“ಘಟಸರ್ಪ ಕಂಗಾಲಾತಲೇ ಪರಾಕ್’
Team Udayavani, Oct 9, 2019, 3:03 AM IST
ರಾಣಿಬೆನ್ನೂರ: ಸುಕ್ಷೇತ್ರ ದೇವರಗುಡ್ಡದ ಕರಿಯಾಲದಲ್ಲಿ ಸೋಮವಾರ ವಿಜಯದಶಮಿ ಪ್ರಯುಕ್ತ ನಡೆದ ಕಾರ್ಣಿಕ ವಾಣಿ ಘಟಸರ್ಪ ಕಂಗಾ ಲಾತಲೇ ಪರಾಕ್’ ಎಂದಾಗಿದೆ. ಗೊರವಯ್ಯ ನಾಗಪ್ಪಜ್ಜ ಉರ್ಮಿಯವರು ಈ ಕಾರ್ಣಿಕ ನುಡಿದಿದ್ದು, ಅತಿವೃಷ್ಟಿ-ಅನಾವೃಷ್ಟಿಯಿಂದ ಮನುಕುಲ ಕಂಗಾಲು ಎನ್ನುವ ಸಾರವನ್ನು ಅರ್ಥೈಸಲಾಗಿದೆ.
ನವರಾತ್ರಿಯ ಒಂಭತ್ತು ದಿನವೂ ಕೇವಲ ಹಾಲು-ಹಣ್ಣು ಸೇವಿಸಿ ಉಪವಾಸ ವ್ರತ ಆಚರಿಸಿರುವ ಗೊರವಯ್ಯ ದಸರಾ ಹಬ್ಬದಂದು 25 ಅಡಿ ಎತ್ತರದ ಬಿಲ್ಲನ್ನೇರಿ ಕಾರ್ಣಿಕ ನುಡಿಯುತ್ತಾರೆ.