ಫಸ್ಟ್ ನೈಟ್ ಅಪಹರಣ ಪ್ರಕರಣಕ್ಕೆ ತಿರುವು: ಸ್ವಇಚ್ಛೆಯಿಂದ ಹೋಗಿದ್ದೆ
Team Udayavani, Oct 11, 2018, 7:34 PM IST
ಕೊಪ್ಪಳ : ಮದುವೆಯಾದ ಹದಿನೈದು ದಿನಗಳ ಬಳಿಕ ಗೊತ್ತುಪಡಿಸಲಾಗಿದ್ದ ಫಸ್ಟ್ ನೈಟ್ ನಲ್ಲೇ ನಡೆಯಿತೆನ್ನಲಾಗಿದ್ದ ವಧುವಿನ ಕುತೂಹಲಕರ ಅಪಹರಣ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ.
“ನನ್ನನ್ನು ಯಾರೂ ಕಿಡ್ ನ್ಯಾಪ್ ಮಾಡಿಲ್ಲ; ನಾನೇ ಖುದ್ದಾಗಿ, ಸ್ವ ಇಚ್ಛೆಯಿಂದಲೇ ಹೋಗಿದ್ದೆ’ ಎಂದು ನವ ವಿವಾಹಿತೆ ಗಾಯತ್ರಿ ಸ್ಪಷ್ಟಪಡಿಸಿದ್ದಾರೆ.
“ನಾನು ಈ ಮೊದಲೇ ಅಂಜು ಕುಮಾರ್ ಎಂಬವರನ್ನು ಮದುವೆಯಾಗಿದ್ದೆ; ಆದರೆ ಅವರು ಕಟ್ಟಿದ್ದ ತಾಳಿಯನ್ನು ಕಿತ್ತು ಹಾಕಿ ನನಗೆ ಸೋದರ ಮಾವನ ಜತೆಗೆ ಬಲವಂತದಿಂದ ಮದುವೆ ಮಾಡಿಸಿದ್ದರು. ಇದು ನನಗೆ ಇಷ್ಟವಿಲ್ಲದ ಮದುವೆಯಾಗಿತ್ತು; ಹಾಗಾಗಿ ಫಸ್ಟ್ ನೈಟ್ ಗೊತ್ತುಪಡಿಸಲಾಗಿದ್ದ ರಾತ್ರಿಯೇ ನಾನು ನನ್ನ ಮೊದಲ ಪತಿ, ಅಂಜು ಕುಮಾರ್ ಗೆ ಫೋನ್ ಮಾಡಿ ನನ್ನನ್ನು ಕರೆದೊಯ್ಯುವಂತೆ ಕೇಳಿಕೊಂಡೆ. ಆದುದರಿಂದ ಯಾರೂ ನನ್ನನ್ನು ಅಪಹರಿಸಿಲ್ಲ; ನಾನೇ ಸ್ವಂತ ಇಚ್ಛೆಯಿಂದ ಹೋಗಿದ್ದೆ; ನನಗೆ ನನ್ನ ಮೊದಲ ಪತಿ ಅಂಜುಕುಮಾರ್ ಜತೆಗೆ ಬದುಕಲು ಬಿಡಿ’ ಎಂದು ನವವಿವಾಹಿತೆ ಗಾಯತ್ರಿ ಬೇಡಿಕೊಂಡಿರುವುದಾಗಿ ವರದಿಯಾಗಿದೆ.
ಕಳೆದ ಸೆ.24ರಂದು ಗುಡೂರು ಗ್ರಾಮದ ಗಾಯತ್ರಿ ಮತ್ತು ಮಲ್ಲನಗೌಡ ಅವರ ವಿವಾಹವನ್ನು ಕುಟುಂಬದವರ ಸಮಕ್ಷಮ ಕುಷ್ಟಗಿತಾಲೂಕಿನ ಪುರದ ಸೋಮನಾಥ ದೇವಸ್ಥಾನದಲ್ಲಿ ನಡೆಸಲಾಗಿತ್ತು.
ಫಸ್ಟ್ ನೈಟ್ ನಂದು ಶೌಚಾಲಯಕ್ಕೆ ಹೋಗಿದ್ದಾಗ ವಧು ವನ್ನು ಅಪಹರಿಸಲಾಗಿತ್ತು ಎಂದು ಸುದ್ದಿಯಾಗಿರುವುದು ಸುಳ್ಳು ಎಂದು ಗಾಯತ್ರಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LokSabha; ರಾಹುಲ್ ಗಾಂಧಿಯನ್ನು ರಾಜ್ಯಕ್ಕೆ ಹೆಚ್ಚೆಚ್ಚು ಕರೆಯಿಸಬೇಕು: ವಿಜಯೇಂದ್ರ ವ್ಯಂಗ್ಯ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ
ಕೆಲವೆಡೆ ಹಿಂಸಾಚಾರ, ಕೈ ಕೊಟ್ಟ ಮತಯಂತ್ರ; ಬಿಸಿಲಿನಿಂದ ತಡವಾಗಿ ಬಂದ ಮತದಾರರು
MUST WATCH
ಹೊಸ ಸೇರ್ಪಡೆ
Rakshit Shetty: ʼರಿಚರ್ಡ್ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು
Sindhanur; ಹಾಸ್ಟೆಲ್ ವಿದ್ಯಾರ್ಥಿನಿಯರು ಅಸ್ವಸ್ಥ: ಆಸ್ಪತ್ರೆಗೆ ದಾಖಲು
IPL 2024; ಪಂಜಾಬ್ ವಿರುದ್ಧ ಸೋಲು; ಅಂಪೈರ್ ಜತೆ ವಾಗ್ವಾದಕ್ಕಿಳಿದ ಗೌತಮ್ ಗಂಭೀರ್