ಸಂಕ್ರಾಂತಿಗೆ ಮಳೆಯ ಬರೆ: ಮೋಡ, ಮಳೆಯ ಕಣ್ಣುಮುಚ್ಚಾಲೆ: ರೈತರಲ್ಲಿ ಆತಂಕ
Team Udayavani, Jan 7, 2021, 11:48 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಸುಗ್ಗಿಯ ಸಂಭ್ರಮ ದಲ್ಲಿದ್ದ ರೈತರನ್ನು ಅಕಾಲಿಕ ವರ್ಷಧಾರೆ ಕಂಗಾಲಾಗಿಸಿದೆ. ಅಡಿಕೆ, ಉದ್ದು, ಕಾಫಿ, ಮೆಣಸು, ತೊಗರಿ ಬೆಳೆಗಾರರಿಗೆ “ಮಳೆಯ ಬರೆ’ ಬಿದ್ದಿದ್ದು, ಬದುಕು ಅತಂತ್ರವಾಗಿದೆ.
ದಕ್ಷಿಣ ಕನ್ನಡ, ಉಡುಪಿ, ಕೊಡಗು, ಹಾಸನ, ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಗಳಲ್ಲಿ ಬುಧವಾರ ಮಳೆ ಹೆಚ್ಚಿದ್ದರಿಂದ ಅಡಿಕೆ, ಕಾಫಿ ಬೆಳೆಗಾರರು ಆತಂಕಕ್ಕೆ ಒಳಗಾಗಿದ್ದಾರೆ. ಇದು ಅಡಿಕೆ ಕೊçಲು, ಒಣಗಿಸುವ ಮತ್ತು ಸುಲಿಯುವ ಸಮಯ. ಇನ್ನೂ ಮೂರ್ನಾಲ್ಕು ದಿನ ಮೋಡ ಮತ್ತು ಮಳೆಯ ವಾತಾವರಣ ಇರುವುದರಿಂದ ಅಡಿಕೆ ಒಣಗಿಸಲು ಭಾರೀ ಸಮಸ್ಯೆಯಾಗಲಿದೆ. ಜತೆಗೆ ಮಳೆ ನೀರು ಹಿಂಗಾರ, ಎಳೆಸೋಗೆಗಳ ಬುಡದಲ್ಲಿ ನಿಂತು ಬಿಸಿಲಿಗೆ ಬಿಸಿಯಾಗುವುದರಿಂದಲೂ ಅಡಿಕೆ ಮರಗಳಿಗೆ ಹಾನಿಯಾಗುತ್ತದೆ.
ಬೆಳೆಗಾರರ ಕಣ್ಣೀರು
ಕಾಫಿ ಕೊಯ್ಲು ಆರಂಭವಾಗಿದ್ದು, ಒಣಗಲು ಹಾಕಿದ್ದ ಕಾಫಿ ಬೀಜಗಳು ತೋಯ್ದಿವೆ. ಕಟಾವಿಗೆ ಬಾಕಿಯಿರುವ ಬೀಜಗಳೂ ಗುಣಮಟ್ಟ ಕಳೆದುಕೊಳ್ಳುವ ಸಾಧ್ಯತೆಯಿದೆ. ಉತ್ತರ ಕರ್ನಾಟಕದಲ್ಲಿ ತೊಗರಿ ಸುಗ್ಗಿ ಆರಂಭವಾಗಿದೆ. ಕಲಬುರಗಿ, ಯಾದಗಿರಿ, ವಿಜಯಪುರ ಮತ್ತಿತರ ಕಡೆ ಮೋಡ ಕವಿದ ವಾತಾವರಣ ತೊಗರಿ ಕಟಾವಿಗೆ ಸಮಸ್ಯೆ ಉಂಟು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
MUST WATCH
ಹೊಸ ಸೇರ್ಪಡೆ
Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ
Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್
Sandalwood: ಇದು ನಿಜಕ್ಕೂ ಫ್ಯಾಮಿಲಿ ಡ್ರಾಮಾ!
Lok Sabha Polls: ಈ ಬಾರಿಯ ಲೋಕಸಭಾ ಚುನಾವಣೆಗೆ ಪ್ರಿಯಾಂಕಾ ಗಾಂಧಿ ಸ್ಪರ್ಧಿಸಲ್ಲ… ವರದಿ
Sandalwood: ಧೀರೇನ್ ರೀ ಇಂಟ್ರೊಡಕ್ಷನ್