“ನನ್ನನ್ನು ದೂರ ಇಟ್ಟಿಲ್ಲ’: ಬಿ.ಶ್ರೀರಾಮುಲು
Team Udayavani, Jun 28, 2020, 7:52 AM IST
ಬಳ್ಳಾರಿ: “ಕೋವಿಡ್-19 ಸೋಂಕು ವಿಚಾರದಲ್ಲಿ ನನ್ನನ್ನು ದೂರ ಇಡಲಾಗುತ್ತಿದೆ ಎಂಬ ಆರೋಪ ಸುಳ್ಳು. ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ’ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಸ್ಪಷ್ಟಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್ ಸೋಂಕು ನಿಯಂತ್ರಿಸುವ ವಿಚಾರದಲ್ಲಿ ನಾವೆಲ್ಲರೂ ಒಂದೇ ಕುಟುಂಬದಂತೆ ಕೆಲಸ ಮಾಡುತ್ತಿದ್ದೇವೆ. ನಾನು ರಾಜ್ಯದ್ದು ನೋಡಿಕೊಳ್ಳುತ್ತಿದ್ದೇನೆ. ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಬೆಂಗಳೂರು ನೋಡಿಕೊಳ್ಳುತ್ತಿದ್ದರು. ಇದೀಗ ಅವರಿಗೆ ಸಮಸ್ಯೆಯಾಗಿದ್ದರಿಂದ ಕಂದಾಯ ಸಚಿವ ಆರ್.ಅಶೋಕ್ ರಿಗೆ ಜವಾಬ್ದಾರಿ ನೀಡಲಾಗಿದೆ.
ವೈದ್ಯಕೀಯ ಸಚಿವ ಸುಧಾ ಕರ್ ಅವರು ಬಳ್ಳಾರಿಗೆ ಬಂದಾಗ ನಾನು ಗೈರಾಗಿದ್ದು ನಿಜ. ಆದರೆ, ನಾನು ಮೊದಲೇ ಹೇಳಿ ಹೋಗಿದ್ದೇನೆ. ಜಿಂದಾಲ್ ಕೈಗಾರಿಕೆಯಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿವೆ. ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾದರೆ ಜಿಂದಾಲ್ ಕಾರ್ಖಾನೆ ಲಾಕ್ ಡೌನ್ಗೂ ಹಿಂಜರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.