ್ಲ. ಅದಕ್ಕೆ ನನ್ನನ್ನು ದೂರ್ತೀರಾ ಎಂದು ಪ್ರಶ್ನಿಸಿದರು.