ಬಹುಮತ ಬಂದಿದೆಯೆಂದು ಜೆಡಿಎಸ್ ನಿರ್ಲಕ್ಷ್ಯ ಮಾಡಲ್ಲ: ಯಡಿಯೂರಪ್ಪ
Team Udayavani, Dec 14, 2021, 4:01 PM IST
ಸುವರ್ಣಸೌಧ (ಬೆಳಗಾವಿ): ವಿಧಾನ ಪರಿಷತ್ ನಲ್ಲಿ ಬಿಜೆಪಿಗೆ ಬಹುಮತ ಬಂದರೂ ಜೆಡಿಎಸ್ ಪಕ್ಷವನ್ನು ನಿರ್ಲಕ್ಷ್ಯ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು 25 ರಲ್ಲಿ 20ಕ್ಕೆ ಸ್ಪರ್ಧೆ ಮಾಡಿದ್ದೆವು. 15 ಸ್ಥಾನ ಗೆಲ್ಲವ ನಿರೀಕ್ಷೆಯಿತ್ತು. ಆದರೆ 12 ಜನ ಅಭ್ಯರ್ಥಿಗಳು ಗೆದ್ದಿದ್ದಾರೆ ಎಂದರು.
ಇದನ್ನೂ ಓದಿ:ಪರಿಷತ್ ಫೈಟ್: ಮೇಲ್ಮನೆಯಲ್ಲಿ ಬಹುಮತ ಪಡೆದ ಬಿಜೆಪಿ, ಹೇಗಿದೆ ಮೂರು ಪಕ್ಷಗಳ ಬಲಾಬಲ
ಬೆಳಗಾವಿಯಲ್ಲಿ ನಮ್ಮ ನಿರೀಕ್ಷೆ ಹುಸಿಯಾಗಿದೆ. ಹೆಚ್ಚಿನ ಸ್ಥಾನ ಗೆಲ್ಲಿಸಿದ ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ಹೇಳಿದರು.