ಕೋವಿಡ್ ನಿಯಂತ್ರಣಕ್ಕೆ ಹೊಸ ಟಾಸ್ಕ್ ಪೋರ್ಸ್ ಕಮಿಟಿ ರಚನೆ : ಎಸ್.ಟಿ.ಸೋಮಶೇಖರ್
Team Udayavani, May 5, 2021, 2:53 PM IST
ಮೈಸೂರು : ಇಂದು ಮೈಸೂರಿನಲ್ಲಿ ಕೊರೊನಾ ಸಂಬಂಧ ಸಭೆ ಮಾಡಿದ್ದೇನೆ. ಮೈಸೂರಿನಲ್ಲಿ 9 ವಿಧಾನಸಭಾ ಕ್ಷೇತ್ರದ ರಿವ್ಯೂ ಮೀಟಿಂಗ್ ಮಾಡಿದ್ದೇನೆ ಎಂದು ಮೈಸೂರಿನಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದ್ದಾರೆ.
ಪಾಲಿಕೆಯಿಂದಲೂ ಕೋವಿಡ್ ನಿಯಂತ್ರಣ ಸಂಬಂಧ ಮಾಹಿತಿ ಪಡೆದಿದ್ದೇನೆ. ಕೋವಿಡ್ ನಿಯಂತ್ರಣಕ್ಕೆ ಹೊಸ ಟಾಸ್ಕ್ ಪೋರ್ಸ್ ಕಮಿಟಿ ರಚನೆ ಮಾಡಲಾಗುತ್ತದೆ. ಆಯಾ ಕ್ಷೇತ್ರದ ಶಾಸಕರೇ ಟಾಸ್ಕ್ ಪೋರ್ಸ್ ಕಮಿಟಿ ಅಧ್ಯಕ್ಷರಾಗಿರುತ್ತಾರೆ. ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಸೋಂಕು ನಿಯಂತ್ರಣಕ್ಕೆ ಕೆಲಸ ಮಾಡುತ್ತೇವೆ.
ಮೈಸೂರು ಜಿಲ್ಲೆಯಲ್ಲಿ ಸದ್ಯ 19KL ಆಕ್ಸಿಜನ್ ಇದೆ. ಮೈಸೂರಿಗೆ ಸದ್ಯದ ಬೇಡಿಕೆ ಪ್ರಕಾರ 48KL ಆಕ್ಸಿಜನ್ ಬೇಕಾಗಿದೆ. ಆಕ್ಸಿಜನ್ ವಿಚಾರದಲ್ಲಿ ಜನರು ಪ್ಯಾನಿಕ್ ಆಗಿದ್ದಾರೆ. ಸ್ವಲ್ಪ ಸಮಸ್ಯೆಯಾದ್ರು ಆಕ್ಸಿಜನ್ ಬೇಕು ಅಂತ ಕೇಳ್ತಿದ್ದಾರೆ. ಆದ್ರೆ ಯಾರಿಗೆ ಆಕ್ಸಿಜನ್ ಬೇಕಾಗಿದೆ ಅಂತ ಡಾಕ್ಟರ್ ಮಾತ್ರ ಹೇಳೋಕೆ ಸಾಧ್ಯ.
ಚಾಮರಾಜನಗರ ಪ್ರಕರಣದ ಬಗ್ಗೆ ನಾನು ಮಾತನಾಡೋಲ್ಲ. ಸರ್ಕಾರ ಈಗ ತನಿಖಾಧಿಕಾರಿ ನೇಮಿಸಿ ವಿಚಾರಣೆಗೆ ಆದೇಶಿಸಿದೆ. ವಿಚಾರಣೆ ಬಳಿಕ ಸರ್ಕಾರವೇ ಈ ಬಗ್ಗೆ ಕ್ರಮ ಕೈಗೋಳ್ಳಲಿದೆ. ಆಕ್ಸಿಜನ್ ಸಮಸ್ಯೆ ಬಗ್ಗೆ ಸರ್ಕಾರವೇ ಸಚಿವರಿಗೆ ಹೊಣೆ ನೀಡಿದೆ. ಶೀಘ್ರವಾಗಿ ಎಲ್ಲ ಸಮಸ್ಯೆ ಬಗೆಹರಿಯಲಿದೆ ಎಂದು ಮೈಸೂರಿನಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಹೇಳಿಕೆ ನೀಡಿದ್ದಾರೆ.