ಕೆರಳಿದ ಕೌರವ!: ಸಂಪುಟ ವಿಸ್ತರಿಸದೆ ಪ್ರಜಾಪ್ರಭುತ್ವದ ಕಗ್ಗೊಲೆ
Team Udayavani, Oct 7, 2018, 11:40 AM IST
ಬೆಂಗಳೂರು: ಕಾಂಗ್ರೆಸ್ ಸಚಿವ ಸಂಪುಟ ವಿಸ್ತರಣೆ ಮುಂದೂಡಿಕೆ ಮಾಡಿರುವ ವಿರುದ್ಧ ಹಲವು ಆಕಾಂಕ್ಷಿ ಶಾಸಕರು ತೀವ್ರ ಅಸಮಧಾನಾ ಹೊರ ಹಾಕಿದ್ದಾರೆ.ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ್ ಅವರು ಪಕ್ಷದ ನಾಯಕರದ್ದು ಸರ್ವಾಧಿಕಾರಿ ಧೋರಣೆ ಎಂದು ಟ್ವೀಟ್ ಮಾಡಿದ್ದಾರೆ.
Dragging the expansion of cabinet in Karnataka is an act of insult to legsitators, killing democracy, upholding the dictatorship in the name of party. @INCKarnataka @dineshgrao @RahulGandhi @siddaramaiah @DrParameshwara
— Kourava B.C.Patil (@kourvabcpatil) October 7, 2018
ತೀವ್ರ ಅಸಮಧಾನಗೊಂಡಿರುವ ಬಿ.ಸಿ.ಪಾಟೀಲ್ ಅವರು ಸಚಿವ ಸಂಪುಟ ವಿಸ್ತರಣೆ ಮುಂದೂಡಿರುವುದು ಶಾಸಕರಿಗೆ ಮಾಡಿರುವ ಅವಮಾನ. ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದಂತೆ. ಪಕ್ಷದ ಹೆಸರಿನಲ್ಲಿ ಸರ್ವಾಧಿಕಾರಿ ಧೋರಣೆ ತೋರಿದಂತಿದೆ ಎಂದು ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಮಾಡಿದ್ದು ಮಾತ್ರವಲ್ಲದೆ ಕೆಪಿಸಿಸಿ, ರಾಹುಲ್ ಗಾಂಧಿ,ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್ ಮತ್ತು ಡಾ.ಜಿ.ಪರಮೇಶ್ವರ್ ಅವರನ್ನು ಟ್ಯಾಗ್ ಮಾಡಿ ಶಾಕ್ ನೀಡಿದ್ದಾರೆ.