ಏಕಧರ್ಮ, ಏಕ ಸಂಸ್ಕೃತಿ ಹುನ್ನಾರ ವಿಜೃಂಭಿಸದಿರಲಿ: ಬರಗೂರು 


Team Udayavani, Nov 1, 2018, 6:00 AM IST

b-28.jpg

ಶಿಗ್ಗಾವಿ(ಗೊಟಗೋಡಿ): ನಮ್ಮದು ಬಹು ಸಂಸ್ಕೃತಿ, ಬಹು ಧರ್ಮಗಳ ದೇಶ. ಬಹುತ್ವವೇ ಭಾರತದ ಮೂಲಶಕ್ತಿ. ಆದರೆ, ಇತ್ತೀಚಿನ ದಿನಗಳಲ್ಲಿ ಕೆಲವು ಬೆಳವಣಿಗೆಗಳು ಭಾರತದ ಬಹುತ್ವಕ್ಕೆ ಧಕ್ಕೆ ತರುತ್ತಿವೆ. ಏಕಧರ್ಮ, ಏಕ ಸಂಸ್ಕೃತಿಯ ಹುನ್ನಾರಗಳು ವಿಜೃಂಭಿಸುತ್ತಿವೆ. ಇಂಥ ವಿಷಮ ಸನ್ನಿವೇಶಕ್ಕೆ ನಮ್ಮ ಜಾನಪದ ಉತ್ತರವಾಗಬಲ್ಲದು ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. 

ಬುಧವಾರ ನಡೆದ ಕರ್ನಾಟಕ ಜಾನಪದ ವಿವಿಯ ನಾಲ್ಕನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಧರ್ಮ, ಜಾತಿ, ರಾಜಕೀಯ ಪಕ್ಷಗಳು ಸಮಾಜ ಒಡೆಯುವ ಕೆಲಸ ಮಾಡುತ್ತಿವೆ. ಆದರೆ, ಎಲ್ಲರನ್ನೂ ಒಂದುಗೂಡಿಸುವ ಶಕ್ತಿ ಇರುವುದು ಕಲೆಗೆ ಮಾತ್ರ. ಬಹು ಧಾರ್ಮಿಕತೆ, ಬಹುಸಂಸ್ಕೃತಿ ಜನಪದದಲ್ಲಿದೆ. ಜಾನಪದ ಬಹುಸಂಸ್ಕೃತಿಯ ಒಕ್ಕೂಟ. ಇಲ್ಲಿ ಏಕಧರ್ಮವಿಲ್ಲ. ಸಾಂಸ್ಥಿಕ ಧರ್ಮವೂ ಇಲ್ಲ. ಇಲ್ಲಿರುವುದು ಭಕ್ತಿ ಪ್ರಧಾನ ಧಾರ್ಮಿಕತೆ ಮಾತ್ರ. ಜಾನಪದದಲ್ಲಿ ಮಾನವೀಯ ಸಂಬಂಧ ಹಾಗೂ ಸಾಮರಸ್ಯಗಳಿಗೆ ಆದ್ಯತೆ ಇದೆಯೇ ಹೊರತು ಅಮಾನವೀಯತೆಯ ಸಂಘರ್ಷಕ್ಕಲ್ಲ. ಈ ದೃಷ್ಟಿಯಿಂದ
ಸಂಕುಚಿತ ಏಕಸಂಸ್ಕೃತಿ ಸ್ಥಾಪನೆಯ ಆಕ್ರಮಣಶೀಲತೆಗೆ ಜಾನಪದದ ಬಹುಸಂಸ್ಕೃತಿ, ಸಾಮರಸ್ಯ ಉತ್ತರವಾಗಬಲ್ಲದು ಎಂದರು.

ಅಭಿವೃದ್ಧಿಗೆ “ಕೊಕ್ಕೇಶ್ವರ’ರ ಕಾಟ: ಜಾನಪದ ವಿವಿ ವಿಶಿಷ್ಟ ವಿಶ್ವವಿದ್ಯಾಲಯ. ಇಲ್ಲಿ ಬೆವರಿನ ಸಂಸ್ಕೃತಿಯೇ ಮೂಲಧಾತು. ವಿವಿ, ಶ್ರಮ ಸಂಸ್ಕೃತಿಯ ಪ್ರತೀಕವಾಗಿ ಬೆಳೆಯಬೇಕೆಂದರೆ ಸರ್ಕಾರ ಇಂಥ ವಿವಿಗಳಿಗೆ ಸಾಕಷ್ಟು ಅನುದಾನ ಕೊಡಬೇಕು. ಆದರೆ, ವಿಧಾನಸೌಧದಲ್ಲಿ ಕೆಲಸ ಮಾಡಿಸಿಕೊಳ್ಳಲು ಹಲವರಿಗೆ ವೈರಾಗ್ಯ ಮೂಡಿದೆ. ಏಕೆಂದರೆ ಅಲ್ಲಿ “ಕೊಕ್ಕೇಶ್ವರರು’ ಜಾಸ್ತಿ ಇದ್ದಾರೆ.
“ಕೊಕ್ಕೇಶ್ವರ’ರನ್ನು ಗೆದ್ದು ಅನುದಾನ ತರುವ ಸಾಹಸ ಮಾಡಬೇಕಾಗಿರುವುದು ದುರಂತದ ಸಂಗತಿ ಎಂದರು. 

ವಿತ್ತದತ್ತ ವಿವಿ ಚಿತ್ತ: ವಿವಿಗಳು ಇಂದು “ವಿತ್ತ’ ವಿವಿಗಳಾಗಿ ಮಾರ್ಪಾಡಾಗಿವೆ. ವಿತ್ತ, ವಿವಿಗಳ ಪಿತ್ತ ಏರಿಸಿ ಬಿಟ್ಟಿವೆ. ವಿತ್ತವೇ ಉತ್ತಮವೆಂದು ತಿಳಿದ ಕೋರ್ಸ್‌ ಗಳಿಗೆ ಆದ್ಯತೆ ಸಿಗುತ್ತಿದೆ. ವಿವಿಗಳ ಗುರಿ ಶಿಕ್ಷಣ ಮಾರುಕಟ್ಟೆ ನಿರ್ಮಿಸುವುದಾಗಬಾರದು ಎಂದರು.
ಕುಲಪತಿ ಪ್ರೊ| ಡಿ.ಬಿ.ನಾಯಕ, ಕುಲಸಚಿವರಾದ ಚಂದ್ರಶೇಖರ್‌, ಡಾ| ಎಂ.ಎನ್‌.ವೆಂಕಟೇಶ, ವಿವಿ ಶೈಕ್ಷಣಿಕ ಪರಿಷತ್‌ ಶ್ರೀರಾಮ ಹಿಟ್ಟಣ್ಣನವರ ಇದ್ದರು.

ಡಾ| ಗೌರವ ಹೆಚ್ಚಿಸಿದೆ ಗೌರವ ಡಾಕ್ಟರೇಟ್‌ಗಳು ಗೌರವ ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಜಾನಪದ ವಿವಿ ಪ್ರತಿಭಾವಂತ ಕಲಾವಿದ ಟಿ.ಬಿ.ಸೊಲಬಕ್ಕನವರ್‌ ಅವರಿಗೆ ಗೌರವ ಡಾಕ್ಟರೇಟ್‌ ಕೊಟ್ಟು “ಗೌರವ ಡಾಕ್ಟರೇಟ್‌’ನ ಗೌರವ ಹೆಚ್ಚಿಸುವ ಕಾರ್ಯ ಮಾಡಿದೆ. ಸರ್ಕಾರ, ಪದವಿಯಲ್ಲಿ ಜನಪದವನ್ನು ಒಂದು ಐಚ್ಛಿಕ ವಿಷಯವನ್ನಾಗಿ ಸೇರ್ಪಡೆ ಮಾಡಬೇಕು. ಆಗ ಜನಪದ ಜ್ಞಾನವೂ ಉಳಿಯುತ್ತದೆ. ಅಧ್ಯಯನ ಮಾಡಿದವರಿಗೆ ಅಷ್ಟಾದರೂ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ ಎಂದು ಸಾಹಿತಿ ಬರಗೂರ ರಾಮಚಂದ್ರಪ್ಪ ಹೇಳಿದರು.

ಟಾಪ್ ನ್ಯೂಸ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

10-fusion

UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

9-fusion

Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.