ಕಾರವಾರ ಜೈಲಿನಲ್ಲಿ ಕಾರ್ಕಳ ಮೂಲದ ಕೈದಿ ಆತ್ಮಹತ್ಯೆ
Team Udayavani, Jun 21, 2018, 7:30 PM IST
ಕಾರವಾರ : ಕಾರವಾರ ಜೈಲಿನಲ್ಲಿದ್ದ ಕೈದಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.
ಆತ್ಮಹತ್ಯೆ ಮಾಡಿಕೊಂಡ ಕೈದಿಯನ್ನು ಉಡುಪಿ ತಾಲೂಕಿನ ಕಾರ್ಕಳ ನಿವಾಸಿ ಉಮೇಶ್ (38) ಎಂದು ಗುರುತಿಸಲಾಗಿದೆ.
ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ಎದುರಿಸುತ್ತಿದ್ದ ಕೈದಿ ಉಮೇಶ್, ಈಚೆಗೆ ಉಡುಪಿ ಜೈಲಿನಿಂದ ಕಾರವಾರ ಜೈಲಿಗೆ ಸ್ಥಳಾಂತರಗೊಂಡಿದ್ದ. ಮಾನಸಿಕ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಆತ ಅದೇ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಶಂಕಿಸಲಾಗಿದೆ.