ಜಿಂದಾಲ್: ಸಂಪುಟದಲ್ಲಿ ಚರ್ಚಿಸಿ ತೀರ್ಮಾನ
Team Udayavani, Jun 13, 2019, 3:00 AM IST
ಬೆಂಗಳೂರು: ಜಿಂದಾಲ್ ಸಂಸ್ಥೆಗೆ ಭೂಮಿ ಪರಭಾರೆ ವಿಚಾರದ ಬಗ್ಗೆ ಪುನರ್ ಪರಿಶೀಲಿಸಿ ಮತ್ತೆ ಸಂಪುಟದಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, 2004-05, 2006-07ರಲ್ಲಿ ಲೀಸ್ ಕಂ ಸೇಲ್ ಮಾಡಲಾಗಿತ್ತು. ಅದರನ್ವಯ ನಾವು ಸಚಿವ ಸಂಪುಟದಲ್ಲಿ ತೀರ್ಮಾನ ಮಾಡಿದ್ದೆವು. ನಮ್ಮ ನಿರ್ಧಾರದ ಬಗ್ಗೆ ಕೆಲವು ಗೊಂದಲ, ಅನುಮಾನಗಳು ಮೂಡಿವೆ. ಹೀಗಾಗಿ, ಮರು ಪರಿಶೀಲನೆ ಮಾಡುವಂತೆ ಮುಖ್ಯಮಂತ್ರಿಯವರು ಸೂಚಿಸಿದ್ದಾರೆ ಎಂದು ಹೇಳಿದರು.
ಸಂಶಯ ಪರಿಹಾರಕ್ಕಾಗಿ ನಾವು ನಿರ್ಧಾರ ತಡೆ ಹಿಡಿದಿದ್ದೇವೆ. ಮತ್ತೆ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಸಂಪುಟ ಸಭೆ ಕೈಗೊಳ್ಳುವ ತೀರ್ಮಾನಕ್ಕೆ ನಾವು ಬದ್ಧ ಎಂದು ತಿಳಿಸಿದರು.