Karnataka Election: ವ್ಯಾಪಾರಸ್ಥರು, ಕಾರ್ಮಿಕರ ಬಳಿ ಗೋಪಾಲಯ್ಯ ಮತಯಾಚನೆ
Team Udayavani, May 5, 2023, 9:43 AM IST
ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಮಾರಪ್ಪನ ಪಾಳ್ಯ ವಾರ್ಡ್ನಲ್ಲಿರುವ ಆರ್ ಎಂಸಿ ಯಾರ್ಡ್ನಲ್ಲಿ ಗುರುವಾರ ಮಾರುಕಟ್ಟೆ ವರ್ತಕರು, ವ್ಯಾಪಾರಸ್ಥರು, ಹಾಗೂ ಕೂಲಿ ಕಾರ್ಮಿಕರ ಸಭೆಯಲ್ಲಿ ಭಾಗವಹಿಸಿ ಸಚಿವ ಕೆ.ಗೋಪಾಲಯ್ಯ ಮತ ಯಾಚಿಸಿದರು.
ಬಳಿಕ ಮಾತನಾಡಿದ ಅವರು, ಈ ಒಂದು ಮಾರುಕಟ್ಟೆ ದಾಸನಪುರಕ್ಕೆ ತೆರವು ಮಾಡಬೇಕು ಎಂದು ಅಂದು ಹೇಳಿದಾಗ ನಾನು ಮುಂದೆ ನಿಂತು ನಿಮ್ಮ ಕಷ್ಟ ಹಾಗೂ ಬವಣೆ ನೀಗಿಸಲು ಅಂದು ಹೆದ್ದಾರಿ ತಡೆ ಮಾಡಿ ಈ ಸ್ಥಳದಲ್ಲಿರುವ ನಿಮ್ಮೆಲ್ಲರ ಅಂಗಡಿಗಳನ್ನು ತೆರವು ಮಾಡದಂತೆ ಹೋರಾಟ ಮಾಡಿ ಉಳಿಸಿರುವೆ. ಜತೆಗೆ ನಿಮ್ಮ ಮಕ್ಕಳ ಶೈಕ್ಷಣಿಕ ಉದ್ಧಾರಕ್ಕಾಗಿ ಕ್ಷೇತ್ರದಲ್ಲಿ ಒಳ್ಳೆಯ ಗುಣಮಟ್ಟದ ಶಾಲೆ ಅಭಿವೃದ್ಧಿ ಮಾಡಿ ಉಚಿತ ಶಿಕ್ಷಣ ನೀಡುವಲ್ಲಿ ನಾನು ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮುಂದಾಗಿದ್ದೇವೆ. ಕೊರೊನಾ ಸಂಕಷ್ಟದಲ್ಲಿ ಫುಡ್, ಔಷಧ ಕಿಟ್ ಹಾಗೂ ಆಕ್ಸಿಜನ್ ಸೇರಿದಂತೆ ಹಲವು ರೀತಿಯ ಸಹಾಯ ಮಾಡಿದ್ದೇನೆ.
ಹೀಗಾಗಿ ತಾವೆಲ್ಲರೂ ತಪ್ಪದೆ ಬಿಜೆಪಿಗೆ ಮತ ಚಲಾಯಿಸುವ ಮೂಲಕ ನಮ್ಮನ್ನು ಅತಿ ಹೆಚ್ಚಿನ ಮತಗಳಿಂದ ಗೆಲ್ಲಿಸಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳ ಮಾಡಲು ಮುಂದಾಗಬೇಕು ಎಂದು ಕೋರಿದರು.
ಈ ವೇಳೆ ಮಾಜಿ ಶಾಸಕ ನೆ.ಲ. ನರೇಂದ್ರಬಾಬು, ಪಾಲಿಕೆ ಮಾಜಿ ಸದಸ್ಯ ಎಂ.ಮಹದೇವ್, ವಾರ್ಡ್ ಅಧ್ಯಕ್ಷ ಡಾ.ನಾಗೇಂದ್ರ, ಮುಖಂಡರಾದ ಮಲ್ಲಪ್ಪ, ಉಮಾಪತಿ ನಾಯ್ಡು, ಸಾಯಿರೆಡ್ಡಿ, ಪುಟ್ಟ ಸ್ವಾಮಿ, ರಾಘವೇಂದ್ರ ಸುರೇಶ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ