ಮದ್ಯ ಮಾರಾಟ ಪುನಃ ಆರಂಭಿಸುವ ಬಗ್ಗೆ ಮೇ 3ರ ಬಳಿಕವೇ ತೀರ್ಮಾನ: ಬಿಎಸ್ ವೈ
Team Udayavani, Apr 30, 2020, 1:06 PM IST
ಬೆಂಗಳೂರು: ರಾಜ್ಯದಲ್ಲಿ ಮದ್ಯ ಮಾರಾಟ, ಕ್ಷೌರದಂಗಡಿಗಳನ್ನು ಮತ್ತೆ ಆರಂಭಿಸುವ ಕುರಿತು ಮೇ 3ರ ನಂತರವೇ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಇಂದು ಸಂಪುಟ ಸಭೆ ಬಳಿಕ ಮಾತನಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ ಲಾಕ್ ಡೌನ್ ಸಡಿಲದ ಬಗ್ಗೆ ಮೇ 3ರ ಬಳಿಕ ನಿರ್ಧಾರ ಮಾಡಲಾಗುವುದು ಎಂದರು. ಮದ್ಯ ಮಾರಾಟ ಪುನಃ ಆರಂಭಿಸುವ ಬಗ್ಗೆ, ಕಟ್ಟಿಂಗ್ ಶಾಪ್ ಓಪನ್ ಮಾಡುವ ಬಗ್ಗೆಯೂ ಬಗ್ಗೆ ಮೇ 3ರ ಬಳಿಕವೇ ತೀರ್ಮಾನ ಮಾಡಲಾಗುವುದು ಎಂದರು.
ಮಾಲ್, ಹೋಟೆಲ್ ಗಳು ಕೂಡಾ ತೆರೆಯುವಂತಿಲ್ಲ. ಹೋಟೆಲ್ ನಿಂದ ಪಾರ್ಸೆಲ್ ಒಯ್ಯಬಹುದು ಎಂದ ಅವರು ಕೇಂದ್ರದ ಮಾರ್ಗಸೂಚಿ ಬಂದ ಬಳಿಕವೇ ಈ ಎಲ್ಲ ವಿಚಾರದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ನಿಯಂತ್ರಣ ವಲಯ ಹೊರತು ಪಡಿಸಿ ಇತರ ಕಡೆ ಕೈಗಾರಿಕೆ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದ್ದು, ಇಂದು ಸಂಜೆ ಕೈಗಾರಿಕೋದ್ಯಮಿಗಳ ಜತೆಗೆ ಸಭೆ ನಡೆಸಲಾಗುವುದು ಎಂದರು.