ಹಿಂಭಡ್ತಿ ತಪ್ಪಿಸಲು ಹೊಸ ಮಸೂದೆ
Team Udayavani, Oct 4, 2017, 6:35 AM IST
ಬೆಂಗಳೂರು: ಸುಪ್ರೀಂಕೋರ್ಟ್ನ ತೀರ್ಪಿನಿಂದಾಗಿ “ಹಿಂಭಡ್ತಿ’ ಆತಂಕ ಎದುರಿಸುತ್ತಿದ್ದ ಎಸ್ಸಿ/ಎಸ್ಟಿ ಸರಕಾರಿ ನೌಕರರ ಹಿತ ಕಾಯಲು ರಾಜ್ಯ ಸರಕಾರ “ಹೊಸ ಕಾನೂನಿ’ನ ಮೊರೆ ಹೋಗಿದೆ. ಈ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸುವ ಸಾಧ್ಯತೆ ಇದೆ.
1978ರಿಂದ ಮೀಸಲಾತಿ ಆಧಾರದಲ್ಲಿ ಭಡ್ತಿ ಪಡೆದಿರುವ ಎಸ್ಸಿ, ಎಸ್ಟಿ ಸರಕಾರಿ ನೌಕರರು ಈಗಾಗಲೇ ಪಡೆದ ಭಡ್ತಿಗೆ ಯಾವುದೇ ಧಕ್ಕೆಯಾಗದಂತೆ ಹೊಸ ಕಾಯ್ದೆಯ ಕರಡು ಸಿದ್ಧಪಡಿಸಲಾಗಿದೆ. ಈ ಮಸೂದೆಗೆ ಪರಿಶೀಲನ ಸಮಿತಿಯೂ ಒಪ್ಪಿಗೆ ನೀಡಿದೆ. ಭಡ್ತಿಯಲ್ಲಿ ಮೀಸಲಾತಿ ನೀಡುತ್ತಿರುವುದನ್ನು ರದ್ದುಗೊಳಿಸಿದ್ದ ಸುಪ್ರೀಂಕೋರ್ಟ್ ಭಡ್ತಿ ನೀಡಲಾಗಿರುವ ನೌಕರರಿಗೆ ಹಿಂಭಡ್ತಿ ನೀಡುವಂತೆ ಸೂಚಿಸಿತ್ತು.