ಗುಂಡ್ಲುಪೇಟೆ: ರೇಣುಕಾಚಾರ್ಯ ಕಾರಿನಲ್ಲಿ ದಾಖಲೆ ರಹಿತ 3 ಲಕ್ಷ ರೂ!
Team Udayavani, Apr 8, 2017, 9:34 AM IST
ಚಾಮರಾಜನಗರ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು ಚುನಾವಣಾ ಪ್ರಚಾರಕ್ಕೆ ಬಳಸಿದ್ದ ಕಾರಿನಲ್ಲಿ 3 ಲಕ್ಷ ರೂ.ಗೂ ಹೆಚ್ಚು ದಾಖಲೆ ರಹಿತ ಹಣ ಗುಂಡ್ಲುಪೇಟೆ ತಾಲೂ ಕಿನ ಹಿರಿಕಾಟಿ ಬಳಿ ಪತ್ತೆಯಾಗಿದ್ದು, ಚುನಾವಣಾಧಿಕಾರಿಗಳು ಕಾರು ಮತ್ತು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಶಿಂಡನಪುರ ಬಳಿ ಕಾಂಗ್ರೆಸ್ನವರಿಗೆ ಸೇರಿದ ಹಣ ಪತ್ತೆಯಾಗಿದೆ ಎಂಬ ವದಂತಿ ತಿಳಿದು ರೇಣುಕಾಚಾರ್ಯ ಪರಿಶೀಲನೆಗೆ ಹೋಗಿದ್ದರು. ಆದರೆ, ಅಲ್ಲಿ ಅಂತಹ ಪ್ರಕರಣ ಕಂಡು ಬರಲಿಲ್ಲ. ಸಂಜೆಯಾದರೂ ರೇಣುಕಾಚಾರ್ಯ ಕ್ಷೇತ್ರ ತೊರೆದಿಲ್ಲ ಎಂದು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಂತರ ರೇಣುಕಾಚಾರ್ಯ ಗುಂಡ್ಲುಪೇಟೆಗೆ ತೆರಳಿ, ತಾವು ಪ್ರಚಾರಕ್ಕೆ ಬಳಸುತ್ತಿದ್ದ ಕಾರನ್ನು ಬಿಟ್ಟು, ಸ್ವಂತ ಕಾರಿನಲ್ಲಿ ಮೈಸೂರಿನತ್ತ ಪ್ರಯಾಣ ಬೆಳೆಸಿದರು. ಆಗ ಬೆಳಿಗ್ಗೆಯಿಂದ ಅವರು ಬಳಸುತ್ತಿದ್ದ ಸ್ಕಾರ್ಪಿಯೋ ಕಾರು ಹಿಂಬಾಲಿಸಿತು. ಆ ಕಾರನ್ನು ಕಾಂಗ್ರೆಸ್ ಕಾರ್ಯಕರ್ತರು ಹಿರಿಕಾಟಿ ಬಳಿ ತಡೆದಾಗ ಕಾರಿನಲ್ಲಿ 2.96 ಲಕ್ಷ ರೂ. ನಗದು ಇದ್ದದ್ದು ಪತ್ತೆಯಾಯಿತು. ಮುಂದಿನ ಕಾರಿನಲ್ಲಿದ್ದ ರೇಣುಕಾಚಾರ್ಯ ಅಲ್ಲಿಂದ ಕಾಲ್ಕಿತ್ತರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು