ಬಾಂಬ್ ಪ್ರಕರಣ: ಬ್ಯಾಂಕ್ ಲಾಕರ್ನಲ್ಲಿ ಸೈನೆಡ್ ಪತ್ತೆ
Team Udayavani, Jan 26, 2020, 3:05 AM IST
ಉಡುಪಿ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದ ಆರೋಪಿ ಆದಿತ್ಯ ರಾವ್ನ ಉಡುಪಿಯ ಕರ್ಣಾಟಕ ಬ್ಯಾಂಕ್ನ ಕುಂಜಿಬೆಟ್ಟು ಶಾಖೆಯ ಸೇಫ್ ಲಾಕರ್ನಲ್ಲಿ ಸೈನೆಡ್ ಪತ್ತೆಯಾಗಿದೆ.
ಪೊಲೀಸ್ ಕಸ್ಟಡಿಯಲ್ಲಿರುವ ಆದಿತ್ಯ ರಾವ್ನನ್ನು ಶನಿವಾರ ಮಂಗಳೂರು ಉತ್ತರ ಪೊಲೀಸ್ ಉಪ ವಿಭಾಗದ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತನಿಖಾ ತಂಡ ಉಡುಪಿಗೆ ಕರೆ ತಂದಿದ್ದು, ಆರೋಪಿಯ ಹೆಸರಿನಲ್ಲಿ ಇದ್ದ ಸೇಫ್ ಲಾಕರ್ ಕೀ ತೆರೆದು ಪರಿಶೀಲನೆ ಮಾಡಿತು.
ಲಾಕರ್ನಲ್ಲಿ ಪೊಲೀಸರಿಗೆ ಕೆಲ ದಾಖಲೆಗಳು ಹಾಗೂ ಪ್ಯಾಕೇಟ್ ಒಂದು ದೊರಕಿದೆ. ಪ್ಯಾಕೇಟ್ನಲ್ಲಿ ಆರೋಪಿ ಎರಡು ಸೈನೆಡ್ ಇರಿಸಿರುವುದಾಗಿ ಮೂಲಗಳು ತಿಳಿಸಿವೆ. ಹೆಚ್ಚಿನ ಪರೀಕ್ಷೆಗಾಗಿ ಪ್ಯಾಕೇಟ್ನ್ನು ಪ್ರಯೋಗಾಲಯಕ್ಕೆ ಕಳುಹಿಸುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಹಿಂದೆ ಬೆಂಗಳೂರು ವಿಮಾನ ನಿಲ್ದಾಣದ ಹುಸಿ ಬಾಂಬ್ ಕರೆ ಸಂದರ್ಭದಲ್ಲಿ ಬಂಧನಕ್ಕೆ ಒಳಗಾಗಿ ಶಿಕ್ಷೆ ಅನುಭವಿಸಿ ಹೊರ ಬಂದ ಆರೋಪಿ, ಜೀವನದಲ್ಲಿ ಜಿಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಳ್ಳಲು ಆನ್ಲೈನ್ನಲ್ಲಿ ಸೈನೆಡ್ ತರಿಸಿಕೊಂಡಿದ್ದಾನೆ ಎನ್ನಲಾಗಿದೆ. ಆದರೆ, ಕೊನೇ ಕ್ಷಣದಲ್ಲಿ ಮನಸ್ಸು ಬದಲಾದ ಹಿನ್ನೆಲೆಯಲ್ಲಿ ಒಂದು ಚಿಕ್ಕ ಸ್ಟೀಲ್ ಬಾಕ್ಸ್ನಲ್ಲಿ ಸೈನೆಡ್ ಹಾಕಿ ಬ್ಯಾಂಕ್ ಲಾಕರ್ನಲ್ಲಿ ಇಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Home Minister ಅಮಿತ್ ಶಾಗೆ ವಕೀಲ ದೇವರಾಜೇಗೌಡ ಪತ್ರ: ವೈರಲ್
Karnataka Govt ಎಸ್ಐಟಿಗೆ ಮತ್ತೆ 3 ಎಸಿಪಿ ಸೇರಿ 19 ಸಿಬ್ಬಂದಿ ನೇಮಕ
D. K. Shivakumar ಪೆನ್ಡ್ರೈವ್ನಂತಹ ಚಿಲ್ಲರೆ ಕೆಲಸ ನಾನು ಮಾಡಲ್ಲ
Prajwal Revanna Case ರಾಷ್ಟ್ರೀಯ ಮಹಿಳಾ ಆಯೋಗದಿಂದ ಸುಮೋಟೋ ಕೇಸ್ ದಾಖಲು
Hassan Pen Drive Case; ಕಾರ್ತಿಕ್ ಪೆನ್ಡ್ರೈವ್ ಕೊಟ್ಟಿದ್ದು ನಿಜ: ದೇವರಾಜೇಗೌಡ