ಲಾರಿ ಟೈರ್ ರಿಮ್ ಬಡಿದು ದಂಪತಿ ಸಾವು
Team Udayavani, Feb 3, 2020, 3:03 AM IST
ಚಳ್ಳಕೆರೆ: ಲಾರಿ ಟೈರ್ ಸ್ಫೋಟಗೊಂಡು ಅದರ ಜತೆಗಿರುವ ಕಬ್ಬಿಣದ ರಿಮ್ ಸಿಡಿದು ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ದಂಪತಿಗೆ ಬಡಿದ ಪರಿಣಾಮ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ನಗರದ ಪಾವಗಡ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಈ ದುರ್ಘಟನೆಯಲ್ಲಿ ಚಳ್ಳಕೆರೆ ತಾಲೂಕಿನ ಕಾಲುವೇಹಳ್ಳಿ ಗ್ರಾಮದ ತಿಪ್ಪೇಶ್ (45) ಹಾಗೂ ಆತನ ಪತ್ನಿ ಶಿವಮ್ಮ (40) ಮೃತಪಟ್ಟಿದ್ದಾರೆ.
ಚಳ್ಳಕೆರೆ ನಗರದ ಲ್ಲಿದ್ದ ಸಹೋದರ ಸಂಬಂಧಿ ಮನೆಗೆ ತೆರಳಿದ್ದ ತಿಪ್ಪೇಶ್ ತಮ್ಮ ಪುತ್ರಿಯನ್ನು ಅವರ ಮನೆಯಲ್ಲಿ ಬಿಟ್ಟು ಪತ್ನಿಯೊಂದಿಗೆ ಪಾವಗಡ ರಸ್ತೆಗೆ ಬಂದು ಅಲ್ಲಿನ ಗುಜರಿ ಅಂಗಡಿಯಲ್ಲಿ ಸಾಮಾನು ಗಳನ್ನು ಮಾರಾಟ ಮಾಡಿ ರಸ್ತೆ ಪಕ್ಕ ನಡೆದುಕೊಂಡು ಬರುತ್ತಿದ್ದರು. ಈ ಸಂದರ್ಭ ಲಾರಿ ಟೈರ್ ಸ್ಫೋಟಗೊಂಡು ಟೈರ್ ಸುತ್ತ ಹಾಕಲಾಗಿದ್ದ ಡಿಸ್ಕ್ನ ರಿಂಗ್ ಸಿಡಿದು ಇಬ್ಬರ ತಲೆ ಹಾಗೂ ಮುಖಕ್ಕೆ ಬಡಿದಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ತಿಪ್ಪೇಶ್ ಗುಜರಿ ವಸ್ತು ಸಂಗ್ರಹಿಸುವ ಹಾಗೂ ಚಳ್ಳಕೆರೆಯಲ್ಲಿ ಐಸ್ಕ್ಯಾಂಡಿ ಖರೀದಿಸಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮಾರಾಟ ಮಾಡುತ್ತಿದ್ದರು. ಈ ದಂಪತಿಗೆ ಬಸವರಾಜು, ಮಾರುತಿ, ಪರಶುರಾಮ, ದಿನೇಶ್, ಲಕ್ಷ್ಮೀ ಮತ್ತು ಶಕುಂತಲಾ ಎಂಬ ಮಕ್ಕಳಿದ್ದಾರೆ. ಈ ಪೈಕಿ ಪರಶುರಾಮ ಮತ್ತು ಶಕುಂತಲಾ ಮೂಕರಾಗಿದ್ದಾರೆ.
ಶಿವಮ್ಮ ಚಿತ್ರದುರ್ಗ ತಾಲೂಕಿನ ಎಣ್ಣೆಗೆರೆ ಗ್ರಾಮದವರಾಗಿದ್ದು, ಕಳೆದ 25 ವರ್ಷಗಳ ಹಿಂದೆ ಚಳ್ಳಕೆರೆ ತಾಲೂಕಿನ ಕಾಲುವೇಹಳ್ಳಿ ಗ್ರಾಮದ ತಿಪ್ಪೇಶ್ ಅವರೊಂದಿಗೆ ವಿವಾಹವಾಗಿದ್ದರು. ತಂದೆ-ತಾಯಿಯ ಅಕಾಲಿಕ ಮರಣ ಕಂಡು ಅವರ ಮಕ್ಕಳ ರೋದನ ಮುಗಿಲು ಮುಟ್ಟಿತ್ತು. ಡಿವೈಎಸ್ಪಿ ಎಸ್.ರೋಷನ್ ಜಮೀರ್, ವೃತ್ತ ನಿರೀಕ್ಷಕ ಈ. ಆನಂದ್, ಪಿಎಸ್ಐ ನೂರ್ ಅಹಮ್ಮದ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
ಇಂದಿನಿಂದ ದ್ವಿತೀಯ ಪಿಯು-2 ಪರೀಕ್ಷೆ: 1.5 ಲಕ್ಷ ವಿದ್ಯಾರ್ಥಿಗಳ ನೋಂದಣಿ
MUST WATCH
ಹೊಸ ಸೇರ್ಪಡೆ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ