ವಿದ್ಯಾರ್ಥಿನಿಯರ ಮೇಲೆ ಸಲಗ ದಾಳಿ
Team Udayavani, Jan 4, 2020, 3:00 AM IST
ಮಡಿಕೇರಿ: ಶಾಲೆಗೆ ತೆರಳುತ್ತಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ಒಂಟಿ ಸಲಗ ಏಕಾಏಕಿ ದಾಳಿ ನಡೆಸಿದ್ದರಿಂದ ಓರ್ವಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಸಿದ್ದಾಪುರ ಸಮೀಪದ ಇಂಜಿಲಗೆರೆಯಲ್ಲಿ ನಡೆದಿದೆ. ಇಂಜಿಲಗೆರೆ ನಿವಾಸಿ ಮಣಿ ಮತ್ತು ಮೇಘಲ ದಂಪತಿ ಪುತ್ರಿಯರಾದ ಯುವಶ್ರೀ (7), ನಿತ್ಯಶ್ರೀ (9) ಸೇರಿ ಸತ್ಯಾ (15) ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಲಗ ದಾಳಿ ವೇಳೆ ಸತ್ಯ ಕ್ಷಣಾರ್ಧದಲ್ಲಿ ತೋರಿದ ಸಮಯ ಪ್ರಜ್ಞೆಯಿಂದ ನಿತ್ಯಶ್ರೀ ಕೂಡ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾಳೆ. ಕಾಡಾನೆ ದಾಳಿಯಿಂದ ಯುವಶ್ರೀ ತಲೆ, ದವಡೆ, ಹೊಟ್ಟೆ ಭಾಗಕ್ಕೆ ಗಂಭೀರ ಪೆಟ್ಟಾಗಿದ್ದು, ಸಿದ್ದಾಪುರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಿತ್ಯಶ್ರೀ ಕಾಲಿನ ಭಾಗಕ್ಕೆ ಗಾಯವಾಗಿದ್ದು ಚೇತರಿಸಿಕೊಂಡಿದ್ದಾಳೆ.
ಏಕಾಏಕಿ ದಾಳಿ: ಇಂಜಿಲಗೆರೆ ಸರ್ಕಾರಿ ಕನ್ನಡ ಶಾಲೆಗೆ ಶುಕ್ರವಾರ ಬೆಳಗ್ಗೆ ಮನೆಯಿಂದ ಇಂಜಿಲಗೆರೆ ಮಾರ್ಗವಾಗಿ ಮಕ್ಕಳು ಶಾಲೆ ಕಡೆ ಹೊರಟಿದ್ದರು. ಕಾಲ್ನಡಿಗೆಯಲ್ಲಿ ತೆರಳುತ್ತಿದ್ದಾಗ ಕಾಫಿ ತೋಟದ ಒಳಗಿನಿಂದ ಒಂಟಿ ಸಲಗ ಏಕಾಏಕಿ ರಸ್ತೆಗೆ ನುಗ್ಗಿ ಬಂದು ಎದುರಿಗೆ ಸಿಕ್ಕಿದ ಯುವಶ್ರೀಯನ್ನು ಸೊಂಡಿಲಿನಿಂದ ಎತ್ತಿ ಕಾಫಿ ತೋಟದೊಳಕ್ಕೆ ಎಸೆದಿದೆ. ಜತೆಯಲ್ಲಿದ್ದ ಸತ್ಯಾ ಅಪಾಯ ಅರಿತು ನಿತ್ಯಶ್ರೀಯ ಕೈಹಿಡಿದು ಎಳೆದುಕೊಂಡು ಓಡಿ ಜೀವ ಉಳಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka; ಶಿಕ್ಷಕರ ವರ್ಗಾವಣೆ ವೇಳಾಪಟ್ಟಿ ಪರಿಷ್ಕರಣೆ
ವಕೀಲರಿಗೂ ತಟ್ಟಿದ ಬೇಸಿಗೆ ಬಿಸಿ: ಕಪ್ಪು ಕೋಟ್ಗೆ ವಿನಾಯಿತಿ
NDA; ಮಂಡ್ಯಕ್ಕೆ ಬಂದಿರುವ ಕುಮಾರಸ್ವಾಮಿಯನ್ನು ಸೋಲಿಸಿ ಮನೆಗೆ ಕಳಿಸಿ: ಸಿದ್ದರಾಮಯ್ಯ
Lok Sabha Elections; ಜಾತಿ ಗಣತಿ ಬಗ್ಗೆ ಮೋದಿ ನಿಲುವೇನು?: ರಾಹುಲ್ ಗಾಂಧಿ
ಮತ್ತೆ 60 ಮಂದಿಯಿಂದ ಉಮೇದುವಾರಿಕೆ; 2ನೇ ಹಂತದ ಚುನಾವಣೆಗೆ ಈವರೆಗೆ 168 ಮಂದಿ ಕಣಕ್ಕೆ