ಪೊಲೀಸರ ದಾಳಿ : 200 ಕೆಜಿ ಜಿಲಿಟಿನ್ ಕಡ್ಡಿ ವಶ
ಅಮ್ಮಿನಬಾವಿ ಗ್ರಾಮದ ಸ್ಟೋನ್ ಕ್ರಷರ್ ಮೇಲೆ ಪೊಲೀಸರು ದಾಳಿ ಮಾಡಿದ್ದು, 210 ಕೆಜಿ ಜಿಲೆಟಿನ್ ಕಡ್ಡಿ ವಶಪಡೆಸಿಕೊಂಡಿದ್ದಾರೆ
Team Udayavani, Mar 17, 2021, 5:36 PM IST
ಧಾರವಾಡ : ಅಮ್ಮಿನಬಾವಿ ಗ್ರಾಮದ ಸ್ಟೋನ್ ಕ್ರಷರ್ ಮೇಲೆ ಪೊಲೀಸರು ದಾಳಿ ಮಾಡಿದ್ದು, 210 ಕೆಜಿ ಜಿಲೆಟಿನ್ ಕಡ್ಡಿ ವಶಪಡೆಸಿಕೊಂಡಿರುವುದಾಗಿ ಎಸ್.ಪಿ ಕೃಷ್ಣಕಾಂತ ಹೇಳಿದರು.
ಎಸ್.ಪಿ. ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಒಟ್ಟು 1650 ಜಿಲಿಟಿನ್ ಕಡ್ಡಿಗಳು ಹಾಗೂ 700 ಎಲೆಕ್ಟ್ರಾನಿಕ್ ಡಿಟೋನೇಟರ್ ಸಹ ಪತ್ತೆಯಾಗಿದ್ದು, ಇದು ಡಿ.ಬಿ.ಮಾಸೂರ ಕ್ರಷರ್ ಕಂಪನಿಯಾಗಿದೆ ಎಂದರು.
ಇವುಗಳನ್ನು ನೆಲದಲ್ಲಿ ಹೂತಿಟ್ಟಿದ್ದು ಖಚಿತ ಮಾಹಿತಿ ಮೇರೆಗೆ ಎರಡು ದಿನಗಳ ಹಿಂದೆ ದಾಳಿ ಮಾಡಲಾಗಿತ್ತು. 16,500 ರೂ. ಮೌಲ್ಯದ ಜಿಲೆಟಿನ್ ಕಡ್ಡಿಗಳು ಪೊಲೀಸ್ ವಶಕ್ಕೆ ಪಡೆಯಲಾಗಿದೆ.
ಅನಧಿಕೃತವಾಗಿ ಸಂಗ್ರಹಿಸಿಟ್ಟಿದ್ದ ಜಿಲೇಟಿನ್ ಮಾಲೀಕ ದಯಾನಂದ ಮಾಸೂರ, ಕ್ರಷರ್ ಸಿಬ್ಬಂದಿ ಶಂಕರಗೌಡ, ಹಾಗೂ ಜಿಲೆಟಿನ್ ಕಡ್ಡಿ ಕೊಟ್ಟಿದ್ದ ನವೀನಕುಮಾರ್ ಆರೋಪಿಗಳಾಗಿದ್ದು, ಶಂಕರಗೌಡನನ್ನು ಬಂಧಿಸಲಾಗಿದೆ ಎಂದರು. ಈ ಸಂಬಂಧ ಧಾರವಾಡ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Hubli; ಅಧಿಕಾರ-ಹಣದ ದುರಹಂಕಾರ ಬಹಳ ದಿನ ಉಳಿಯುವುದಿಲ್ಲ..: ಡಿಕೆ ವಿರುದ್ಧ ಎಚ್ಡಿಕೆ ಗುಡುಗು
Hubli; ಕುಮಾರಸ್ವಾಮಿ ಎದುರೇ ಕಾಂಗ್ರೆಸ್ – ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಪ್ರಜ್ವಲ್ ರೇವಣ್ಣ ಸಂಸದರಾಗಿರುವುದು ಕಾಂಗ್ರೆಸ್ ನಾಯಕರಿಂದಲೇ… :ಆರ್. ಅಶೋಕ್
60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ