ಸಚಿವ ರಮನಾಥ್ ರೈ ಅಪ್ತರಿಬ್ಬರ ಕಚೇರಿಗಳ ಮೇಲೆ ಐಟಿ ದಾಳಿ
Team Udayavani, May 9, 2018, 4:22 PM IST
ಮಂಗಳೂರು:ಚುನಾವಣಾ ರಣ ಕಣದಲ್ಲಿ ಮತಬೇಟೆಯ ಹೋರಾಟ ತೀವ್ರವಾಗಿರುವ ವೇಳೆ ಯಲ್ಲೇ ಐಟಿ ಅಧಿಕಾರಿಗಳು ರಾಜಕಾರಣಿಗಳಿಗೆ ಶಾಕ್ ನೀಡುತ್ತಿದ್ದಾರೆ. ಮಂಗಳೂರಿನಲ್ಲಿ ಸಚಿವ ರಮನಾಥ ರೈ ಅವರ ಆಪ್ತರಿಬ್ಬರ ಕಚೇರಿಗಳ ಮೇಲೆ ಬುಧವಾರ ದಾಳಿ ನಡೆಸಿ ದಾಖಲೆಗಳ ಪರೀಶೀಲನೆ ನಡೆಸಲಾಗಿದೆ.
ರೈ ಆಪ್ತರಾದ ಸುಧಾಕರ್ ಶೆಟ್ಟಿ ಅವರ ಕಾವೂರಿನಲ್ಲಿರುವ ಮೆಗ್ರೋಡಿ ಕನ್ಸ್ಟ್ರಕ್ಷನ್ ಮತ್ತು ಬಂಟ್ವಾಳದ ಮೇಲ್ಕಾರ್ ಬಳಿ ಸಂಜೀವ್ ಪೂಜಾರಿ ಅವರ ಬಿರ್ವ ಸೆಂಟರ್ನ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ದಾಳಿ ಕುರಿತಾಗಿ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ರಮನಾಥ ರೈ ಅವರು ಸ್ಪರ್ಧಿಸುತ್ತಿರುವ ಬಂಟ್ವಾಳದಲ್ಲಿ ಈ ಬಾರಿ ಜಿದ್ದಾಜಿದ್ದಿನ ವಾತಾವರಣ ನಿರ್ಮಾಣವಾಗಿದೆ.