Japan:ಭೂಕಂಪ ಸ್ಥಳದಿಂದ ಬೆಳಗ್ಗೆ ಹೊರಟ್ವಿ, ಮಧ್ಯಾಹ್ನ ಅಲ್ಲಿ ಭೂಮಿ ಕಂಪಿಸಿತು!

ಭೂಕಂಪದಿಂದ ಅದೃಷ್ಟವಶಾತ್‌ ಪಾರಾದ ಕನ್ನಡಿಗ ಸಿರೀಶ್‌ ಕುಟುಂಬದ ಅನುಭವ

Team Udayavani, Jan 2, 2024, 6:20 AM IST

1-sadsdas

ಉದಯವಾಣಿ ಸಮಾಚಾರ.ಬೆಂಗಳೂರು: ” ರಜೆ ಇತ್ತು. ಹೊಸ ವರ್ಷ ಆಚರಣೆಗೆಂದು ಅಲ್ಲಿಗೆ ಹೋಗಿದ್ದೆವು. ಬೆಳಗ್ಗೆಯಷ್ಟೇ ಹೊರಟು ವಾಪಸ್‌ ಬರುತ್ತಿದ್ದೆವು. ಮಧ್ಯಾಹ್ನ ಆಗುವಷ್ಟರಲ್ಲಿ ಅಲ್ಲಿ ಭಾರೀ ಭೂಕಂಪ ಸಂಭವಿಸಿತು…’

ಇದು ಜಪಾನ್‌ ರಾಜಧಾನಿ ಟೋಕಿ ಯೋದ ಐಟಿ ಕಂಪನಿಯೊಂದರಲ್ಲಿ ಪ್ರಾಜೆಕ್ಟ್ ಮ್ಯಾನೇಜರ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಮೈಸೂರು ಮೂಲದ ಸಿರೀಶ್‌ ಚಂದ್ರ ಶೇಖರ್‌ ಅವರ ನಿಟ್ಟುಸಿರು. ಭೂಕಂಪ ಸಂಭವಿಸಿದ ಪೂರ್ವ ಜಪಾನ್‌ನ ಇಶಿಕಾವ ಪ್ರಾಂತದಿಂದ ಪಶ್ಚಿಮದ ಟೋಕಿಯೋಗೆ ಪ್ರಯಾಣಿಸುತ್ತ ಮಾರ್ಗ ಮಧ್ಯೆಯೇ ‘ಉದಯವಾಣಿ’ ಜತೆ ಮಾತನಾಡಿದ ಅವರು ತಮ್ಮ ಅನುಭವವನ್ನು ತೆರೆದಿ ಟ್ಟರು. ಅದನ್ನು ಅವರ ಮಾತುಗಳಲ್ಲೇ ಓದಿ..

ಹೊಸ ವರ್ಷಾಚರಣೆಗೆಂದು ಹೋಗಿದ್ವಿ. ಅದು ಟೋಕಿಯೋದಿಂದ ಪಶ್ಚಿಮಕ್ಕೆ ಇರುವ ಇಶಿಕಾವ ಪ್ರಾಂತ. ನಾನು, ನನ್ನ ಪತ್ನಿ, 10 ತಿಂಗಳ ಮಗಳು ಇದ್ವಿ. ಹೊಸವರ್ಷ ಸಂಭ್ರಮ ಮುಗಿಸಿ ಇಶಿಕಾವದಿಂದ 30 ಕಿ.ಮೀ. ದೂರದ ಹಿಮಿ ಎಂಬಲ್ಲಿಂದ ಸೋಮವಾರ ಬೆಳಗ್ಗೆ ವಾಪಸ್‌ ಟೋಕಿಯೋಗೆ ಹೊರಟಿದ್ವಿ.

ಸುಮಾರು 340 ಕಿ.ಮೀ. ಪ್ರಯಾ ಣಿಸಿ ಮಧ್ಯಾಹ್ನ ಊಟಕ್ಕೆಂದು ನಿಲ್ಲಿ ಸಿದ್ವಿ. ಆಗ ಭೂಕಂಪ ಮುನ್ನೆಚ್ಚರಿಕೆ ಸಂದೇಶ ನನ್ನ ಮೊಬೈಲ್‌ಗೆ ಬಂತು. ಇಲ್ಲಿ ಸಾಮಾನ್ಯವಾಗಿ ಭೂಕಂಪ ಸಂಭ ವಿಸುವ 2-3 ನಿಮಿಷ ಮುನ್ನ ಈ ರೀತಿ ಸಂದೇಶ ಬರುತ್ತದೆ. ಸೂಕ್ತ ಸುರಕ್ಷ ಕ್ರಮ ಕೈಗೊಳ್ಳುವಂತೆ ಸೂಚನೆ ಇರು ತ್ತದೆ. ಈ ಬಾರಿ ಸಂದೇಶ ಬಂದು 4-5 ನಿಮಿಷ ಆದರೂ ಯಾವುದೇ ಕಂಪನದ ಅನುಭವ ಆಗಲಿಲ್ಲ. ಯಾವುದೋ ಪರೀ ಕ್ಷಾರ್ಥ ಸಂದೇಶ ಇರಬೇಕೆಂದು ಸುಮ್ಮ ನಾದೆ. 10 ನಿಮಿಷ ಕಳೆಯುವಷ್ಟರಲ್ಲಿ ಭೂಕಂಪನದ ಅನುಭವ ಆಯಿತು. ಇಶಿಕಾವ ಪ್ರಾಂತದ ಕರಾವಳಿ ಭಾಗದ ನ್ಯಾಂಟೋ ಎಂಬಲ್ಲಿ ಕೇಂದ್ರೀಕೃತವಾಗಿತ್ತು 7.5 ತೀವ್ರತೆಯ ಭಾರೀ ಭೂಕಂಪ. ನಾವು ಆಗಲೇ ಜಪಾನ್‌ ಪರ್ವತ ಶ್ರೇಣಿಯನ್ನು ದಾಟಿ ಬಂದಿದ್ದೆವು. ನಾವು ಅದೃಷ್ಟವಶಾತ್‌ ಭೂಕಂಪಕ್ಕೆ ಸಿಲುಕದೆ ಪಾರಾದ್ವಿ ಅನ್ನಿಸಿತು…
ಕನ್ನಡಿಗರು ಸೇಫ್: ಜಪಾನ್‌ನಲ್ಲಿ ಸುಮಾರು 50 ಸಾವಿರ ಕನ್ನಡಿಗರಿದ್ದಾರೆ. ಈ ಪೈಕಿ ಸುಮಾರು 40 ಸಾವಿರ ಮಂದಿ ಪೂರ್ವ ಭಾಗದ ಟೋಕಿಯೋದಲ್ಲೇ ಇದ್ದಾರೆ. ಭೂಕಂಪ ಸಂಭವಿಸಿದ್ದು ಪಶ್ಚಿ ಮದ ಇಶಿಕಾವ ಪ್ರಾಂತದಲ್ಲಿ. ಹಾಗಾಗಿ, ಇಲ್ಲಿ ಬಹುತೇಕ ಕನ್ನಡಿಗರು ಸುರಕ್ಷಿತ ವಾಗಿದ್ದಾರೆ. ಇಶಿಕಾವದಲ್ಲಿ ಸಿಲುಕಿದ್ದ ಇನ್ನೊಂದು ಕನ್ನಡಿಗ ಕುಟುಂಬವೂ ಸುರಕ್ಷಿತವಾಗಿ ಪಾರಾಗಿದೆ.

ಇನ್ನೂ ಏಳು ದಿನ ಇರಲಿದೆ ಭೀತಿ
ಇಶಿಕಾವಾದಲ್ಲಿ 7.6 ತೀವ್ರತೆಯಲ್ಲಿ ಭೂಮಿ ಕಂಪಿಸಿರುವ ಕಾರಣ, ಮುಂದಿನ 3ರಿಂದ 7 ದಿನಗಳ ಕಾಲ ಪ್ರಬಲ ಪಶ್ಚಾತ್‌ ಕಂಪನಗಳು ಸಂಭವಿಸಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಎಲ್ಲೆಲ್ಲಿ ಭೂಮಿಯು ತೀವ್ರವಾಗಿ ಕಂಪಿಸಿದೆಯೋ ಅಲ್ಲಿ ಕಟ್ಟಡಗಳು ಕುಸಿದುಬೀಳುವ ಮತ್ತು ಭೂಕುಸಿತಗಳು ಸಂಭವಿಸುವ ಭೀತಿಯೂ ಇದೆ. ಹೀಗಾಗಿ, ಎಲ್ಲರೂ ಎಚ್ಚರಿಕೆ ವಹಿಸಿ ಎಂದು ಸೂಚಿಸಲಾಗಿದೆ.

2004ರ ಸುನಾಮಿ ನೆನಪಿಸಿದ ಭೂಕಂಪ!
2024ರ ಜ.1ರಂದು ಜಪಾನ್‌ನಲ್ಲಿ ನಡೆದ ಭೂಕಂಪ ಮತ್ತು ಸುನಾಮಿಯ ಆತಂಕವು 2004ರ ಸುನಾಮಿಯನ್ನು ನೆನಪಿಸಿತು. 2004ರ ಡಿ.26ರಂದು ಇಡೀ ಜಗತ್ತೇ ಕ್ರಿಸಮಸ್‌ ಮುಗಿಸಿ, ಹೊಸ ವರ್ಷದ ಆಗಮನಕ್ಕೆ ಕಾದಿತ್ತು. ಅದೇ ದಿನ ಜಗತ್ತು ಹಿಂದೆಂದೂ ಕಂಡರಿಯದ ಭೀಕರ ಪ್ರಾಕೃತಿಕ ವಿಕೋಪಕ್ಕೆ ಸಾಕ್ಷಿಯಾಯಿತು. ಸಮುದ್ರದಲ್ಲಿ ಎದ್ದ ರಾಕ್ಷಸ ಅಲೆಗಳು ಒಂದೇ ದಿನ 2.50 ಲಕ್ಷ ಜನರನ್ನು ಬಲಿಪಡೆಯಿತು. ಇಂಡೋನೇಷ್ಯಾದ ಸುಮಾತ್ರ ಕರಾವಳಿಯಲ್ಲಿ ಸಮುದ್ರದಡಿ 9.0 ತೀವ್ರತೆಯಲ್ಲಿ ಸಂಭವಿಸಿದ ಕಂಪನವು ಕ್ಷಣಮಾತ್ರದಲ್ಲಿ ಲಕ್ಷಾಂತರ ಜೀವಗಳನ್ನು ಕಸಿದಿತ್ತು.

ಟಾಪ್ ನ್ಯೂಸ್

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್‌.ಡಿ. ಕುಮಾರಸ್ವಾಮಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.