ಸತ್ಯಾಸತ್ಯತೆ ತಿಳಿಯದೆ ಆರೋಪ ಮಾಡಬಾರದು: ಆರ್ ಅಶೋಕ್
Team Udayavani, Apr 12, 2022, 5:39 PM IST
ಬೆಂಗಳೂರು: ಸಂತೋಷ್ ಪಾಟೀಲ್ ಆತ್ಮಹತ್ಯೆಯ ಕುರಿತು ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ, ಸತ್ಯಾಸತ್ಯತೆ ತಿಳಿಯದೆ ಆರೋಪ ಮಾಡಬಾರದು ಎಂದು ಕಂದಾಯ ಸಚಿವ ಆರ್ ಅಶೋಕ್ ಕಿಡಿಕಾರಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಶ್ವರಪ್ಪನವರು ಈಗಾಗಲೇ ಪಾಟೀಲ್ ಮೇಲೆ ಡಿಫಾರ್ಮೇಶನ್ ಕೇಸ್ ದಾಖಲಿಸಿದ್ದಾರೆ. ಡೆತ್ ನೋಟ್ ಇನ್ನೂ ಸಿಕ್ಕಿಲ್ಲ. ಎಲ್ಲವೂ ತನಿಖೆಯ ಹಂತದಲ್ಲಿದೆ ಎಂದರು.
ಇದನ್ನೂ ಓದಿ:ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ :ಈಶ್ವರಪ್ಪ ಮನೆ ಮುಂದೆ ಕಾಂಗ್ರೆಸ್ ಪ್ರತಿಭಟನೆ
ರಾತ್ರಿ ಸ್ನೇಹಿತರ ಜೊತೆ ಏನು ಮಾತನಾಡಿದ್ದಾರೆ ಎಂದು ಗೊತ್ತಿಲ್ಲ. ಪೊಲೀಸ್ ತನಿಖೆಯ ನಂತರವೇ ಪ್ರಕರಣ ಏನು ಎಂದು ತಿಳಿಯುತ್ತದೆ. ಕಾರಣ ಏನು ತಿಳಿಯದೆ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ ಎಂದು ಕಿಡಿಕಾರಿದರು.