ಡಿಕೆಶಿ ಸಂಕಷ್ಟ ಪರಿಹಾರಕ್ಕಾಗಿ ಇಂದು ಕೊಲ್ಲೂರಿನಲ್ಲಿ ಯಾಗ
Team Udayavani, Oct 21, 2019, 3:00 AM IST
ಕೊಲ್ಲೂರು: ಮಾಜಿ ಸಚಿವ, ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಅವರ ಸಂಕಷ್ಟ ಪರಿಹಾರಕ್ಕಾಗಿ ಭಾನುವಾರ ಕೊಲ್ಲೂರು ದೇಗುಲದಲ್ಲಿ ನವಚಂಡಿ ಹೋಮದ ಪಾರಾಯಣ ಆರಂಭಗೊಂಡಿದೆ. ಡಿಕೆಶಿ ಕುಟುಂಬದ ಪುರೋಹಿತ ಡಾಣ ಆರಾಧ್ಯ ಅವರ ನೇತೃತ್ವದಲ್ಲಿ ದೇಗುಲದ ಅರ್ಚಕರು ಪಾರಾಯಣ ನಡೆಸಿದರು. ಅ.21ರಂದು ನವಚಂಡಿ ಹೋಮ ನಡೆಯಲಿದೆ.