Congress 20ಸ್ಥಾನ ಗೆಲ್ಲುವುದು ಇಡೀ ದೇಶದಲ್ಲ?:ಸಿಎಂ ಸಿದ್ದರಾಮಯ್ಯರಿಗೆ ಸಿ.ಟಿ.ರವಿ ಪ್ರಶ್ನೆ
ಕಾಶಿಯಲ್ಲೂ ಭವ್ಯ ಮಂದಿರ ಕಟ್ಟೇ ಕಟ್ಟುತ್ತೇವೆ... ಸಿದ್ದರಾಮಯ್ಯನವರ ನಿಲುವೇನು?
Team Udayavani, Jan 30, 2024, 8:47 PM IST
ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಇಪ್ಪತ್ತು ಸ್ಥಾನ ಗೆಲ್ಲುತ್ತೇವೆಂದು ಹೇಳಿದ್ದು, ಇಪ್ಪತ್ತು ಸ್ಥಾನ ಇಡೀ ದೇಶದಲ್ಲಾ ಎಂದು ಮಾಜಿ ಸಚಿವ ಸಿ.ಟಿ.ರವಿ ಪ್ರಶ್ನಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಇವತ್ತಿನ ಸ್ಥಿತಿಯಲ್ಲಿ ಕಾಂಗ್ರೆಸ್ ದೇಶದಲ್ಲಿ ಇಪ್ಪತ್ತು ಸ್ಥಾನಗೆಲ್ಲುವುದು ಕಷ್ಟ. ಕೌರವರ ಪಕ್ಷದಲ್ಲಿದ್ದ ದುಯೋಧನನ ಸಹೋದರ ಯುಯೂತ್ಸು ಕುರುಕ್ಷೇತ್ರ ಯುದ್ಧ ಸಮಯದಲ್ಲಿ ಧರ್ಮದ ಪರ ಇರೋರು ಬನ್ನಿ ಎಂದು ಕರೆದಾಗ ಆತ ಪಾಂಡವರ ಪರ ಬಂದ, ದೇಶಬೇಕು ಅನ್ನೋ ವಿಭೀಷಣರು, ನರೇಂದ್ರ ಮೋದಿ ಪ್ರಧಾನಿಯಾಗಬೇಕು ದೇಶ ಉಳಿಯಬೇಕು ಎನ್ನುವವರು ಬಿಜೆಪಿಗೆ ಬನ್ನಿ ಎಂದು ಕಾಂಗ್ರೆಸ್ನವರಿಗೆ ಕರೆ ನೀಡಿದರು. ರಾಜ್ಯಸಭೆಗೆ ಸೋನಿಯಾಗಾಂಧಿ ಕರ್ನಾಟಕದಿಂದ ಸ್ಪರ್ಧೆ ವಿಚಾರಕ್ಕೆ ಅವರು ಎಲ್ಲಿ ಬೇಕಾದರೂ ನಿಂತುಕೊಳ್ಳಲಿ ಎಂದರು.
ಅಯೋಧ್ಯೆಯಂತೆ ಕಾಶಿಯಲ್ಲಿ ಭವ್ಯ ಮಂದಿರ ಕಟ್ಟೇ ಕಟ್ಟುತ್ತೇವೆ. ಈಗ ನಾವು ಹಿಂದೂ ಅನ್ನೋ ಸಿದ್ದರಾಮಯ್ಯನವರ ನಿಲುವೇನು ಎಂದು ಪ್ರಶ್ನಿಸಿದ ಅವರು, ಸಿದ್ದರಾಯಮಯ್ಯ ಅವರು ಆಗ ನಾನು ಹಿಂದೂ ಅಂತ ನಾಟಕ ಮಾಡುವುದು ಬೇಡ. ಈಗಲೇ ತಮ್ಮ ನಿಲುವನ್ನು ಸ್ಪಷ್ಟ ಪಡಿಸಲಿ ಎಂದು ಹೇಳಿದರು.
ಅತಿಕ್ರಮಿಸಿ ಮಸೀದಿ ಕಟ್ಟಿದರೇ, ಅಲ್ಲಿ ನಮಾಜ್ ಮಾಡಿದರೇ ಹರಾಮ್ ಎಂದು ಒಳ್ಳೆ ಮುಸ್ಲಿಂಮರು ಹೇಳಿದ್ದಾರೆ. ಹರಾಮಿ ಕೆಲಸಕ್ಕೆ ಹೋಗುವವರೆಲ್ಲ ಹರಾಮಿಗಳೇ ಇದು ನಮ್ಮ ನಿಲುವು ಆ ಜಾಗವನ್ನು ಬಿಟ್ಟುಕೊಡಬೇಕು. ಈ ಬಗ್ಗೆ ಕಾಂಗ್ರೆಸ್, ಸಿದ್ದರಾಮಯ್ಯನವರು ಏನು ಹೇಳ್ತಾರೆ ಎಂದು ಪ್ರಶ್ನಿಸಿದ ಅವರು, ಇಡೀ ದೇಶ ಜೈ ಶ್ರೀರಾಮ್ ಅಂದಮೇಲೆ ನೀವು ಜೈ ಶ್ರೀರಾಮ್ ಎಂದು ಹೇಳಿದ್ರಿ. ಆಗ ಮತ್ತೇ ನಾಟಕ ಮಾಡುವುದು ಬೇಡ ಈಗಲೇ ನಿಮ್ಮ ನಿಲುವು ತಿಳಿಸಿ ಎಂದರು.
1666 ಆಸುಪಾಸಿನಲ್ಲಿ ಔರಂಗಜೇಬ್ ದೇವಸ್ಥಾನ ಒಡೆದು ಅದರ ಅವಶೇಷಗಳನ್ನು ಬಳಸಿಕೊಂಡು ಮಸೀದಿ ಕಟ್ಟಿದ್ದಾನೆ. ಅವವೇ ಬರೆದುಕೊಂಡಿರುವ ಅಲಂಗಿರ್ ನಾಮ ಎಂಬ ದಾಖಲೆ ಹೇಳುತ್ತದೆ. ವಿವಾದಿತ ಜಾಗದಲ್ಲಿ ನಮಾಜ್ ಮಾಡಿದರೇ ಹರಾಮ್ ಆಗುತ್ತದೆ ಎಂದು ಮುಸ್ಲಿಂಮರೆ ಹೇಳಿಕೊಂಡಿದ್ದಾರೆ. ನಿಮ್ಮಗೆ ಹರಾಮ್ ಆದರೆ ನಮ್ಮಗೆ ಪವಿತ್ರ ಸ್ಥಳ ಅದನ್ನು ಬಿಟ್ಟುಕೊಡಿ ಎಂದು ಹೇಳಿದರು.
‘ಕಾಂಗ್ರೆಸ್ನಿಂದ ಮತ್ತೆ ಕೆಲವರು ಬರುವ ಸಾಧ್ಯತೆ ಇದೆ. ಮೋದಿ ಪ್ರಧಾನಿಯಾಗಬೇಕು ಎನ್ನುವವರು ಕಾಂಗ್ರೆಸ್ ಬಿಟ್ಟು ಬನ್ನಿ ಅದರಲ್ಲಿ ಲಕ್ಷ್ಮಣ್ ಸವದಿ ಸೇರಿರಬಹುದು, ಇನ್ನೊಬ್ಬರು ಸೇರಿರಬಹುದು. ಕಾಂಗ್ರೆಸ್ನ ಕೆಲವರು ನಮ್ಮ ಸಂಪರ್ಕದಲ್ಲಿದ್ದಾರೆ. ಕೆಲವರು ಬಹಿರಂಗ ವಾಗಿ, ಕೆಲವರು ಅಂತರಂಗವಾಗಿ ಇದ್ದಾರೆ.’
‘ನರೇಂದ್ರ ಸ್ವಾಮಿಯವರು ಮಂತ್ರಿಗಿರಿಗಾಗಿ ಅರ್ಜಿ ಮೇಲೆ ಅರ್ಜಿ ಹಾಕಿಕೊಂಡು ಗಮನ ಸೆಳೆಯುತ್ತಿದ್ದಾರೆ. ಯಾರು ಅದೇ ರೀತಿ ಇರುತ್ತಾರೆ ಅಂತವರು ಮಾತ್ರ ಅಂತಹ ಪದ ಬಳಕೆ ಮಾಡುತ್ತಾರೆಂದು ನರೇಂದ್ರ ಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
ಅವರ ಮಾತಿನ ದಾಟಿ ನೋಡಿದರೇ ”ವನ್ ಹೀ ಈಸ್ ಸೀಡ್ಲೆಸ್” ಆಕಾರಣಕ್ಕೆ ಅವರ ಬಾಯಿಂದ ಅಂತಹ ಮಾತು ಬಂದಿದೆ. ಸೀಡ್ ಲೆಸ್ ಅಂದರೆ ಗೋತ್ತಲ್ಲ ಅದರಲ್ಲಿ ಬೀಜ ಇರಲ್ಲ, ಹುಟ್ಟಲ್ಲ. ರಾಜಕೀಯವಾಗಿ ಸೀಡ್ಲೆಸ್ ಅದಕ್ಕೆ ಅವರು ಆ ಪದ ಬಳಸಿದ್ದಾರೆ ಎಂದು ಕಟುವಾಗಿ ಟೀಕಿಸಿದರು.
ಕೋರ್ಟ್ ನಿರ್ದೇಶನದಂತೆ ದತ್ತಪೀಠಕ್ಕೆ ಮುಜರಾಯಿ ಇಲಾಖೆಯಿಂದ ಅರ್ಜಿ ಕರೆದು ಹಿಂದೂ ಅರ್ಚಕರನ್ನು ಆಯ್ಕೆ ಮಾಡಲಾಗಿದೆ. ಕಳೆದ ಒಂದು ವರ್ಷದಿಂದ ಸಂಬಳ ನೀಡಿಲ್ಲವೆಂದರೇ ಅದು ನಾಚಿಕೆಗೇಡಿನ ಸಂಗತಿ. ಅರ್ಚಕರಿಗೆ ಸಂಬಳ ಕೊಡುಗವ ಯೋಗ್ಯತೆಯೂ ಇಲ್ಲದ ಪರಿಸ್ಥಿತಿಯಲ್ಲಿ ಸರ್ಕಾರ ಇದೆ. ಅರ್ಚಕರಿಗೆ ಸಂಬಳ ಕೊಡಿವ ಯೋಗ್ಯತೆ ಇಲ್ಲದಿದ್ದರೇ ಮುಜರಾಯಿ ಇಲಾಖೆಯೊಳಗೆ ಹಿಂದೂ ದೇವಾಲಯಗಳನ್ನು ಯಾಕೆ ಇಟ್ಟುಕೊಂಡಿದ್ದೀರಿ, ಸರ್ಕಾರಕ್ಕೆ ದೇವಾಲಯಗಳ ಹುಂಡಿ ಮೇಲೆ ಮಾತ್ರ ಆಸೆನಾ ಎಂದು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
MUST WATCH
ಹೊಸ ಸೇರ್ಪಡೆ
ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ